ಗುಡ್ನ್ಯೂ‌ಸ್‌: ಇಳಿಮುಖದ ಸುಳಿವು ನೀಡಿದ ಕೊರೊನಾದ ಎರಡನೇ ಅಲೆ, ಹೇಗೆ? ಇಲ್ಲಿದೆ ರಿಪೋರ್ಟ್‌!

ಮಹಾರಾಷ್ಟ್ರ, ಉತ್ತರಪ್ರದೇಶ, ದಿಲ್ಲಿ, ಗುಜರಾತ್‌, ಬಿಹಾರ, ಛತ್ತೀಸ್‌ಗಢ, ತೆಲಂಗಾಣ, ಚಂಡೀಗಢ, ಅಂಡಮಾನ್‌ ಮತ್ತು ನಿಕೋಬರ್‌, ಲಕ್ಷದ್ವೀಪ ಸೇರಿದಂತೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೈನಂದಿನ ಹೊಸ ಸೋಂಕಿನ ಪ್ರಮಾಣ ಬಹುತೇಕ ಸ್ಥಿರವಾಗಿದೆ ಅಥವಾ ಇಳಿಮುಖವಾಗಿದೆ.

ಗುಡ್ನ್ಯೂ‌ಸ್‌: ಇಳಿಮುಖದ ಸುಳಿವು ನೀಡಿದ ಕೊರೊನಾದ ಎರಡನೇ ಅಲೆ, ಹೇಗೆ? ಇಲ್ಲಿದೆ ರಿಪೋರ್ಟ್‌!
Linkup
ಹೊಸದಿಲ್ಲಿ/ಬೆಂಗಳೂರು: ಭಾರತದಲ್ಲಿ ಮರಣಮೃದಂಗದ ಮೂಲಕ ಜನರನ್ನು ಜರ್ಝರಿತಗೊಳಿಸಿದ ಕೊರೊನಾ ಎರಡನೇ ಅಲೆ ಉತ್ತುಂಗಕ್ಕೆ ತಲುಪಿ ಇಳಿಮುಖ ಹಾದಿಯತ್ತ ಸಾಗುವ ಲಕ್ಷಣ ಕಾಣಿಸುತ್ತಿದೆ. ಕಳೆದ ನಾಲ್ಕು ದಿನಗಳಿಂದ ದೇಶದ ಒಟ್ಟಾರೆ ದೈನಂದಿನ ಹೊಸ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿರುವುದನ್ನು ಪರಿಗಣಿಸುವುದಾದರೆ, ಇದು ಇಳಿಮುಖ ಟ್ರೆಂಡ್‌ನ ಪ್ರಾಥಮಿಕ ಸುಳಿವು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ವಿಶ್ಲೇಷಿಸಿದೆ. ಸತತ ಎರಡು ತಿಂಗಳ ಕಾಲ ಒಟ್ಟಾರೆ ಸೋಂಕು ಮತ್ತು ಸಾವಿನ ಸಂಖ್ಯೆ ಶರವೇಗದಲ್ಲಿ ಏರುತ್ತಿತ್ತು. ಮೇ 5ರ ಬಳಿಕ ಸತತ ನಾಲ್ಕು ದಿನಗಳವರೆಗೆ ನಿತ್ಯ ನಾಲ್ಕು ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು, ನಾಲ್ಕು ಸಾವಿರಕ್ಕೂ ಹೆಚ್ಚು ಸಾವಿನ ಸಂಖ್ಯೆಯ ಮೂಲಕ ಭಾರತವು ಕರಾಳ ವಿಶ್ವ ದಾಖಲೆಗೆ ಸಾಕ್ಷಿಯಾಯಿತು. ಆದರೆ, ಕಳೆದ ನಾಲ್ಕು ದಿನಗಳಿಂದ ಸತತವಾಗಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಮಂಗಳವಾರ 3.29 ಲಕ್ಷ ಪ್ರಕರಣಗಳು ದಾಖಲಾಗಿದ್ದು, 14 ದಿನಗಳಲ್ಲೇ ಕನಿಷ್ಠ ಪ್ರಮಾಣ ಇದೆನಿಸಿದೆ. ಎಲ್ಲೆಲ್ಲಿ ಇಳಿಮುಖ? ಮಹಾರಾಷ್ಟ್ರ, ಉತ್ತರಪ್ರದೇಶ, ದಿಲ್ಲಿ, ಗುಜರಾತ್‌, ಬಿಹಾರ, ಛತ್ತೀಸ್‌ಗಢ, ತೆಲಂಗಾಣ, ಚಂಡೀಗಢ, ಅಂಡಮಾನ್‌ ಮತ್ತು ನಿಕೋಬರ್‌, ಲಕ್ಷದ್ವೀಪ ಸೇರಿದಂತೆ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ದೈನಂದಿನ ಹೊಸ ಸೋಂಕಿನ ಪ್ರಮಾಣ ಬಹುತೇಕ ಸ್ಥಿರವಾಗಿದೆ ಅಥವಾ ಇಳಿಮುಖವಾಗಿದೆ. ಎಲ್ಲೆಲ್ಲಿ ಏರುಗತಿ? ಕರ್ನಾಟಕ, ಕೇರಳ, ತಮಿಳುನಾಡು, ಪ. ಬಂಗಾಳ, ಪಂಜಾಬ್‌ ಸೇರಿದಂತೆ 16 ರಾಜ್ಯಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದ್ದು, ಸಾವಿನ ಸಂಖ್ಯೆಯೂ ಹೆಚ್ಚಿದೆ. ಈ ಪೈಕಿ 13 ರಾಜ್ಯಗಳು ದೇಶದ ಒಟ್ಟು ಪ್ರಕರಣಗಳಲ್ಲಿ ಶೇ. 82.68 ಪಾಲು ಹೊಂದಿವೆ. ದೇಶಾದ್ಯಂತ 10 ಜಿಲ್ಲೆಗಳು ಒಟ್ಟು ಸಕ್ರಿಯ ಪ್ರಕರಣಗಳಲ್ಲಿಶೇ. 25ರಷ್ಟು ಪಾಲು ಹೊಂದಿದ್ದು, ಈ ಪೈಕಿ ಬೆಂಗಳೂರು ನಗರ ಅಗ್ರಸ್ಥಾನದಲ್ಲಿದೆ. * 61 ದಿನಗಳ ಬಳಿಕ ಸಕ್ರಿಯ ಪ್ರಕರಣಗಳಲ್ಲಿಒಂದೇ ದಿನ 30,000 ಇಳಿಕೆ* 61 ದಿನಗಳ ಬಳಿಕ ಒಟ್ಟು ಹೊಸ ಪ್ರಕರಣಗಳನ್ನು ಮೀರಿದ ಚೇತರಿಕೆ ಪ್ರಮಾಣ* 14 ದಿನಗಳ ಬಳಿಕ 3.29 ಲಕ್ಷಕ್ಕೆ ಇಳಿದ ದೈನಂದಿನ ಸೋಂಕು* ದೇಶಾದ್ಯಂತ ಒಟ್ಟು ಪಾಸಿಟಿವಿಟಿ ಪ್ರಮಾಣ 21%* 26 ರಾಜ್ಯಗಳಲ್ಲಿ15%ಗಿಂತಲೂ ಹೆಚ್ಚು ಪಾಸಿಟಿವಿಟಿ ದರ* 13 ರಾಜ್ಯಗಳಲ್ಲಿ1 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳು* 6 ರಾಜ್ಯಗಳಲ್ಲಿ50 ಸಾವಿರದಿಂದ 1 ಲಕ್ಷ ಸಕ್ರಿಯ ಪ್ರಕರಣಗಳು ಆಕ್ಸಿಜನ್‌ ಸಿಗದೆ 37 ಸಾವು ಗೋವಾ ಮತ್ತು ಆಂಧ್ರ ಪ್ರದೇಶದ ಕೋವಿಡ್‌ ಕೇರ್‌ ಆಸ್ಪತ್ರೆಗಳಲ್ಲಿ ಆಮ್ಲಜನಕ ವ್ಯತ್ಯಯವಾಗಿ ಮಂಗಳವಾರ 37 ಸೋಂಕಿತರು ಮೃತಪಟ್ಟಿದ್ದಾರೆ. ಪಣಜಿಯಲ್ಲಿರುವ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿಆಕ್ಸಿಜನ್‌ ಸರಬರಾಜಾಗದೆ 26 ಸೋಂಕಿತರು ಪ್ರಾಣ ಕಳೆದುಕೊಂಡಿದ್ದರೆ, ತಿರುಪತಿಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿಇದೇ ರೀತಿ 11 ಸೋಂಕಿತರು ಮೃತಪಟ್ಟಿದ್ದಾರೆ.