ರೈತರ ಸಾಲ ಮರುಪಾವತಿ ಅವಧಿ 2 ತಿಂಗಳು ಮುಂದೂಡಿಕೆ; ಸಿಎಂ ಹೇಳಿದ್ದೊಂದು, ಆದೇಶದಲ್ಲಿ ಮತ್ತೊಂದು!

ಸಾಲ ಮರು ಪಾವತಿ ಅವಧಿಯನ್ನು 3 ತಿಂಗಳು ಕಾಲ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ಕೋವಿಡ್‌ ಪ್ಯಾಕೇಜ್‌ ಘೋಷಣೆ ಸಂದರ್ಭದಲ್ಲಿ ಘೋಷಿಸಿದ್ದರು. ಆದರೆ ಆದೇಶದಲ್ಲಿ ಕೇವಲ 2 ತಿಂಗಳು ಮಾತ್ರ ಮುಂದೂಡಲಾಗಿದೆ.

ರೈತರ ಸಾಲ ಮರುಪಾವತಿ ಅವಧಿ 2 ತಿಂಗಳು ಮುಂದೂಡಿಕೆ; ಸಿಎಂ ಹೇಳಿದ್ದೊಂದು, ಆದೇಶದಲ್ಲಿ ಮತ್ತೊಂದು!
Linkup
ಬೆಂಗಳೂರು: ಸಹಕಾರಿ ಸಂಘ, ಸಂಸ್ಥೆಗಳಲ್ಲಿ ರೈತರು ಪಡೆದ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಸಾಲದ ಕಂತು ಮರು ಪಾವತಿಸುವ ಅವಧಿಯನ್ನು 2 ತಿಂಗಳು ಮುಂದೂಡಿ ರಾಜ್ಯ ಸರಕಾರ ಅಧಿಕೃತ ಆದೇಶ ಹೊರಡಿಸಿದೆ. ಸಾಲ ಮರು ಪಾವತಿ ಅವಧಿಯನ್ನು 3 ತಿಂಗಳು ಕಾಲ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೋವಿಡ್‌ ಪ್ಯಾಕೇಜ್‌ ಘೋಷಣೆ ಸಂದರ್ಭದಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ತಿಳಿಸಿದ್ದರು. ಆದರೆ, ಸಹಕಾರ ಇಲಾಖೆಯಿಂದ ಶುಕ್ರವಾರ ಹೊರಡಿಸಿದ ಅವಧಿಯಲ್ಲಿ ಈ ಸೌಲಭ್ಯವನ್ನು ಕೇವಲ 2 ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಅದರಂತೆ ಏಪ್ರಿಲ್‌ 1 ರಿಂದ ಜೂನ್‌ 30ರ ವರೆಗೆ ಕಂತು ಪಾವತಿಗೆ ಗಡುವು ಇರುವ ಸಾಲಕ್ಕೆ ಈ ವಿನಾಯಿತಿ ಅನ್ವಯವಾಗಲಿದೆ. ಈ ಅವಧಿಯ ಕಂತು ಪಾವತಿಸಲು ಜೂನ್‌ 30ರ ವರೆಗೆ ಕಾಲಾವಕಾಶ ನೀಡಲಾಗಿದೆ. ಆದರೆ, ಜುಲೈ 31ರ ವರೆಗೆ ಇದಕ್ಕೆ ಸಮಯ ನೀಡುವಂತೆ ಕೇಳಿಕೊಳ್ಳಲಾಗಿತ್ತು. ಸಿಎಂ ಕೂಡ ನೀಡುತ್ತಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದರು. ಆದರೆ ಆದೇಶದಲ್ಲಿ ಈ ವಿನಾಯಿತಿ ನೀಡಿಲ್ಲ.