ಬೆಂಗಳೂರು ಡ್ರಗ್ಸ್‌ ಮಾರಾಟ ಕೇಸ್‌ನಲ್ಲಿ ಮಾಜಿ ಸಚಿವ ಸಿಪಿ ಯೋಗೇಶ್ವರ್‌ ಪತ್ನಿಯ ಸಹೋದರನ ಬಂಧನ!

ಡ್ರಗ್ಸ್‌ ಮಾರಾಟ ಮಾಡಿ ಸಿಕ್ಕಿ ಬಿದ್ದಿರುವ ರತನ್‌ಲಾಲ್‌ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್‌ ಅವರ ಪತ್ನಿಯ ಸಹೋದರನೆಂಬುದು ತಿಳಿದು ಬಂದಿದೆ. ಈತನ ವಿಚಾರಣೆ ವೇಳೆ ಹಲವು ಮಾಹಿತಿಗಳು ಹೊರಬಿದ್ದಿವೆ.. ರಾಜಸ್ಥಾನ ಮೂಲದ ರತನ್‌ಲಾಲ್‌ನನ್ನು ನಾಲ್ಕು ದಿನಗಳ ಹಿಂದೆಯೇ ಪೊಲೀಸರು ಬಂಧಿಸಿದ್ದರು. ರತನ್‌ಲಾಲ್‌ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರ ಪತ್ನಿಯ ಸಹೋದರನಾಗಿದ್ದರೂ, ಈ ಪ್ರಕರಣಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್‌ ಮೂಲಗಳು ಸ್ಪಷ್ಟಪಡಿಸಿವೆ.

ಬೆಂಗಳೂರು ಡ್ರಗ್ಸ್‌ ಮಾರಾಟ ಕೇಸ್‌ನಲ್ಲಿ ಮಾಜಿ ಸಚಿವ ಸಿಪಿ ಯೋಗೇಶ್ವರ್‌ ಪತ್ನಿಯ ಸಹೋದರನ ಬಂಧನ!
Linkup
ಬೆಂಗಳೂರು: ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡಿಕೊಂಡು ಡ್ರಗ್ಸ್‌ ಮಾರಾಟ ಮಾಡಿ ಸಿಕ್ಕಿ ಬಿದ್ದಿರುವ ರತನ್‌ಲಾಲ್‌ ಮಾಜಿ ಸಚಿವ ಸಿ.ಪಿ.ಯೋಗೀಶ್ವರ್‌ ಅವರ ಪತ್ನಿಯ ಸಹೋದರನೆಂಬುದು ತಿಳಿದು ಬಂದಿದೆ. ಈತನ ವಿಚಾರಣೆ ವೇಳೆ ಹಲವು ಮಾಹಿತಿಗಳು ಹೊರಬಿದ್ದಿವೆ. ರಾಜಸ್ಥಾನ ಮೂಲದ ರತನ್‌ಲಾಲ್‌ನನ್ನು ನಾಲ್ಕು ದಿನಗಳ ಹಿಂದೆಯೇ ಪೊಲೀಸರು ಬಂಧಿಸಿದ್ದರು. ಈಗ ವಿಚಾರಣೆಗಾಗಿ 5 ದಿನಗಳ ಕಾಲ ವಶಕ್ಕೆ ಪಡೆದಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆತನನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ರತನ್‌ಲಾಲ್‌ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಅವರ ಪತ್ನಿಯ ಸಹೋದರನಾಗಿದ್ದರೂ, ಈ ಪ್ರಕರಣಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸ್‌ ಮೂಲಗಳು ಸ್ಪಷ್ಟಪಡಿಸಿವೆ. ಆರೋಪಿಯು ಕಳೆದ ಹಲವು ವರ್ಷಗಳಿಂದ ಡ್ರಗ್ಸ್‌ ದಂಧೆ ನಡೆಸುತ್ತಿದ್ದ. ಡ್ರಗ್ಸ್‌ನಿಂದಲೇ ಹಣ ಸಂಪಾದನೆಗೆ ಇಳಿದಿದ್ದ. ತನ್ನ ಡ್ರಗ್‌ ಮಾಫಿಯಾಗೆ ಪೊಲೀಸರನ್ನೇ ಗಾಳ ಮಾಡಿಕೊಂಡಿದ್ದ ರತನ್‌ಲಾಲ್‌, ತನ್ನ ಮೇಲೆ ಅನುಮಾನ ಬಾರದೇ ಇರಲಿ ಎಂಬ ಕಾರಣಕ್ಕೆ ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡಿಕೊಂಡಿದ್ದ. ಗಾಂಜಾ, ಆಫೀಮನ್ನು ಆಂಧ್ರ ಪ್ರದೇಶದ ವೈಜಾಗ್‌ನಲ್ಲಿ ಖರೀದಿಸುತ್ತಿದ್ದ. ಸಾಮಾನ್ಯವಾಗಿ ಆಂಧ್ರದ ಗುಡ್ಡಗಾಡು ಪ್ರದೇಶಗಳಲ್ಲಿ ನಕ್ಸಲರು ಗಾಂಜಾ ಬೆಳೆಯುವ ಶಂಕೆ ವ್ಯಕ್ತವಾಗಿದೆ. ರತನ್‌ ಸಹ ಆಂಧ್ರದಲ್ಲಿರುವ ನಕ್ಸಲ್‌ ಸಂಪರ್ಕಿತರಿಂದ ಗಾಂಜಾ ಖರೀದಿಸುತ್ತಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ಆಂಧ್ರದ ವೈಜಾಗ್‌ ಮತ್ತು ಒರಿಸ್ಸಾ ಗಡಿಭಾಗಗಳಲ್ಲಿ ಸಹಚರರ ಮೂಲಕ ಕಡಿಮೆ ಬೆಲೆಗೆ ಡ್ರಗ್ಸ್‌ ಖರೀದಿಸಿ ನಗರಕ್ಕೆ ತರುತ್ತಿದ್ದ. ಜತೆಗೆ ನಾನ್‌ ಸಿಂಥಟಿಕ್‌ ಡ್ರಗ್ಸ್‌ ಅನ್ನು ರಾಜಾಸ್ಥಾನ ಮೂಲದ ಪೆಡ್ಲರ್‌ಗಳಿಂದ ಖರೀದಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಇನ್ನೂ ದೃಢವಾಗಿಲ್ಲ. ಪೌಡರ್‌ ಡಬ್ಬದಲ್ಲಿಹೆರಾಯಿನ್‌ ತುಂಬಿಸಿ ಮಾರಾಟ ಮಾಡುತ್ತಿದ್ದ ಡ್ರಗ್‌ ಪೆಡ್ಲರ್‌ ಬಂಧನ ಬೆಂಗಳೂರು: ನಾನಾ ರಾಜ್ಯಗಳಿಂದ ಕಡಿಮೆ ಬೆಲೆಗೆ ಹೆರಾಯಿನ್‌ ಖರೀದಿಸಿ ನಗರಕ್ಕೆ ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಡ್ರಗ್‌ ಪೆಡ್ಲರ್‌ನನ್ನು ಕೆ.ಜಿ. ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಣಿಪುರದ ಸೋರಾಯ್‌ ಸ್ಯಾಮ್‌ ಬೋರಿಸ್‌ ಸಿಂಗ್‌ (21) ಬಂಧಿತ. ಆರೋಪಿಯಿಂದ ಎರಡು ಲಕ್ಷ ಮೌಲ್ಯದ 10 ಗ್ರಾಂ ಹೆರಾಯಿನ್‌, ಒಂದು ಸಾವಿರ ನಗದು, ಪಾಂಡ್ಸ್‌ ಪೌಡರ್‌ ಡಬ್ಬಿಗಳು, ಐದು ಚಿಕ್ಕ ಚಿಕ್ಕ ಪ್ಲಾಸ್ಟಿಕ್‌ ಡಬ್ಬಿಗಳು, ಕಪ್ಪು ಬಣ್ಣದ ಪ್ಲಾಸ್ಟಿಕ್‌ ಬ್ಯಾಗ್‌, ಏರ್‌ ಇಂಡಿಯಾ ಬೋರ್ಡಿಂಗ್‌ನ ಮೂರು ಪಾಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿ ಎಚ್‌ಬಿಆರ್‌ ಲೇಔಟ್‌ನ ಅಮ್ಮಾಸ್‌ ಬೇಕರಿ ಹಿಂಭಾಗದ ರಸ್ತೆಯೊಂದರಲ್ಲಿ ಕಪ್ಪು ಬ್ಯಾಗ್‌ ಹಿಡಿದುಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಪೊಲಿಸರಿಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ಸುತ್ತುವರಿದು ಬಂಧಿಸಿದ್ದಾರೆ. ಸಿನಿಮೀಯ ಶೈಲಿಯಲ್ಲಿ ಹೆರಾಯಿನ್‌ ಸಾಗಟ: ತಮಿಳಿನ ಐಯಾನ್‌ ಚಿತ್ರವನ್ನು ಹತ್ತಾರು ಬಾರಿ ವೀಕ್ಷಿಸಿದ ಆರೋಪಿ ಸಿನಿಮಾದಲ್ಲಿ ನಾಯಕ ಸೂರ್ಯ ಮಾದಕ ವಸ್ತು ಸಾಗಿಸುವ ರೀತಿಯಲ್ಲೇ ತಾನು ಸಾಗಿಸಬೇಕೆಂದುಕೊಂಡು ಪಾಂಡ್ಸ್‌ ಪೌಡರ್‌ನ ಖಾಲಿ ಡಬ್ಬಿಯಲ್ಲಿ ಹೆರಾಯಿನ್‌ ತುಂಬಿಕೊಂಡು ಸಾಗಿಸುತ್ತಿದ್ದ. ನೋಡಿದವರಿಗೂ ಇದು ಪಾಂಡ್ಸ್‌ ಪೌಡರ್‌ ಡಬ್ಬಿ ಎಂದೇ ಗೋಚರವಾಗುತ್ತಿತ್ತು. ಆರೋಪಿ ಇದೇ ರೀತಿ ಹೆರಾಯಿನ್‌ ತುಂಬಿಕೊಂಡು ಹಲವಾರು ಬಾರಿ ಮಣಿಪುರದಿಂದ ಬೆಂಗಳೂರಿಗೆ ಕಸ್ಟಮ್ಸ್‌ ಅಧಿಕಾರಿಗಳ ಕಣ್ತಪ್ಪಿಸಿ ವಿಮಾನದ ಮೂಲಕವೇ ಬಂದು, ಇಲ್ಲಿನ ಟೆಕ್ಕಿಗಳು, ಉದ್ಯಮಿಗಳು, ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಾದಕ ವ್ಯಸನಿಗಳಿಗೆ ಮಾರಾಟ ಮಾಡಿ ತಮ್ಮೂರಿಗೆ ತೆರಳುತ್ತಿದ್ದ. ಇದರಿಂದ ಲಕ್ಷಾಂತರ ರೂ. ಗಳಿಸುತ್ತಿರುವುದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು. ಸದ್ಯ ಆರೋಪಿ ವಿರುದ್ಧ ಕೆ.ಜಿ. ಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.