ರಾಜೀವ್ ಗಾಂಧಿ ಪುಣ್ಯಸ್ಮರಣೆ; ರಕ್ಷಾ ರಾಮಯ್ಯ ನೇತೃತ್ವದಲ್ಲಿ ಪಡಿತರ ಕಿಟ್‌ ವಿತರಣೆ

ದೇಶದ ಮಾಹಿತಿ ತಂತ್ರಜ್ಞಾನ, ದೂರ ಸಂಪರ್ಕ ಕ್ಷೇತ್ರದಲ್ಲಿ ರಾಜೀವ್ ಗಾಂಧಿ ಅವರು ಮಾಡಿದ ಸಾಧನೆ ಅನನ್ಯ. ಅತಿ ಕಡಿಮೆ ವಯಸ್ಸಿನಲ್ಲಿ ಪ್ರಧಾನಮಂತ್ರಿಯಾಗಿ ಯುವ ಸಮೂಹಕ್ಕೆ ಮಾದರಿಯಾಗಿದ್ದರು. ಅವರು ಯುವ ಶಕ್ತಿಯ ಕಣ್ಮಣಿ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್‌ ರಕ್ಷಾ ರಾಮಯ್ಯ ಸ್ಮರಿಸಿಕೊಂಡರು.

ರಾಜೀವ್ ಗಾಂಧಿ ಪುಣ್ಯಸ್ಮರಣೆ; ರಕ್ಷಾ ರಾಮಯ್ಯ ನೇತೃತ್ವದಲ್ಲಿ ಪಡಿತರ ಕಿಟ್‌ ವಿತರಣೆ
Linkup
ಬೆಂಗಳೂರು: ಮಾಜಿ ಪ್ರಧಾನಿ ಪುಣ್ಯ ಸ್ಮರಣೆ ಅಂಗವಾಗಿ ಪ್ರದೇಶ ಯುವ ಕಾಂಗ್ರೆಸ್‌ನಿಂದ ಕೋವಿಡ್ ಸಂಕಷ್ಟದಲ್ಲಿರುವವರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು. ಟ್ರಾನ್ಸ್‌ಜೆಂಡರ್ಸ್‌, ವಿಕಲ ಚೇತನರು, ದೃಷ್ಟಿ ವಿಶೇಷ ಚೇತನರು ಬಡವರಿಗೆ ಯಶವಂತಪುರ, ದಾಸರಹಳ್ಳಿ, ಮಲ್ಲೇಶ್ವರ, ಶಾಂತಿನಗರ ಮತ್ತಿತರ ಭಾಗಗಳಲ್ಲಿ ದಿನಸಿ ಕಿಟ್‌ಗಳನ್ನು ನೀಡಲಾಯಿತು. ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ನೇತೃತ್ವದಲ್ಲಿ ಯುವ ಕಾಂಗ್ರೆಸ್ ಮುಖಂಡರು ಅರ್ಹರಿಗೆ ಕಿಟ್ ಗಳನ್ನು ತಲುಪಿಸಿದರು. ಬಳಿಕ ಮಾತನಾಡಿದ ರಕ್ಷಾ ರಾಮಯ್ಯ, ದೇಶದ ಮಾಹಿತಿ ತಂತ್ರಜ್ಞಾನ, ದೂರ ಸಂಪರ್ಕ ಕ್ಷೇತ್ರದಲ್ಲಿ ರಾಜೀವ್ ಗಾಂಧಿ ಅವರು ಮಾಡಿದ ಸಾಧನೆ ಅನನ್ಯ. ಅತಿ ಕಡಿಮೆ ವಯಸ್ಸಿನಲ್ಲಿ ಪ್ರಧಾನಮಂತ್ರಿಯಾಗಿ ಯುವ ಸಮೂಹಕ್ಕೆ ಮಾದರಿಯಾಗಿದ್ದರು. ಅವರು ಯುವ ಶಕ್ತಿಯ ಕಣ್ಮಣಿ ಎಂದು ಸ್ಮರಿಸಿಕೊಂಡರು.