ಬೈಕ್ ಆಕ್ಸಿಡೆಂಟ್‌ಗೆ ಸ್ನೇಹಿತ ನವೀನ್ ಕಾರಣ: ದೂರು ನೀಡಿದ ಸಂಚಾರಿ ವಿಜಯ್ ಸಹೋದರ

ವೇಗವಾಗಿ ಬೈಕ್ ಓಡಿಸುತ್ತಿದ್ದ ನವೀನ್ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಘಟನೆ ಬಗ್ಗೆ ಆರೋಪಿಸಿ ನವೀನ್ ವಿರುದ್ಧ ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ದೂರು ನೀಡಿದ್ದಾರೆ.

ಬೈಕ್ ಆಕ್ಸಿಡೆಂಟ್‌ಗೆ ಸ್ನೇಹಿತ ನವೀನ್ ಕಾರಣ: ದೂರು ನೀಡಿದ ಸಂಚಾರಿ ವಿಜಯ್ ಸಹೋದರ
Linkup
ಕಡೆಗೂ ಅಭಿಮಾನಿಗಳ ಪ್ರಾರ್ಥನೆ ಫಲಿಸಲಿಲ್ಲ.. ಕುಟುಂಬಸ್ಥರ ಕನವರಿಕೆ ಈಡೇರಲಿಲ್ಲ.. ಮೆಡಿಕಲ್ ಮಿರಾಕಲ್ ಆಗಬಹುದು.. ಸಂಚಾರಿ ವಿಜಯ್‌ಗೆ ಪ್ರಜ್ಞೆ ಬರಬಹುದು ಎಂಬ ನಿರೀಕ್ಷೆ ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬಸ್ಥರಲ್ಲಿತ್ತು. ಆದರೆ, ವಿಧಿಯ ಲೆಕ್ಕಾಚಾರವೇ ಬೇರೆ ಆಗಿತ್ತು. ಇಹಲೋಕದ ಸಂಚಾರವನ್ನು ಮುಗಿಸಿಬಿಟ್ಟರು. ಬಾರದೂರಿಗೆ ಸಂಚಾರ ಮಾಡಿಬಿಟ್ಟರು. ರಸ್ತೆ ಅಪಘಾತದಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಇಂದು ಮುಂಜಾನೆ 3.34ರ ಸುಮಾರಿಗೆ ನಿಧನರಾದರು. ಅಪಘಾತದ ವೇಳೆ ತಲೆಗೆ ತೀವ್ರ ಪೆಟ್ಟ ಬಿದ್ದ ಪರಿಣಾಮ ಸಂಚಾರಿ ವಿಜಯ್ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಕೋಮಾಕ್ಕೆ ಜಾರಿದ್ದ ಸಂಚಾರಿ ವಿಜಯ್‌ಗೆ ಪ್ರಜ್ಞೆ ಬರಲೇ ಇಲ್ಲ. ಬ್ರೇನ್ ಫೇಲ್ಯೂರ್ ಮತ್ತು ಬ್ರೇನ್ ಡೆಡ್ ಆದ ಪರಿಣಾಮ ಸಂಚಾರಿ ವಿಜಯ್ ವಿಧಿವಶರಾದರು. ಬೈಕ್ ಅಪಘಾತಕ್ಕೆ ನವೀನ್ ಕಾರಣ ಎಂದು ಆರೋಪ ಕಳೆದ ಶನಿವಾರ ಗೆಳೆಯ ನವೀನ್ ಮನೆಗೆ ಸಂಚಾರಿ ವಿಜಯ್ ಹೋಗಿದ್ದರು. ಅಲ್ಲಿಂದ ತಡರಾತ್ರಿ ವಾಪಸ್ ಬರುತ್ತಿದ್ದಾಗ 11.45ರ ಸುಮಾರಿಗೆ ಜೆಪಿ ನಗರದ ಏಳನೇ ಹಂತದಲ್ಲಿ ಅಪಘಾತ ಸಂಭವಿಸಿದೆ. ಗೆಳೆಯ ನವೀನ್ ಬೈಕ್ ಓಡಿಸುತ್ತಿದ್ದರು. ಸಂಚಾರಿ ವಿಜಯ್ ಹಿಂಬದಿ ಕುಳಿತಿದ್ದರು. ವೇಗವಾಗಿ ಬೈಕ್ ಓಡಿಸುತ್ತಿದ್ದ ನವೀನ್ ನಿರ್ಲಕ್ಷ್ಯತನ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಘಟನೆ ಬಗ್ಗೆ ಆರೋಪಿಸಿ ನವೀನ್ ವಿರುದ್ಧ ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ದೂರು ನೀಡಿದ್ದಾರೆ. ಸಿದ್ದೇಶ್ ನೀಡಿರುವ ದೂರಿನ ಅನ್ವಯ ನವೀನ್ ವಿರುದ್ಧ ಐಪಿಸಿ ಸೆಕ್ಷನ್ 279, 338 ಅಡಿಯಲ್ಲಿ ಸಂಚಾರಿ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಪಘಾತದಲ್ಲಿ ಗೆಳೆಯ ನವೀನ್‌ಗೂ ಬೆನ್ನು ಮೂಳೆಗೆ ಪೆಟ್ಟಾಗಿದೆ. ನವೀನ್‌ರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.