ವರ್ಚ್ಯುವಲ್ ವಿಚಾರಣೆ ವೇಳೆ ಮಹಿಳೆ ಜತೆ ವಕೀಲನ ಚಕ್ಕಂದ: ಬಾರ್ ಕೌನ್ಸಿಲ್‌ನಿಂದ ಅಮಾನತು

ಆನ್‌ಲೈನ್ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಮಹಿಳೆಯೊಬ್ಬಳ ಜತೆ ಚಕ್ಕಂದವಾಡುತ್ತಿದ್ದ ವಕೀಲರನ್ನು ತಮಿಳುನಾಡು ಬಾರ್ ಕೌನ್ಸಿಲ್ ಅಮಾನತು ಮಾಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಅವರು ಸರಸ ಸಲ್ಲಾಪದಲ್ಲಿ ತೊಡಗಿರುವುದು ಪರದೆ ಮೇಲೆ ಮೂಡಿದೆ.

ವರ್ಚ್ಯುವಲ್ ವಿಚಾರಣೆ ವೇಳೆ ಮಹಿಳೆ ಜತೆ ವಕೀಲನ ಚಕ್ಕಂದ: ಬಾರ್ ಕೌನ್ಸಿಲ್‌ನಿಂದ ಅಮಾನತು
Linkup
ಚೆನ್ನೈ: ಪ್ರಕರಣವೊಂದರ ವರ್ಚ್ಯುವಲ್ ವಿಚಾರಣೆ ವೇಳೆ ಮಹಿಳೆಯೊಬ್ಬರೊಂದಿಗೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಕೀಲರೊಬ್ಬರನ್ನು ವಕೀಲಿಕೆಯಿಂದ ಮಾಡುವುದರಿಂದ ಮತ್ತು ಪುದುಚೆರಿ ನಿಷೇಧಿಸಿದೆ. ಚೆನ್ನೈನ ಆರ್‌ಡಿ ಸಾಂತನ ಕೃಷ್ಣನ್ ಅವರು ಎಲ್ಲ ನ್ಯಾಯಾಲಯಗಳಲ್ಲಿ, ನ್ಯಾಯಮಂಡಳಿಗಳಲ್ಲಿ ಮತ್ತು ಭಾರತದ ಇತರೆ ಪ್ರಾಧಿಕಾರಗಳಲ್ಲಿ ಅವರು ತಮ್ಮ ಹೆಸರು ಅಥವಾ ಬೇರೆ ಯಾವುದೇ ಹೆಸರಿನೊಂದಿಗೆ ವಕಾಲತ್ತು ವಹಿಸುವಂತಿಲ್ಲ. ಅವರ ಅಸಭ್ಯ ವರ್ತನೆ ವಿರುದ್ಧದ ಆರೋಪದ ಕುರಿತಾದ ಶಿಸ್ತು ಕ್ರಮದ ವಿಚಾರಣೆ ಮುಗಿದು ಅಂತಿಮ ತೀರ್ಮಾನ ಕೈಗೊಳ್ಳುವವರೆಗೂ ಈ ಮುಂದುವರಿಯಲಿದೆ ಎಂದು ಬಾರ್ ಕೌನ್ಸಿಲ್ ಹೇಳಿದೆ. ವಕೀಲ ಸಾಂತನ ಕೃಷ್ಣನ್ ವಿರುದ್ಧ ನ್ಯಾಯಾಧೀಶರಾದ ಪಿಎನ್ ಪ್ರಕಾಶ್ ಮತ್ತು ಆರ್ ಹೇಮಲತಾ ಅವರು ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಆರಂಭಿಸಿದ್ದಾರೆ. ಹಾಗೂ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಮತ್ತು ಡಿಸೆಂಬರ್ 23ರಂದು ವರದಿ ಸಲ್ಲಿಸುವಂತೆ ಸಿಬಿ-ಸಿಐಡಿ ವಿಭಾಗದ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಸಾಂತನ ಕೃಷ್ಣನ್ ವಿರುದ್ಧ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ತಮಿಳುನಾಡು ಬಾರ್ ಕೌನ್ಸಿಲ್‌ಗೆ ನ್ಯಾಯಾಧೀಶರು ಸೂಚಿಸಿದ್ದರು. ಅದರ ಅನ್ವಯ ಅವರು ಎಲ್ಲಿಯೂ ವಕೀಲಿಕೆ ಮಾಡಬಾರದು ಎಂಬ ನಿರ್ಣಯವನ್ನು ಬಾರ್ ಕೌನ್ಸಿಲ್ ಬುಧವಾರ ಕೈಗೊಂಡಿದೆ. ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಕರಣವೊಂದರ ವಿಚಾರಣೆ ವೇಳೆ ವಕೀಲ ಮಹಿಳೆಯೊಬ್ಬರ ಜತೆ ಚಕ್ಕಂದವಾಡುತ್ತಿದ್ದರು. ಅವರು ಮೈಮರೆತು ಸರಸದಲ್ಲಿ ತೊಡಗಿದ್ದ ವಿಡಿಯೋ ನ್ಯಾಯಾಧೀಶರಿಗೆ ಕಾಣಸಿತ್ತು. ಕೆಲವರು ಈ ದೃಶ್ಯವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಹೀಗಾಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಕೋರ್ಟ್‌ ಪ್ರಕ್ರಿಯೆಗಳ ವೇಳೆ ಅಸಭ್ಯತೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಾಗ ನ್ಯಾಯಾಲಯವು ಮೂಲ ಪ್ರೇಕ್ಷಕನಾಗಿ ಇರಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಕಮಿಷನರ್‌ ಅವರಿಗೆ ಕೋರ್ಟ್ ಆದೇಶ ನೀಡಿದೆ. 'ವಕೀಲನ ಜತೆಗಿದ್ದ ಮಹಿಳೆ ಕಿರಿಯ ವಕೀಲೆ ಇರಬಹುದು ಅಥವಾ ಅವರ ಬಳಿ ಕೆಲಸ ಮಾಡುತ್ತಿರುವ ಇಂಟರ್ನಿ ಇರಬಹುದು ಅಥವಾ ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿತ ವಕೀಲಿಕೆ ಮಾಡುತ್ತಿರುವ ವಕೀಲೆ ಇರುವುದು. ಆಕೆಯ ಬಗ್ಗೆ ನಮಗೆ ತಿಳಿದಿಲ್ಲ. ವಕೀಲರೊಂದಿಗೆ ವಾಸಿಸುತ್ತಿರುವ ಮಹಿಳೆಯೂ ಇರಬಹುದು. ನಮಗೆ ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗುವವರೆಗೂ ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ' ಎಂದು ತಮಿಳುನಾಡು ಮತ್ತು ಪುದುಚೆರಿ ಬಾರ್ ಕೌನ್ಸಿಲ್ ಕಾರ್ಯದರ್ಶಿ ಸಿ. ರಾಜಾ ಕುಮಾರ್ ತಿಳಿಸಿದ್ದಾರೆ. ವಕೀಲರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ಕುರಿತಾದ ನಿರ್ಧಾರವನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ತೆಗೆದುಕೊಳ್ಳುವ ಸಾಧ್ಯತೆ ಇದೆ.