ಭಾರತೀಯ ರೈಲ್ವೇ ಸ್ಟೇಷನ್ ಗಳಲ್ಲಿ ಪ್ಲಾಸ್ಟಿಕ್ ಟೀ ಕಪ್ ಗಳಿಗೆ ಬದಲಾಗಿ 'ಕುಲ್ಹಾಡ್'

ರೈಲ್ವೆ ನಿಲ್ದಾಣಗಳಲ್ಲಿ ಚಹಾ ಕಾಫಿ ಮಾರಾಟ ಮಾಡುವವರನ್ನು ನೀವು ನೋಡಿರುತ್ತೀರಿ. ಪ್ಲಾಸ್ಟಿಕ್ ಕಪ್‌ಗಳಲ್ಲಿ ಚಹಾ ನೀಡುತ್ತಾರೆ. ಆದರೆ ಇನ್ನು ಮುಂದೆ ಪ್ಲಾಸ್ಟಿಕ್‌ ಕಪ್ ಬದಲಿಗೆ ಮಣ್ಣಿನ ಲೋಟವನ್ನು ಬಳಸಲಾಗುವುದು.

ಭಾರತೀಯ ರೈಲ್ವೇ ಸ್ಟೇಷನ್ ಗಳಲ್ಲಿ ಪ್ಲಾಸ್ಟಿಕ್ ಟೀ ಕಪ್ ಗಳಿಗೆ ಬದಲಾಗಿ 'ಕುಲ್ಹಾಡ್'
Linkup
ಬದಲಾವಣೆಯ ಗಾಳಿ ಬೀಸುತ್ತಿದ್ದು, ಇದು ಮಾನವನ ಎಲ್ಲಾ ಕಾರ್ಯಗಳಲ್ಲಿ ಪ್ರತಿಫಲಿಸುತ್ತಿದೆ. ಜನ ಭೂಮಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಂತೆ, ಕೇಂದ್ರ ಸರ್ಕಾರ ಸಹ ಇದೇ ಹಾದಿಯಲ್ಲಿ ಸಾಗುತ್ತಿದೆ. ಆಳ್ವಾರ್ ನ ಧಿಗಾವರಾ ರೈಲ್ವೇ ಸ್ಟೇಷನ್ ನಲ್ಲಿ ಆಯೋಜಿಸಲಾದ ವಾಯುವ್ಯ ರೈಲ್ವೇ ಅಡಿಯಲ್ಲಿ ಹೊಸದಾಗಿ ಉದ್ಘಾಟಿಸಲಾದ ವಿದ್ಯುತ್ ಚಾಲಿತ ಧಿಗಾವರಾ- ಬಂಡಿಕುಯ್ ವಿಭಾಗದ ಸಮಾರಂಭದಲ್ಲಿ ಮಾತನಾಡಿದ ರೈಲ್ವೇ ಸಚಿವ ಪೀಯೂಷ್ ಗೋಯಲ್, ಭಾರತವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು, ಭಾರತೀಯ ರೈಲ್ವೇ ಈಗ ದೇಶಾದ್ಯಂತ ಪ್ರತಿಯೊಂದು ರೈಲ್ವೇ ನಿಲ್ದಾಣಗಳಲ್ಲೂ ಟೀಯನ್ನು ನಲ್ಲಿ (ಮಣ್ಣಿನ ಲೋಟ) ನೀಡಲು ಯೋಜಿಸಲಾಗಿದೆ ಎಂದಿದ್ದಾರೆ. ವರದಿಗಳ ಪ್ರಕಾರ, ದೇಶದಲ್ಲಿ ಸುಮಾರು 400 ರೈಲ್ವೇ ಸ್ಟೇಷನ್ ಗಳು ಕುಲ್ಹಾಡ್ ನಲ್ಲಿ ಟೀ ನೀಡುತ್ತಿದ್ದು, ಸರ್ಕಾರ ಭಾರತದ ಎಲ್ಲಾ ರೈಲ್ವೇ ಸ್ಟೇಷನ್ ಗಳಲ್ಲಿ ಕೇವಲ ಕುಲ್ಹಾಡ್ ನಲ್ಲೇ ಟೀ ನೀಡಲು ಉದ್ದೇಶಿಸಿದೆ. ತಮ್ಮ ಅನುಭವದಿಂದ ಮಾತನಾಡಿದ, ಗೋಯಲ್, ಕುಲ್ಹಾಡ್ ನಲ್ಲಿ ಕುಡಿಯುವ ಟೀ ರುಚಿಕರವಾಗಿದ್ದು, ಇದರ ರುಚಿ ನಿಜಕ್ಕೂ ಭಿನ್ನವಾಗಿರುತ್ತದೆ. 'ಕುಲ್ಹಾಡ್' ಪರಿಸರವನ್ನು ರಕ್ಷಿಸುತ್ತದೆ ಮತ್ತು ಇದರಿಂದ ಲಕ್ಷಾಂತರ ಮಂದಿಗೆ ಉದ್ಯೋಗ ದೊರೆಯಲಿದೆ ಎಂದಿದ್ದಾರೆ. ಪಿಟಿಐ ವರದಿಗಳ ಪ್ರಕಾರ, ವಾಯುವ್ಯ ರೈಲ್ವೇ ವಲಯ ಭಾರತೀಯ ರೈಲ್ವೇ ನಿಲ್ದಾಣಗಳಲ್ಲಿ ಹಸಿರು ಪೋಷಣೆಯ ಉತ್ಪನ್ನಗಳ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಅಳವಡಿಸಲು ಅಲ್ಲಿನ ಅಧಿಕಾರಿಗಳಿಗೆ ಸೂಚಿಸಿದೆ. ಇದರಿಂದಾಗಿ, ಈಗ 25 ಕ್ಕೂ ಅಧಿಕ ರೈಲ್ವೇ ಸ್ಟೇಷನ್ ಗಳು ಟೀ ಮತ್ತು ಇತರ ಆಹಾರ ಪದಾರ್ಥಗಳನ್ನು ಪರಿಸರ ಸ್ನೇಹಿ ಕುಲ್ಹಾಡ್ ಮತ್ತು ಪ್ಲೇಟ್ ಗಳು ಹಾಗೂ ಬೌಲ್ ಗಳಲ್ಲಿ ನೀಡುತ್ತಿವೆ. ಪ್ರಸ್ತುತ, ವರದಿಗಳ ಪ್ರಕಾರ, ವಾರಣಾಸಿ ಮತ್ತು ರಾಯ್ ಬರೇಲಿ ರೈಲ್ವೇ ನಿಲ್ದಾಣಗಳು ಈಗಾಗಲೇ ಪೂರೈಕೆಗಾಗಿ ಟೆರ್ರಾಕೋಟಾ ಉತ್ಪನ್ನಗಳನ್ನು ಬಳಸುತ್ತಿವೆ. To Read in English Click: