Mumbai Rains ವಾಣಿಜ್ಯ ನಗರಿಯಲ್ಲಿ ಮುಂಗಾರು ಮಳೆ ಆರ್ಭಟ: ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ

ಮಹಾರಾಷ್ಟ್ರದ ಮುಂಬಯಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಮುಂಗಾರು ಮಾರುತಗಳು ಪ್ರವೇಶಿಸಿದ್ದು, ತನ್ನ ಆರ್ಭಟ ಪ್ರದರ್ಶಿಸುತ್ತಿದೆ. ಇದರಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.

Mumbai Rains ವಾಣಿಜ್ಯ ನಗರಿಯಲ್ಲಿ ಮುಂಗಾರು ಮಳೆ ಆರ್ಭಟ: ರಸ್ತೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ
Linkup
ಮುಂಬಯಿ: ವಾಣಿಜ್ಯ ನಗರಿ ಮುಂಬಯಿನಲ್ಲಿ ಪ್ರವೇಶಿಸಿದ್ದು, ಮೊದಲ ದಿನವೇ ತನ್ನ ಆರ್ಭಟ ಪ್ರದರ್ಶಿಸಿದೆ. ಬುಧವಾರ ಬೆಳಿಗ್ಗೆ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ರಸ್ತೆಗಳು ಜಲಾವೃತವಾಗಿದ್ದು, ಪಾದಚಾರಿ ಮಾರ್ಗಗಳು ಕೂಡ ಮುಳುಗಿಹೋಗಿವೆ. ಇದರಿಂದ ವಾಹನ ಸವಾರರು ಮತ್ತು ಜನಸಾಮಾನ್ಯರು ರಸ್ತೆಗಳಲ್ಲಿ ಸಾಗಲು ಪರದಾಡುವಂತಾಗಿದೆ. ಸ್ಥಳೀಯ ಬಸ್ ಹಾಗೂ ರೈಲು ಸೇವೆಗಳಿಗೆ ಕೂಡ ತೊಂದರೆಯಾಗಿದೆ. ಜೂನ್ 3ರಂದು ಕೇರಳವನ್ನು ಮುಂಗಾರು ಮಾರುತಗಳು ಪ್ರವೇಶಿಸಿದ್ದವು. ಮುಂಬಯಿಗೆ ಜೂನ್ 10ರಂದು ಮುಂಗಾರು ಪ್ರವೇಶಿಸುವ ನಿರೀಕ್ಷೆಯಿತ್ತು. ಆದರೆ ಅದಕ್ಕೂ ಮೊದಲೇ ವರುಣನ ಆರ್ಭಟ ಆರಂಭವಾಗಿದೆ. ಬೆಳಿಗ್ಗೆ 8.30ರ ವೇಳೆಗೆ ಮುಂಬಯಿಯ ಕೊಲಬಾದಲ್ಲಿ 24 ಗಂಟೆಗಳ ಅವಧಿಯಲ್ಲಿ 77 ಮಿಮೀ ಮಳೆ ಸುರಿದಿದೆ. ಮುಂಬಯಿನ ಕೆಳಮಟ್ಟದ ಪ್ರದೇಶಗಳಲ್ಲಿ ನುಗ್ಗಿದ್ದು, ಜನ ಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದ್ವಿಚಕ್ರ ವಾಹನಗಳ ಅರ್ಧಮಟ್ಟಕ್ಕೆ ಮುಚ್ಚುವಷ್ಟು ನೀರು ರಸ್ತೆಗಳಲ್ಲಿ ಹರಿಯುತ್ತಿದ್ದು, ಅನೇಕರ ವಾಹನಗಳು ಕೆಟ್ಟುನಿಂತು ಪರದಾಡುವಂತಾಗಿದೆ. ಸಿಯಾನ್ ಮತ್ತು ಕುರ್ಲಾಗಳಲ್ಲಿ ವಿಪರೀತ ಮಳೆಯಿಂದಾಗಿ ರೈಲು ಹಳಿ ನೀರಿನಿಂದ ಮುಚ್ಚಿಹೋಗಿದೆ. ಇದರಿಂದ ಬೆಳಿಗ್ಗೆ 9.50ರಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಸ್ಥಳೀಯ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ಉಳಿದ ಕಡೆಗಳಲ್ಲಿ ರೈಲು ಸಂಚಾರ ಎಂದಿನಂತೆ ನಡೆಯುತ್ತಿದೆ. ಚೆಂಬೂರ್‌ನ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಮಳೆಯಿಂದಾಗಿ ವಿಪರೀತ ಸಂಚಾರ ದಟ್ಟಣೆ ಉಂಟಾಗಿದ್ದು, ಕಿಲೋಮೀಟರ್‌ಗಟ್ಟಲೆ ವಾಹನಗಳು ನಿಂತಿದ್ದವು. ಮಳೆಯ ಅಬ್ಬರದಿಂದಾಗಿ ಕೋವಿಡ್ ಲಸಿಕೆ ಕೇಂದ್ರಗಳನ್ನು ಮುಚ್ಚುವಂತಾಗಿದ್ದು, ಜನರಿಗೆ ಲಸಿಕೆಗಳು ಸಿಗದೆ ವಾಪಸಾಗುವಂತಾಯಿತು. ಮುಂಬಯಿಯ ಸಾಂಟಾ ಕ್ರೂಜ್‌ನಲ್ಲಿ ಬೆಳಿಗ್ಗೆ 8.30ರಿಂದ 11.30ರ ಕೇವಲ ಮೂರು ಗಂಟೆ ಅವಧಿಯಲ್ಲಿ 102.8 ಮಿಮೀ ಮಳೆ ಸುರಿದಿದೆ. ಬೆಳಿಗ್ಗೆಯಿಂದಲೂ ಸುಮಾರು 14 ಕಡೆ ಬಿಇಎಸ್‌ಟಿ ಬಸ್‌ಗಳು ಕೆಟ್ಟು ನಿಂತಿರುವುದು ವರದಿಯಾಗಿದೆ. ಪಾಲ್ಗಾರ್‌ನಲ್ಲಿ ಜೂನ್ 12ರವರೆಗೂ ಭಾರಿ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಜನರು ಹೊರಗೆ ಬಾರದಂತೆ ಸೂಚಿಸಲಾಗಿದ್ದು, ಕರಾವಳಿ ತೀರದಲ್ಲಿ ಕಟ್ಟೆಚ್ಚರ ವಹಿಸುವಂತೆ ಹೇಳಲಾಗಿದೆ.