ಕೆನಡಾದಲ್ಲಿ ದೇವಸ್ಥಾನದ ಅರ್ಚಕನ ಮಗನ ಮನೆಯ ಮೇಲೆ ಖಲಿಸ್ತಾನಿಗಳಿಂದ 14 ಸುತ್ತು ಗುಂಡಿನ ದಾಳಿ!

ಕೆನಡಾದ ಸರ್ರೆಯಲ್ಲಿ ಹಿಂದೂ ದೇವಾಲಯದ ಪ್ರಮುಖರೊಬ್ಬರ ಮಗನ ಮನೆಯ ಮೇಲೆ ಖಲಿಸ್ತಾನಿಗಳು 14 ಸುತ್ತು ಗುಂಡು ಹಾರಿಸಿದ್ದಾರೆ. ಸರ್ರೆಯನ್ನು ಖಲಿಸ್ತಾನಿ ಉಗ್ರಗಾಮಿಗಳ ನೆಲೆ ಎಂದು ಪರಿಗಣಿಸಲಾಗಿದೆ.  ಕೆನಡಾದ ಸರ್ರೆಯಲ್ಲಿ ಹಿಂದೂ ದೇವಾಲಯದ ಪ್ರಮುಖರೊಬ್ಬರ ಮಗನ ಮನೆಯ ಮೇಲೆ ಖಲಿಸ್ತಾನಿಗಳು 14 ಸುತ್ತು ಗುಂಡು ಹಾರಿಸಿದ್ದಾರೆ. ಸರ್ರೆಯನ್ನು ಖಲಿಸ್ತಾನಿ ಉಗ್ರಗಾಮಿಗಳ ನೆಲೆ ಎಂದು ಪರಿಗಣಿಸಲಾಗಿದೆ.  ಈ ನಗರದ ಗುರುದ್ವಾರದ ಬಳಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಲಾಗಿತ್ತು. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತ ಸರ್ಕಾರವನ್ನು ಕೊಲೆ ಎಂದು ಆರೋಪಿಸಿದ್ದರು. ಆದರೆ, ಇಲ್ಲಿಯವರೆಗೂ ಅವರಿಂದ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡಿಲ್ಲ. ಡಿಸೆಂಬರ್ 27ರಂದು ಸುಮಾರು 8:03 ಗಂಟೆಗೆ 80 ಅವೆನ್ಯೂದ 14900 ಬ್ಲಾಕ್‌ನಲ್ಲಿ ಈ ಘಟನೆ ಸಂಭವಿಸಿದೆ. ಸರ್ರೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸರ (RCMP)ಪ್ರಕಾರ, ಗುಂಡು ಹಾರಿಸಿದ ನಿವಾಸವು ಸರ್ರೆಯ ಲಕ್ಷ್ಮೀ ನಾರಾಯಣ ದೇವಸ್ಥಾನದ ಅಧ್ಯಕ್ಷ ಸತೀಶ್ ಕುಮಾರ್ ಅವರ ಹಿರಿಯ ಮಗನಿಗೆ ಸೇರಿದೆ. ತನ್ನ ಮಗನ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಕನಿಷ್ಠ 14 ಸುತ್ತು ಗುಂಡು ಹಾರಿಸಲಾಗಿದೆ ಎಂದು ಸತೀಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಕೆನಡಾ ಬಳಿಕ ಅಮೆರಿಕಾದಲ್ಲೂ ಹಿಂದೂ ದೇವಾಲಯ ಧ್ವಂಸ: ಭಾರತ ವಿರೋಧಿ ಘೋಷಣೆ ಬರೆದ ಖಲಿಸ್ತಾನಿಗಳು ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಆದರೆ ಗುಂಡಿನ ದಾಳಿಯಲ್ಲಿ ಮನೆಗೆ ಹಾನಿಯಾಗಿದೆ. ಪೊಲೀಸರು ಹಲವಾರು ಗಂಟೆಗಳ ಕಾಲ ಘಟನಾ ಸ್ಥಳದಲ್ಲಿಯೇ ಇದ್ದು ಸ್ಥಳವನ್ನು ಪರಿಶೀಲಿಸಿದರು. ಸಂಭವನೀಯ ಸಿಸಿಟಿವಿ ದೃಶ್ಯಗಳಿಗಾಗಿ ನೆರೆಹೊರೆಯಿಂದಲೂ ಪಡೆದಿದ್ದಾರೆ. ಸರ್ರೆ RCMP ಸಾಮಾನ್ಯ ತನಿಖಾ ಘಟಕವು ತನಿಖೆಯನ್ನು ವಹಿಸಿಕೊಂಡಿದೆ. ಅಧಿಕಾರಿಗಳು ದಾಳಿಯ ಹಿಂದಿನ ಉದ್ದೇಶವನ್ನು ನಿರ್ಧರಿಸಲು ಕೆಲಸ ಮಾಡುತ್ತಿದ್ದಾರೆ. ಕೆನಡಾದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಖಾಲಿಸ್ತಾನಿಗಳು ದೇವಾಲಯಗಳ ಧ್ವಂಸ, ಹಿಂದೂ ವಿರೋಧಿ ಬರಹಗಳನ್ನು ಬರೆಯುತ್ತಿರುವುದು ಅಲ್ಲಿನ ಹಿಂದೂಗಳು ಆತಂಕಕ್ಕೀಡಾಗುವಂತೆ ಮಾಡಿದೆ. ಇತ್ತೀಚಿನ ಘಟನೆಗಳಲ್ಲಿ, ಸರ್ರೆಯ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಭಾರತ ವಿರೋಧಿ ಚಿತ್ರಗಳನ್ನು ಬರೆಯಲಾಗಿದೆ. ಗ್ರೇಟರ್ ಟೊರೊಂಟೊ ಪ್ರದೇಶದಲ್ಲಿ ದೇವಾಲಯಗಳ ಧ್ವಂಸ ಘಟನೆಗಳು ನಡೆದಿವೆ.

ಕೆನಡಾದಲ್ಲಿ ದೇವಸ್ಥಾನದ ಅರ್ಚಕನ ಮಗನ ಮನೆಯ ಮೇಲೆ ಖಲಿಸ್ತಾನಿಗಳಿಂದ 14 ಸುತ್ತು ಗುಂಡಿನ ದಾಳಿ!
Linkup
ಕೆನಡಾದ ಸರ್ರೆಯಲ್ಲಿ ಹಿಂದೂ ದೇವಾಲಯದ ಪ್ರಮುಖರೊಬ್ಬರ ಮಗನ ಮನೆಯ ಮೇಲೆ ಖಲಿಸ್ತಾನಿಗಳು 14 ಸುತ್ತು ಗುಂಡು ಹಾರಿಸಿದ್ದಾರೆ. ಸರ್ರೆಯನ್ನು ಖಲಿಸ್ತಾನಿ ಉಗ್ರಗಾಮಿಗಳ ನೆಲೆ ಎಂದು ಪರಿಗಣಿಸಲಾಗಿದೆ.  ಕೆನಡಾದ ಸರ್ರೆಯಲ್ಲಿ ಹಿಂದೂ ದೇವಾಲಯದ ಪ್ರಮುಖರೊಬ್ಬರ ಮಗನ ಮನೆಯ ಮೇಲೆ ಖಲಿಸ್ತಾನಿಗಳು 14 ಸುತ್ತು ಗುಂಡು ಹಾರಿಸಿದ್ದಾರೆ. ಸರ್ರೆಯನ್ನು ಖಲಿಸ್ತಾನಿ ಉಗ್ರಗಾಮಿಗಳ ನೆಲೆ ಎಂದು ಪರಿಗಣಿಸಲಾಗಿದೆ.  ಈ ನಗರದ ಗುರುದ್ವಾರದ ಬಳಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಮಾಡಲಾಗಿತ್ತು. ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಭಾರತ ಸರ್ಕಾರವನ್ನು ಕೊಲೆ ಎಂದು ಆರೋಪಿಸಿದ್ದರು. ಆದರೆ, ಇಲ್ಲಿಯವರೆಗೂ ಅವರಿಂದ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡಿಲ್ಲ. ಡಿಸೆಂಬರ್ 27ರಂದು ಸುಮಾರು 8:03 ಗಂಟೆಗೆ 80 ಅವೆನ್ಯೂದ 14900 ಬ್ಲಾಕ್‌ನಲ್ಲಿ ಈ ಘಟನೆ ಸಂಭವಿಸಿದೆ. ಸರ್ರೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸರ (RCMP)ಪ್ರಕಾರ, ಗುಂಡು ಹಾರಿಸಿದ ನಿವಾಸವು ಸರ್ರೆಯ ಲಕ್ಷ್ಮೀ ನಾರಾಯಣ ದೇವಸ್ಥಾನದ ಅಧ್ಯಕ್ಷ ಸತೀಶ್ ಕುಮಾರ್ ಅವರ ಹಿರಿಯ ಮಗನಿಗೆ ಸೇರಿದೆ. ತನ್ನ ಮಗನ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಕನಿಷ್ಠ 14 ಸುತ್ತು ಗುಂಡು ಹಾರಿಸಲಾಗಿದೆ ಎಂದು ಸತೀಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಕೆನಡಾ ಬಳಿಕ ಅಮೆರಿಕಾದಲ್ಲೂ ಹಿಂದೂ ದೇವಾಲಯ ಧ್ವಂಸ: ಭಾರತ ವಿರೋಧಿ ಘೋಷಣೆ ಬರೆದ ಖಲಿಸ್ತಾನಿಗಳು ಗುಂಡಿನ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಆದರೆ ಗುಂಡಿನ ದಾಳಿಯಲ್ಲಿ ಮನೆಗೆ ಹಾನಿಯಾಗಿದೆ. ಪೊಲೀಸರು ಹಲವಾರು ಗಂಟೆಗಳ ಕಾಲ ಘಟನಾ ಸ್ಥಳದಲ್ಲಿಯೇ ಇದ್ದು ಸ್ಥಳವನ್ನು ಪರಿಶೀಲಿಸಿದರು. ಸಂಭವನೀಯ ಸಿಸಿಟಿವಿ ದೃಶ್ಯಗಳಿಗಾಗಿ ನೆರೆಹೊರೆಯಿಂದಲೂ ಪಡೆದಿದ್ದಾರೆ. ಸರ್ರೆ RCMP ಸಾಮಾನ್ಯ ತನಿಖಾ ಘಟಕವು ತನಿಖೆಯನ್ನು ವಹಿಸಿಕೊಂಡಿದೆ. ಅಧಿಕಾರಿಗಳು ದಾಳಿಯ ಹಿಂದಿನ ಉದ್ದೇಶವನ್ನು ನಿರ್ಧರಿಸಲು ಕೆಲಸ ಮಾಡುತ್ತಿದ್ದಾರೆ. ಕೆನಡಾದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಖಾಲಿಸ್ತಾನಿಗಳು ದೇವಾಲಯಗಳ ಧ್ವಂಸ, ಹಿಂದೂ ವಿರೋಧಿ ಬರಹಗಳನ್ನು ಬರೆಯುತ್ತಿರುವುದು ಅಲ್ಲಿನ ಹಿಂದೂಗಳು ಆತಂಕಕ್ಕೀಡಾಗುವಂತೆ ಮಾಡಿದೆ. ಇತ್ತೀಚಿನ ಘಟನೆಗಳಲ್ಲಿ, ಸರ್ರೆಯ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಭಾರತ ವಿರೋಧಿ ಚಿತ್ರಗಳನ್ನು ಬರೆಯಲಾಗಿದೆ. ಗ್ರೇಟರ್ ಟೊರೊಂಟೊ ಪ್ರದೇಶದಲ್ಲಿ ದೇವಾಲಯಗಳ ಧ್ವಂಸ ಘಟನೆಗಳು ನಡೆದಿವೆ. ಕೆನಡಾದಲ್ಲಿ ದೇವಸ್ಥಾನದ ಅರ್ಚಕನ ಮಗನ ಮನೆಯ ಮೇಲೆ ಖಲಿಸ್ತಾನಿಗಳಿಂದ 14 ಸುತ್ತು ಗುಂಡಿನ ದಾಳಿ!