ಪ್ರೇಮ ನಿವೇದನೆ ತಿರಸ್ಕರಿಸಿದ ಮಹಿಳೆಗೆ ನಿತ್ಯವೂ ಪಿಜ್ಜಾ ರವಾನೆ!: ಛತ್ತೀಸಗಡ ವ್ಯಕ್ತಿ ವಿರುದ್ಧ ಬೆಂಗಳೂರಲ್ಲಿ ದೂರು

ಪ್ರೇಮ ನಿವೇದನೆಯನ್ನು ತಿರಸ್ಕರಿಸಿದ್ದಕ್ಕೆ ಛತ್ತೀಸಗಡ ಮೂಲದ ವ್ಯಕ್ತಿ ತಮಗೆ ನಿತ್ಯವೂ ಪಿಜ್ಜಾ ಕಳುಹಿಸುತ್ತಿದ್ದು, ತಮ್ಮನ್ನು ಹಿಂಬಾಲಿಸಲು ಖಾಸಗಿ ಪತ್ತೇದಾರರನ್ನು ನೇಮಿಸಿಕೊಂಡಿದ್ದಾನೆ ಎಂದು ಬೆಂಗಳೂರಿನ ಮಹಿಳೆಯೊಬ್ಬರು ದೂರು ನೀಡಿದ್ದಾರೆ.

ಪ್ರೇಮ ನಿವೇದನೆ ತಿರಸ್ಕರಿಸಿದ ಮಹಿಳೆಗೆ ನಿತ್ಯವೂ ಪಿಜ್ಜಾ ರವಾನೆ!: ಛತ್ತೀಸಗಡ ವ್ಯಕ್ತಿ ವಿರುದ್ಧ ಬೆಂಗಳೂರಲ್ಲಿ ದೂರು
Linkup
ಬೆಂಗಳೂರು: ಮದುವೆ ಪ್ರಸ್ತಾಪ ತಿರಸ್ಕರಿಸಿದ ಬಳಿಕ ಛತ್ತೀಸಗಡದ ವ್ಯಕ್ತಿ ತನ್ನನ್ನು ಹಿಂಬಾಲಿಸುತ್ತಾ ಕಾಟ ಕೊಡುತ್ತಿದ್ದಾನೆ ಎಂದು ನಗರದ 36 ವರ್ಷದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಯಲಹಂಕ ನ್ಯೂಟೌನ್ ಪೊಲೀಸರಿಗೆ ದೂರು ನೀಡಿದ್ದು, ಆತ ತನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ಹ್ಯಾಕ್ ಮಾಡಿದ್ದಲ್ಲದೆ, ಅಶ್ಲೀಲ ಫೋಟೊಗಳು ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡಿ, ಅವುಗಳನ್ನು ತನ್ನ ಸಂಪರ್ಕ ಪಟ್ಟಿಯಲ್ಲಿರುವ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕಳುಹಿಸಿದ್ದಾನೆ ಎಂದು ಆರೋಪಿಸಿದ್ದಾರೆ. ತನ್ನನ್ನು ಹಿಂಬಾಲಿಸಲು ಖಾಸಗಿ ಪತ್ತೇದಾರರನ್ನು ಆರೋಪಿ ನೇಮಿಸಿದ್ದು, ತನ್ನ ಹೆಸರಿನಲ್ಲಿ ಆರ್ಡರ್ ಮಾಡುತ್ತಿದ್ದಾನೆ. ಇದರಿಂದ ತನ್ನ ಮನೆ ಬಾಗಿಲಿಗೆ ಆಗಾಗ್ಗೆ ಪಿಜ್ಜಾ ಡೆಲಿವರಿ ಆಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 'ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354 ಡಿ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 'ಆಗಸ್ಟ್ 12ರಂದು ಪಿಜ್ಜಾ ಡೆಲಿವರಿ ಬಾಯ್ ನನ್ನ ಮನೆ ಬಾಗಿಲು ಬಡಿದಿದ್ದ. ನನ್ನ ಹೆಸರಿನಲ್ಲಿ ಆರ್ಡರ್ ಮಾಡಲಾಗಿದೆ ಎಂದು ಆತ ಹೇಳಿದಾಗ ಆಘಾತವಾಗಿತ್ತು. ಅಂದಿನಿಂದ ನನ್ನ ಮನೆ ಹಾಗೂ ಕಚೇರಿಗೆ ಪದೇ ಪದೇ ಪಿಜ್ಜಾಗಳನ್ನು ಕಳುಹಿಸಲಾಗುತ್ತಿದೆ. ನನ್ನನ್ನು ಹಿಂಬಾಲಿಸಲಾಗುತ್ತಿದೆ. ಕೆಟ್ಟ ಹೆಸರು ತರಲಾಗಿದೆ ಮತ್ತು ನೀಡಲಾಗುತ್ತಿದೆ. ಆರೋಪಿ ಕಳೆದ ನಾಲ್ಕು ವರ್ಷಗಳಿಂದ ನನ್ನ ಖಾಸಗಿತನ ಹಾಗೂ ಶಾಂತಿಯನ್ನು ಕೆಡಿಸಿದ್ದಾನೆ. ಯಾವುದೇ ಸಮಯ ಆತ ಅಥವಾ ಆತನಿಗಾಗಿ ಕೆಲಸ ಮಾಡುವವರು ದಾಳಿ ಮಾಡುತ್ತಾರೆ ಎಂಬ ಭಯದಿಂದ ಬದುಕುತ್ತಿದ್ದೇನೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ. 'ಆರೋಪಿಯು ಕೋರಮಂಗಲದಿಂದ ಖಾಸಗಿ ಪತ್ತೇದಾರರ ಸಂಸ್ಥೆಯಿಂದ ಪತ್ತೇದಾರರನ್ನು ನೇಮಿಸಿಕೊಂಡಿದ್ದು, ನಾನು ಎಲ್ಲಿದ್ದೇನೆ ಎಂಬ ಬಗ್ಗೆ ನಿರಂತರ ಪರಿಶೀಲನೆ ನಡೆಸುತ್ತಿದ್ದಾನೆ. ನನ್ನನ್ನು ಹಿಂಬಾಲಿಸಲಾಗುತ್ತಿದೆ ಎಂಬುದನ್ನು ತೋರಿಸಲು ನನ್ನ ಮನೆ ಮುಂದೆ ಆತನ ನಿಂತಿರುವ ಫೋಟೊಗಳನ್ನು ಕಳುಹಿಸುತ್ತಾನೆ. ಸಂಕಷ್ಟದ ಸ್ಥಿತಿಯಲ್ಲಿದ್ದ ನನ್ನ ಪೋಷಕರನ್ನು ಭೇಟಿ ಮಾಡಲು ತೆರಳಿದ್ದಾಗ, ನಾನು ಅಲ್ಲಿಗೆ ಹೋಗಿದ್ದೇನೆ ಎಂದು ನನ್ನ ಸಂಬಂಧಿಕರಿಗೆ ಸಂದೇಶ ಕಳುಹಿಸಿದ್ದ. ನನ್ನ ತಂದೆಯ ಅಂಗಡಿಗೂ ಭೇಟಿ ನೀಡಿದ್ದ. ನನ್ನ ಕರೆ ದಾಖಲೆ ವಿವರಗಳನ್ನು ಹೇಗೋ ಪಡೆದುಕೊಂಡು, ನನ್ನ ಸ್ನೇಹಿತರು ಮತ್ತು ಸಂಬಂಧಿಕರ ಫೋನ್ ಸಂಖ್ಯೆಗಳನ್ನು ಸಂಗ್ರಹಿಸಿದ್ದ' ಎಂದು ಆರೋಪಿಸಿದ್ದಾರೆ.