ಕ್ರಿಪ್ಟೋ ಕರೆನ್ಸಿ ನಮ್ಮ ಯುವಜನರನ್ನು ಹಾಳು ಮಾಡಬಹುದು: ಪ್ರಧಾನಿ ಮೋದಿ ಕಳವಳ

ಕ್ರಿಪ್ಟೋ ಕರೆನ್ಸಿಗಳು ನಮ್ಮ ಯುವಜನರನ್ನು ಹಾಳು ಮಾಡುವ ಅಪಾಯವಿದೆ. ಹೀಗಾಗಿ ಡಿಜಿಟಲ್ ಕರೆನ್ಸಿ ವಿಚಾರದಲ್ಲಿ ಎಲ್ಲ ಪ್ರಜಾಪ್ರಭುತ್ವದ ದೇಶಗಳೂ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಕ್ರಿಪ್ಟೋ ಕರೆನ್ಸಿ ನಮ್ಮ ಯುವಜನರನ್ನು ಹಾಳು ಮಾಡಬಹುದು: ಪ್ರಧಾನಿ ಮೋದಿ ಕಳವಳ
Linkup
ಹೊಸದಿಲ್ಲಿ: ವಿಚಾರದಲ್ಲಿ ಎಲ್ಲ ದೇಶಗಳೂ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಮತ್ತು ಅದು ತಪ್ಪು ಕೈಗಳಲ್ಲಿ ಸಿಲುಕೊಳ್ಳದಂತೆ ನೋಡಿಕೊಳ್ಳಬೇಕಿದೆ ಎಂದು ಪ್ರಧಾನಿ ಗುರುವಾರ ಹೇಳಿದ್ದಾರೆ. 'ಈ ವಿಚಾರವಾಗಿ ಎಲ್ಲ ಪ್ರಜಾಪ್ರಭುತ್ವ ದೇಶಗಳು ಜತೆಯಾಗಿ ಕೆಲಸ ಮಾಡುವುದು ಮುಖ್ಯವಾಗಿದೆ ಹಾಗೂ ಅದು ತಪ್ಪಾದ ಕೈಗಳಿಗೆ ಸಿಗದಂತೆ ನೋಡಿಕೊಳ್ಳಬೇಕಾಗಿದೆ. ಅದು ನಮ್ಮ ಯುವಜನರನ್ನು ಹಾಳು ಮಾಡಲಿದೆ' ಎಂದು 'ದಿ ಸಿಡ್ನಿ ಡೈಲಾಗ್‌' ವೇಳೆ 'ಭಾರತದ : ವಿಕಸನ ಮತ್ತು ಕ್ರಾಂತಿ' ಕುರಿತಾದ ತಮ್ಮ ಭಾಷಣದಲ್ಲಿ ಅವರು ತಿಳಿಸಿದ್ದಾರೆ. 'ಒಂದು ಯುಗದಲ್ಲಿ ಒಮ್ಮೆ ಉಂಟಾಗುವ ಬದಲಾವಣೆಯ ಕಾಲಮಾನದಲ್ಲಿ ನಾವು ಇದ್ದೇವೆ. ಇಲ್ಲಿ ತಂತ್ರಜ್ಞಾನ ಮತ್ತು ಡೇಟಾಗಳು ಹೊಸ ಆಯುಧಗಳಾಗುತ್ತಿವೆ. ಡಿಜಿಟಲ್ ಕಾಲವು ನಮ್ಮ ಸುತ್ತಲಿನ ಎಲ್ಲವನ್ನೂ ಬದಲಾಯಿಸುತ್ತಿದೆ. ರಾಜಕೀಯ, ಆರ್ಥಿಕತೆ ಮತ್ತು ಸಮಾಜವನ್ನು ಅದು ಮರು ವ್ಯಾಖ್ಯಾನಿಸುತ್ತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ. 'ಇದು ಸಾರ್ವಭೌಮತ್ವ, ಆಡಳಿತ, ನೀತಿಶಾಸ್ತ್ರ, ಕಾನೂನು, ಹಕ್ಕುಗಳು ಮತ್ತು ಭದ್ರತೆಯ ಮೇಲೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಇದು ಅಂತಾರಾಷ್ಟ್ರೀಯ ಸ್ಪರ್ಧಾತ್ಮಕತೆಯನ್ನು, ಅಧಿಕಾರ ಮತ್ತು ನಾಯಕತ್ವಕ್ಕೆ ಮರು ಆಕಾರ ನೀಡುತ್ತಿದೆ. ಆದರೆ ಸಮುದ್ರ ತಳದಿಂದ ಸೈಬರ್ ಹಾಗೂ ಬಾಹ್ಯಾಕಾಶದವರೆಗೆ ವ್ಯಾಪಕ ವೈವಿಧ್ಯಮಯ ವಲಯಗಳಲ್ಲಿ ಹೊಸ ಅಪಾಯಗಳು ಮತ್ತು ಹೊಸ ಮಾದರಿಯ ಸಂಘರ್ಷಗಳನ್ನು ಕೂಡ ನಾವು ಎದುರಿಸುತ್ತಿದ್ದೇವೆ. ತಂತ್ರಜ್ಞಾನವು ಈಗಾಗಲೇ ಜಾಗತಿಕ ಸ್ಪರ್ಧಾತ್ಮಕತೆಯಲ್ಲಿ ಪ್ರಮುಖ ಸಾಧನವಾಗಿ ಪರಿಣಮಿಸಿದೆ ಮತ್ತು ಭವಿಷ್ಯದ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಮರು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ' ಎಂದು ಹೇಳಿದ್ದಾರೆ. 'ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿ ಎಂದರೆ ಮುಕ್ತತೆ. ಅದೇ ವೇಳೆ, ಈ ಮುಕ್ತ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳದಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಗೆ ನಾವು ಅವಕಾಶ ನೀಡಬಾರದು' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತವು ಹೊಸ ತಂತ್ರಜ್ಞಾನಗಳ ಕಡೆಗೆ ಒಲವು ತೋರಿಸುತ್ತಿದೆ ಎಂದು ಹೇಳಿರುವ ಪ್ರಧಾನಿ, ದೂರ ಸಂಪರ್ಕ ವಲಯದ 5G ಮತ್ತು 4G ಸೇರಿದಂತೆ ವೈವಿಧ್ಯಮಯ ವಲಯಗಳಲ್ಲಿನ ಸ್ವದೇಶಿ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ದೇಶವು ಹೂಡಿಕೆ ಮಾಡುತ್ತಿದೆ ಎಂದಿದ್ದಾರೆ. ಕ್ಷೇತ್ರದಲ್ಲಿ ಲಕ್ಷಾಂತರ ಭಾರತೀಯರು ಈಗಾಗಲೇ ಹೂಡಿಕೆ ಮಾಡಿದ್ದಾರೆ. ಸೇರಿದಂತೆ ಕ್ರಿಪ್ಟೋ ಕರೆನ್ಸಿಯ ವಿವಿಧ ವಿಭಾಗಗಳಲ್ಲಿ ಹೂಡಿಕೆ, ವ್ಯವಹಾರಗಳನ್ನು ನಿಯಂತ್ರಿಸಲು ಮತ್ತು ಅವುಗಳ ಮೇಲೆ ನಿಗಾ ವಹಿಸುವ ಬಗ್ಗೆ ಸರ್ಕಾರ ಇನ್ನೂ ಚಿಂತನೆ ನಡೆಸುತ್ತಿದೆ. ಅನಿಯಂತ್ರಿತ ಕ್ರಿಪ್ಟೋ ಮಾರುಕಟ್ಟೆಯು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡುವ ಮೂಲಗಳಾಗುವ ಅಪಾಯದ ನಡುವೆ ಕ್ರಿಪ್ಟೋ ಕರೆನ್ಸಿಗಳ ಭವಿಷ್ಯದ ಕಳವಳಗಳ ಬಗ್ಗೆ ಕಳೆದ ವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ನಡೆದಿತ್ತು.