ಬೆಂಗಳೂರಿಗೆ ವರುಣಾಘಾತ; ಭಾರೀ ಮಳೆ ಸೃಷ್ಟಿಸಿದೆ ಅವಾಂತರ

ಭಾರೀ ಮಳೆಗೆ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿದ್ದು ಜನರು ಪರದಾಡುವಂತಾಗಿದೆ. ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರಿಗೆ ವರುಣಾಘಾತ; ಭಾರೀ ಮಳೆ ಸೃಷ್ಟಿಸಿದೆ ಅವಾಂತರ
Linkup
ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಹಲವು ಕಡೆಗಳಲ್ಲಿ ಮರಗಳು ಧರೆಗೆ ಉರುಳಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಗೋಡೆ ಕುಸಿತದಿಂದಾಗಿ ಕಾರುಗಳು ಕೂಡಾ ಜಖಂಗೊಂಡಿವೆ. ಕೋರಮಂಗಲ 6 ನೇ ಬ್ಲಾಕ್‌ನಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ. ಇದರ ಪರಿಣಾಮ ರಾತ್ರಿ ಇಡೀ ಅಲ್ಲಿಯ ನಿವಾಸಿಗಳು ಪರದಾಟ ನಡೆಸುವ ಸ್ಥಿತಿ ನಿರ್ಮಾನವಾಗಿದೆ. ಇದೀಗ ಕೊಳಚೆ ನೀರನ್ನು ಪೌರಕಾರ್ಮಿಕರ ಸಹಾಯದಿಂದ ಸ್ವಚ್ಛ ಮಾಡಲಾಗುತ್ತಿದೆ. ಮಳೆಯಿಂದಾಗಿ ಆರ್‌. ಆರ್‌ ನಗರ, ಮಲ್ಲೇಂಶ್ವರಂನಲ್ಲೂ ಮರಗಳು ಧರೆಗುರುಳಿವೆ. ನಾಗರಭಾವಿ ಏರಿಯಾದಲ್ಲೂ ಅವಾಂತರ ಸೃಷ್ಟಿಯಾಗಿದ್ದು ಜನರು ಪರದಾಡುವಂತಾಗಿದೆ. ಎಚ್‌ಎಎಲ್ ರಮೇಶ್ ನಗರದ ಗೋಡೆ ಕುಸಿತ ಉಂಟಾಗಿದೆ. ಮಹದೇವಪುರದಲ್ಲಿ 10 ಅಡಿ ಕಾಪೌಂಡ್ ಕುಸಿದಿದೆ. ಜೆಸಿ ನಗರದಲ್ಲೂ ಹಲವು ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ನೀರಿನಲ್ಲಿ ಅಂಗಡಿಯಲ್ಲಿದ್ದ ವಸ್ತುಗಳು ತೇಲಾಡುತ್ತಿವೆ. ಕೆಂಚೇನಹಳ್ಳಿಯಲ್ಲಿ ರಾಜಕಾಲುವೆ ನೀರು ಕೊಟ್ಟಿಗೆಗೆ ನುಗ್ಗಿ 10 ಜಾನುವಾರುಗಳು ಸಾವನ್ನಪ್ಪಿವೆ. ಹೊಯ್ಸಲ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜಯನಗರದ ಎರಡನೇ ಹಂತದ ಅಪೋಲೋ ಅಸ್ಪತ್ರೆಯ ಹತ್ತಿರದಲ್ಲಿ ಕೊಂಬೆ ಬಿಂದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಬೆಳಗ್ಗೆ 4.30 ಗಂಟೆಗೆ ಅಂಗಡಿ ತೆರೆಯಲು ಹೋಗುತ್ತಿರುವಾಗ ಈ ಘಟನೆ ನಡೆದಿದೆ.