ತಾಯಿಯ ಗರ್ಭ, ಮಸಣ ಮಾತ್ರ ಹೆಣ್ಣಿಗೆ ಸುರಕ್ಷಿತ: ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯ ಡೆತ್‌ ನೋಟ್ ಇದು

ತನ್ನ ಸಹಪಾಠಿಯ ದೌರ್ಜನ್ಯಕ್ಕೆ ಮನನೊಂದ ವಿದ್ಯರ್ಥಿನಿಯೊಬ್ಬಳು ಭಾವನಾತ್ಮಕ ಪತ್ರ ಬರೆದು ಆತ್ಮಹತ್ಯಗೆ ಶರಣಾದ ಮನ ಕಲುಕುವ ಘಟನೆ ತಮಿಳುನಾಡು ರಾಜನಧಾನಿ ಚೆನ್ನೈನ ಹೊರ ವಲಯದಲ್ಲಿ ನಡೆದಿದೆ.

ತಾಯಿಯ ಗರ್ಭ, ಮಸಣ ಮಾತ್ರ ಹೆಣ್ಣಿಗೆ ಸುರಕ್ಷಿತ: ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯ ಡೆತ್‌ ನೋಟ್ ಇದು
Linkup
ಚೆನ್ನೈ: ' ಒಂದು ತಾಯಿಯ ಗರ್ಭ, ಇನ್ನೊಂದು ಸಮಾಧಿ. ಇವೆರಡೇ ಹೆಣ್ಣು ಮಕ್ಕಳಿಗೆ ಸುರಕ್ಷಿತ ಸ್ಥಳಗಳು. - ಇದು ಬಾಲಕಿಯೊಬ್ಬಳು ತನ್ನ ಆತ್ಮಹತ್ಯೆಗೂ ಮುನ್ನ ಬರೆದಿಟ್ಟ ಅಂತಃಕರಣ ಕಲಕುವಂತಹ ಸಾಲುಗಳು. ಹನ್ನೊಂದನೇ ತರಗತಿಯ ವಿದ್ಯಾರ್ಥಿಯೊಬ್ಬಳು ತನ್ನ ಕಾಲೇಜು ಸಹಪಾಠಿಯ ದೌರ್ಜನ್ಯಕ್ಕೆ ಮನನೊಂದು ಮಾಡಿಕೊಂಡಿರುವ ದಾರುಣ ಘಟನೆ ಹೊರ ವಲಯದ ಮಂಗಡು ಎಂಬಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಬಾಲಕಿ ಈ ರೀತಿ ಪತ್ರ ಬರೆದು ತನ್ನ ನೋವನ್ನು ಹೊರ ಹಾಕಿದ್ದು, ಮನಃ ಕಲಕುವಂತಿದೆ. ಘಟನೆ ಸಂಬಂಧ 21 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿ, ಆತನ ವಿರುದ್ಧ ವಿಚಾರಣೆ ಆರಂಭಿಸಿದ್ದಾರೆ. ಆರೋಪಿ ಬಾಲಕ, ಮೃತ ಅಪ್ರಾಪ್ತ ಬಾಲಕಿಯೊಂದಿಗೆ ದೈಹಿಕ ಸಂಬಂಧ ಬೆಳೆಸಲು ಹವಣಿಸುತ್ತಿದ್ದು, ಕಳೆದ ಎರಡು ವಾರಗಳಿಂದ ಆಕೆಯನ್ನು ಬಲವಂತ ಪಡಿಸಿ, ಹಿಂಸಿಸುತ್ತಿದ್ದ. ಅಲ್ಲದೇ ಆಶ್ಲೀಲ ಮೆಸೇಜು ಹಾಗೂ ಚಿತ್ರಗಳನ್ನು ಕಳಿಸಿ ಆಕೆಯನ್ನು ಪೀಡಿಸುತ್ತಿದ್ದ. ಇದರಿಂದ ಮನನೊಂದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆಗೂ ಎಂಟು ತಿಂಗಳ ಮೊದಲಿನಿಂದಲೂ ಈ ಇಬ್ಬರೂ ಪರಿಚಿತರಾಗಿದ್ದು, ಅನ್ಯೋನ್ಯವಾಗಿಯೇ ಇದ್ದರು. ಆದರೆ ಏಕಾಏಕಿ ಯುವಕ ದೈಹಿಕ ಸಂಪರ್ಕಕ್ಕೆ ಪೀಡಿಸಿದ್ದರಿಂದ ಯುವತಿ ಮಾನಸಿಕವಾಗಿ ನೊಂದಿದ್ದಳು. ಬಾಲಕಿಯ ತಾಯಿ ಕಾರ್ಯ ನಿಮಿತ್ತ ಹೊರಗೆ ಹೋಗಿದ್ದಾಗ, ತನ್ನ ಕೋಣೆಯ ಚಿಲಕ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಹಿಂದೆ ಇವರಿಬ್ಬರು ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. 8ನೇ ತರಗತಿಯಲ್ಲಿದ್ದ ಬಾಲಕಿಗೆ 11ನೇ ತರಗತಿಯಲ್ಲಿದ್ದ ಬಾಲಕನ ಪರಿಚಯ ಆಗಿತ್ತು. ಇದಾದ ಬಳಿಕ ಬಾಲಕಿ ಬೇರೆ ಶಾಲೆಗೆ ಹೋಗಿದ್ದರೂ, ಇನ್ಸ್‌ಸ್ಟಾಗ್ರಾಮ್‌ ಮೂಲಕ ಮತ್ತೆ ಸಂಬಂಧ ಚಿಗುರಿತ್ತು. ಇದು ಇಲ್ಲಿವರೆಗೂ ಬಂದು ಇದೀಗ ಬಾಲಕಿಯ ದಾರುಣ ಅಂತ್ಯವಾಗಿದೆ. ಬಾಲಕಿಯ ಪತ್ರದಲ್ಲಿ ಇನ್ನೂ ಹಲವು ಅಂಶಗಳಿದ್ದು, ಅವುಗಳ ಆಧಾರದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ' ನನ್ನ ಸಾವಿಗೆ ನ್ಯಾಯ ಸಿಗುವ ಮೂಲಕ ಲೈಂಗಿಕ ದೌರ್ಜನ್ಯ ನಿಲ್ಲಲಿ. ಸಂಬಂಧಿಕರು, ಶಿಕ್ಷಕರು, ಹಾಗೂ ಎಲ್ಲರಿಂದಲೂ ಆಗುತ್ತಿರುವ ಲೈಂಗಿಕ ದೌರ್ಜನ್ಯ ಅಂತ್ಯವಾಗಲಿ. ಶಾಲೆ ಕೂಡ ಸುರಕ್ಷಿತವಲ್ಲ. ಶಿಕ್ಷಕರನ್ನೂ ಕೂಡ ನಂಬುವಂತಿಲ್ಲ. ಮಾನಸಿಕ ಹಿಂಸೆಯಿಂದ ಸರಿಯಾಗಿ ನನಗೆ ನಿದ್ದೆಯೂ ಹತ್ತುತ್ತಿಲ್ಲ. ಪ್ರತೀ ಪೋಷಕರೂ ಕೂಡ ತನ್ನ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳನ್ನು ಗೌರವಿಸುವುದರ ಬಗ್ಗೆ ಹೇಳಿ ಕೊಡಬೇಕು. ಹೆಣ್ಣು ಮಕ್ಕಳಿಗೆ ಸುರಕ್ಷಿತವಾಗಿರುವ ಸ್ಥಳ ಒಂದು ತಾಯಿ ಗರ್ಭ, ಇನ್ನೊಂದು ಮಸಣ' ಎಂದು ಬರೆದಿದ್ದಾಳೆ. ಸದ್ಯ ಬಾಲಕಿಯ ಪತ್ರದ ಸಾಲುಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವು ಮಂದಿ ನಾನಾ ರೀತಿಯ ಮಾತುಗಳ ಮೂಲಕ ಬಾಲಕಿಯ ಸಾವಿಗೆ ಮರುಗಿದ್ದಾರೆ. ಅತ್ಯಾಚಾರದ ವಿರುದ್ಧ ಸೆಟೆದು ನಿಂತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕೂಡ ಈ ಘಟನೆ ತನ್ನನ್ನು ಭಾರೀ ಚಿಂತೆಗೀಡು ಮಾಡಿದೆ ಎಂದು ಬೇಸರ ತೋಡಿಕೊಂಡಿದ್ದಾರೆ.