ಬೆಂಗಳೂರಿನಲ್ಲಿ ಲಾಕ್‌ಡೌನ್‌ ಹೇರುವಂತಿದ್ದರೆ ನಮ್ಮ ಸಲಹೆಯನ್ನೂ ಪಡೆಯಿರಿ: ಹೋಟೆಲ್‌ಗಳ ಸಂಘ ಆಗ್ರಹ

'​​ಮೂರನೇ ಅಲೆಯ ಹಿನ್ನೆಲೆಯಲ್ಲಿ ಹೋಟೆಲ್‌ಗಳನ್ನು ಮುಚ್ಚಿದರೆ ನಮ್ಮ ಕಾರ್ಮಿಕರ ವೇತನ, ಕಟ್ಟಡದ ಬಾಡಿಗೆ, ವಿದ್ಯುತ್‌ ಮತ್ತು ನೀರಿನ ಬಿಲ್‌, ಲೈಸೆನ್ಸ್‌ ಶುಲ್ಕ ಮುಂತಾದವುಗಳನ್ನು ಸರಕಾರದ ವತಿಯಿಂದ ಕೊಡುವ ವ್ಯವಸ್ಥೆಯಾಗಬೇಕು' - ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದ ಒತ್ತಾಯ

ಬೆಂಗಳೂರಿನಲ್ಲಿ ಲಾಕ್‌ಡೌನ್‌ ಹೇರುವಂತಿದ್ದರೆ ನಮ್ಮ ಸಲಹೆಯನ್ನೂ ಪಡೆಯಿರಿ: ಹೋಟೆಲ್‌ಗಳ ಸಂಘ ಆಗ್ರಹ
Linkup
: ಲಾಕ್‌ಡೌನ್‌ ವಿಚಾರದಲ್ಲಿ ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ನಮ್ಮೊಂದಿಗೂ ವಿಚಾರ ವಿನಿಮಯ ಮಾಡಬೇಕು ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸರಕಾರಕ್ಕೆ ಮನವಿ ಸಲ್ಲಿಸಿದೆ. 'ಕೋವಿಡ್‌ ಮೊದಲ ಮತ್ತು ಎರಡನೇ ಅಲೆ ಹಾವಳಿಯಿಂದ ನಮ್ಮ ಉದ್ಯಮಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಎಲ್ಲಾ ಹೋಟೆಲ್‌ ಮಾಲೀಕರು ಕೋವಿಡ್‌ ನಡವಳಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಿ ಸರಕಾರದ ಜತೆ ಸದಾ ಕೈಜೋಡಿಸಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಲಾಕ್‌ಡೌನ್‌ ಅಥವಾ ನೈಟ್‌ ಕರ್ಫ್ಯೂ ಜಾರಿಗೊಳಿಸುವುದಿದ್ದರೆ ನಮ್ಮ ಸಲಹೆಯನ್ನೂ ಪಡೆಯಬೇಕು' ಎಂದು ಸಂಘದ ಅಧ್ಯಕ್ಷ ಪಿ. ಸಿ. ರಾವ್‌ ಒತ್ತಾಯಿಸಿದ್ದಾರೆ. 'ವ್ಯಾಕ್ಸಿನೇಷನ್‌ ಪ್ರಮಾಣವನ್ನು ಹೆಚ್ಚಿಸಬೇಕು. ವ್ಯಾಪಾರ ಅವಧಿಯನ್ನು ಕಡಿಮೆ ಮಾಡಿದಷ್ಟೂ ಜನಸಂದಣಿ ಹೆಚ್ಚುತ್ತದೆ. ಆದ್ದರಿಂದ ಆ ಅವಧಿಯನ್ನು ಕಡಿಮೆ ಮಾಡುವುದು ಸೂಕ್ತವಲ್ಲ' ಎಂದು ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘ ಅಭಿಪ್ರಾಯಪಟ್ಟಿದೆ. 'ಮೂರನೇ ಅಲೆಯ ಹಿನ್ನೆಲೆಯಲ್ಲಿ ಹೋಟೆಲ್‌ಗಳನ್ನು ಮುಚ್ಚಿದರೆ ನಮ್ಮ ಕಾರ್ಮಿಕರ ವೇತನ, ಕಟ್ಟಡದ ಬಾಡಿಗೆ, ವಿದ್ಯುತ್‌ ಮತ್ತು ನೀರಿನ ಬಿಲ್‌, ಲೈಸೆನ್ಸ್‌ ಶುಲ್ಕ ಮುಂತಾದವುಗಳನ್ನು ಸರಕಾರದ ವತಿಯಿಂದ ಕೊಡುವ ವ್ಯವಸ್ಥೆಯಾಗಬೇಕು. ಅನಗತ್ಯವಾಗಿ ಅಧಿಕಾರಿಗಳಿಂದ ಹಾಗೂ ಕೆಲವು ಇಲಾಖೆಗಳಿಂದ ಹೆಚ್ಚಿನ ತೊಂದರೆಯಾಗದಂತೆ ತಡೆಯಬೇಕು' ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.