'ನಟಿ ಸಮಂತಾ ಶೀಘ್ರದಲ್ಲೇ ತಾಯಿಯಾಗುವ ಬಯಕೆ ಹೊಂದಿದ್ದರು'- ಖ್ಯಾತ ನಿರ್ಮಾಪಕಿ!

ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಲೇ ಇದೆ. ಹಲವು ರೀತಿಯಲ್ಲಿ ಸಮಂತಾ ಬಗ್ಗೆ ವದಂತಿ ಹಬ್ಬಿಸಲಾಗುತ್ತಿದೆ. ಈ ಮಧ್ಯೆ ನಿರ್ಮಾಪಕಿಯೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ.

'ನಟಿ ಸಮಂತಾ ಶೀಘ್ರದಲ್ಲೇ ತಾಯಿಯಾಗುವ ಬಯಕೆ ಹೊಂದಿದ್ದರು'- ಖ್ಯಾತ ನಿರ್ಮಾಪಕಿ!
Linkup
ಕಳೆದೊಂದು ತಿಂಗಳಿನಿಂದ ನಟಿ ರುತ್ ಪ್ರಭು ಅವರ ಹೆಸರು ಚಾಲ್ತಿಯಲ್ಲಿದೆ. ನಟ ಮತ್ತು ಸಮಂತಾ ಜೋಡಿ ದೂರವಾದ ಮೇಲೆ ಅನೇಕ ವದಂತಿಗಳು ಇಬ್ಬರ ಬಗ್ಗೆ ಕೇಳಿಬಂದಿವೆ. ಅದರಲ್ಲೂ ಸಮಂತಾ ಬಗ್ಗೆ ಇಲ್ಲಸಲ್ಲದ ಗಾಸಿಪ್‌ಗಳನ್ನು ಹಬ್ಬಿಸಿ, ವಿಕೃತ ಖುಷಿ ಅನುಭವಿಸಿದವರೇ ಹೆಚ್ಚು. 'ಸಮಂತಾಗೆ ಅಬಾರ್ಷನ್ ಆಗಿತ್ತು.. ಅವರಿಗೆ ಮಕ್ಕಳು ಬೇಕಿರಲಿಲ್ಲ... ಮಗುವಾದರೆ ಸೌಂದರ್ಯ ಹಾಳಾಗುತ್ತೆ ಎಂದುಕೊಂಡಿದ್ದರು..'- ಹೀಗೆ ಬೇಕಾಬಿಟ್ಟಿ ಮಾತುಗಳು ಕೇಳಿಬಂದಿದ್ದವು. ಆದರೆ, ಸಮಂತಾ ಅವರ ಪ್ಲ್ಯಾನ್‌ಗಳು ಏನಿದ್ದವು ಎಂಬ ಬಗ್ಗೆ ನಿರ್ಮಾಪಕಿ ನೀಲಿಮಾ ಗುಣ ಮಾತನಾಡಿದ್ದಾರೆ! 'ಶೀಘ್ರದಲ್ಲೇ ನಾಗ ಚೈತನ್ಯರ ಮಗುವಿಗೆ ತಾಯಿ ಆಗಬೇಕೆಂದು ಸಮಂತಾ ಅಂದುಕೊಂಡಿದ್ದರು' ಎಂದು ನೀಲಿಮಾ ಮಾಹಿತಿ ನೀಡಿದ್ದಾರೆ! ಶಾಕುಂತಲಂ ಸಿನಿಮಾದಲ್ಲಿ ನಟಿಸಿರುವ ಸಮಂತಾಈಚೆಗೆ ಸಮಂತಾ 'ಶಾಕುಂತಲಂ' ಸಿನಿಮಾದ ಶೂಟಿಂಗ್ ಮುಗಿಸಿಕೊಟ್ಟಿದ್ದರು. ಅದನ್ನು ನಿರ್ದೇಶಿಸಿದವರು ಗುಣಶೇಖರ್. ನಿರ್ಮಾಣದ ಹೊಣೆ ಅವರ ಪುತ್ರಿ ನೀಲಿಮಾ ಗುಣ ಅವರದ್ದು. ಈಚೆಗೆ ಒಂದು ಸಂದರ್ಶನದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದು, 'ಕಳೆದ ವರ್ಷ ನಮ್ಮ ತಂದೆ ಗುಣಶೇಖರ್ ಅವರು 'ಶಾಕುಂತಲಂ' ಸಿನಿಮಾದಲ್ಲಿ ನಟಿಸುವಂತೆ ಸಮಂತಾಗೆ ಆಫರ್ ನೀಡಿದ್ದರು. ಆಗ ಅವರು ಕಥೆ ಕೇಳಿ ಎಕ್ಸೈಟ್ ಆಗಿದ್ದರು. ಆದರೆ, 2021ರ ಜುಲೈ ಅಥವಾ ಆಗಸ್ಟ್ ಒಳಗೆ ಶೂಟಿಂಗ್ ಮುಗಿಸಬೇಕು ಎಂದು ಕೇಳಿದ್ದರು. ಯಾಕೆಂದರೆ, ಅವರು ನಾಗ ಚೈತನ್ಯ ಅವರ ಮಗುವಿಗೆ ತಾಯಿ ಆಗಬೇಕು ಎಂದು ಬಯಕೆ ಹೊಂದಿದ್ದರು' ಎಂದು ಹೇಳಿದ್ದಾರೆ. 'ಸಮಂತಾ ತಾಯಿ ಆಗಬೇಕು ಎಂದುಕೊಂಡಿದ್ದರು. ಅದಕ್ಕೆ ತಮ್ಮ ಮೊದಲ ಪ್ರಾಶಸ್ತ್ಯ ಎಂದು ಅವರು ಹೇಳಿದ್ದರು. ಪಿರಿಯಾಡಿಕ್ ಸಿನಿಮಾಗಳು ಸಾಕಷ್ಟು ಸಮಯ ತೆಗೆದುಕೊಳ್ಳುತ್ತವೆ. ಆದ್ದರಿಂದ ಸಮಂತಾ ಕೊಂಚ ಆತಂಕಗೊಂಡಿದ್ದರು. ಆದರೆ, ನಮ್ಮ ಪೂರ್ವತಯಾರಿ ಉತ್ತಮವಾಗಿದ್ದರಿಂದ ಜಾಸ್ತಿ ಸಮಯ ತೆಗೆದುಕೊಳ್ಳಲಿಲ್ಲ. ಅದರಿಂದ ಸಮಂತಾ ಖುಷಿ ಪಟ್ಟಿದ್ದರು. ಮಗು ಮಾಡಿಕೊಳ್ಳುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದ ಸಮಂತಾ, ಅದಕ್ಕೆ ಸಿನಿಮಾರಂಗದಿಂದ ಬ್ರೇಕ್‌ ತೆಗೆದುಕೊಳ್ಳಬೇಕು ಎಂದುಕೊಂಡಿದ್ದರು. ಹಾಗಾಗಿ, ಯಾವುದೇ ಬ್ರೇಕ್ ತೆಗೆದುಕೊಳ್ಳದೇ ಶೂಟಿಂಗ್ ಮುಗಿಸಿದೆವು' ಎಂದು ಅವರು ಹೇಳಿದ್ದಾರೆ. ವದಂತಿಗಳಿಗೆ ಪ್ರತಿಕ್ರಿಯಿಸಿದ್ದ ಸಮಂತಾಇನ್ನು, ತಮ್ಮ ಬಗ್ಗೆ ಹಬ್ಬಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಮಂತಾ, 'ನನ್ನ ಕುರಿತಾಗಿ ಹಲವು ರೀತಿಯ ವದಂತಿಗಳು ಹಬ್ಬಿವೆ. ನನಗೆ ಬೇರೆಯವರೊಂದಿಗೆ ಸಂಬಂಧ ಇತ್ತು, ನನಗೆ ಮಕ್ಕಳು ಬೇಕಿರಲಿಲ್ಲ, ನಾನು ಅವಕಾಶವಾದಿಯಾಗಿದ್ದೆ, ಈಗ ನಾನು ಗರ್ಭಪಾತ ಮಾಡಿಸಿಕೊಂಡಿದ್ದೇನೆ ಎಂದೆಲ್ಲ ಹೇಳಿದ್ದಾರೆ. ಆದರೆ ಈ ವದಂತಿಗಳು ನಿಜವಲ್ಲ, ವಿಚ್ಛೇದನವೇ ಒಂದು ದೀರ್ಘವಾದ ನೋವಿನ ಪ್ರಕ್ರಿಯೆ, ಇದರಿಂದ ಗುಣವಾಗಲು ನನಗೆ ಸಮಯ ನೀಡಿ. ವೈಯಕ್ತಿಕವಾಗಿ ಇಂತಹ ದಾಳಿಗಳ ಮೂಲಕ ನನ್ನ ಮನಸ್ಸನ್ನು ಘಾಸಿಗೊಳಿಸಲಾಗುತ್ತಿದೆ. ಆದರೆ ನಾನು ಒಂದು ಪ್ರಾಮಿಸ್ ಮಾಡುತ್ತೇನೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಮತ್ತು ಈ ರೀತಿಯ ದಾಳಿಯಿಂದ ನನ್ನನ್ನು ಮುರಿಯಲು ಸಾಧ್ಯವಿಲ್ಲ' ಎಂದಿದ್ದರು.