ರವಿಚಂದ್ರನ್ ಸಿನಿಮಾಗಳಲ್ಲಿ ಹಾಡುಗಳು ಬಂದರೆ ಥಿಯೇಟರ್‌ನಲ್ಲಿ ಯಾರೂ ಎದ್ದು ಹೋಗುತ್ತಿರಲಿಲ್ಲ!

ಸಿನಿಮಾ ಪ್ರಮೋಷನ್ ವಿಷಯಕ್ಕೆ ಬಂದರೆ ರವಿಚಂದ್ರನ್ ಭಿನ್ನ-ವಿಭಿನ್ನವಾಗಿ ಪಬ್ಲಿಸಿಟಿ ಮಾಡುತ್ತಿದ್ದರು. ಈ ಬಗ್ಗೆ ನಿರ್ದೇಶಕ ರಘುರಾಮ್ ನಿಮ್ಮ 'ವಿಜಯ ಕರ್ನಾಟಕ ವೆಬ್' ಆರಂಭಿಸಿರುವ 'ಕನಸುಗಾರನ ಕಹಾನಿ' ವಿಶೇಷ ಸರಣಿಯಲ್ಲಿ ಹಂಚಿಕೊಂಡಿದ್ದಾರೆ.

ರವಿಚಂದ್ರನ್ ಸಿನಿಮಾಗಳಲ್ಲಿ ಹಾಡುಗಳು ಬಂದರೆ ಥಿಯೇಟರ್‌ನಲ್ಲಿ ಯಾರೂ ಎದ್ದು ಹೋಗುತ್ತಿರಲಿಲ್ಲ!
Linkup
ಹೇಳಿ ಕೇಳಿ ಕ್ರೇಜಿ ಸ್ಟಾರ್. ರವಿಚಂದ್ರನ್ ಸಿನಿಮಾಗಳು ತೆರೆಗೆ ಬಂದಾಗ ಅಕ್ಷರಶಃ ಕ್ರೇಜ್ ಇರುತ್ತಿತ್ತು. ರವಿಚಂದ್ರನ್ ಸಿನಿಮಾಗಳು ತೆರೆಗೆ ಬಂದರೆ ಫಸ್ಟ್ ಡೇ ಹುಡುಗಿಯರು ಕಾಲೇಜ್‌ಗೆ ಚಕ್ಕರ್ ಹಾಕಿ ಥಿಯೇಟರ್‌ಗೆ ಹೋಗುತ್ತಿದ್ದರು. ಸಿನಿಮಾ ಪ್ರಮೋಷನ್ ವಿಷಯಕ್ಕೆ ಬಂದರೆ ರವಿಚಂದ್ರನ್ ಭಿನ್ನ-ವಿಭಿನ್ನವಾಗಿ ಪಬ್ಲಿಸಿಟಿ ಮಾಡುತ್ತಿದ್ದರು. ಈ ಬಗ್ಗೆ ನಿರ್ದೇಶಕ ನಿಮ್ಮ 'ವಿಜಯ ಕರ್ನಾಟಕ ವೆಬ್' ಆರಂಭಿಸಿರುವ '' ವಿಶೇಷ ಸರಣಿಯಲ್ಲಿ ಹಂಚಿಕೊಂಡಿದ್ದಾರೆ. ಫಸ್ಟ್ ಡೇ ಹುಡುಗಿಯರು ಕಾಲೇಜ್‌ಗೆ ಚಕ್ಕರ್ ಹೊಡೆಯುತ್ತಿದ್ದರು! ''ನನಗೆ ಗೊತ್ತಿರುವ ಹಾಗೆ ರವಿಚಂದ್ರನ್ ಸಿನಿಮಾಗೆ ಮೊದಲ ದಿನವೇ ಥಿಯೇಟರ್‌ಗೆ ಲೇಡೀಸ್ ಬರುತ್ತಿದ್ದರು. ಮೊದಲನೇ ದಿನ ಹೆಣ್ಮಕ್ಕಳು ಥಿಯೇಟರ್‌ಗೆ ಬರುತ್ತಿದ್ದದ್ದು ರವಿಚಂದ್ರನ್‌ ಅವರ ಪಿಕ್ಚರ್‌ಗೆ. ಅವತ್ತಿನ ದಿನಕ್ಕೆ ರವಿಚಂದ್ರನ್‌ಗೆ ರಜಿನಿಕಾಂತ್ ಹಾಗೂ ಕಮಲ್ ಹಾಸನ್ ಅವರಿಗಿದ್ದ ಎರಡೂ ಇಮೇಜ್ ಇತ್ತು. ಫಸ್ಟ್ ಡೇ ಕಾಲೇಜು ಹುಡುಗಿಯರು ಕಾಲೇಜ್‌ಗೆ ಚಕ್ಕರ್ ಹೊಡೆದು ಸಿನಿಮಾಗೆ ಬರ್ತಿದ್ರು. ರವಿಚಂದ್ರನ್ ಸಿನಿಮಾಗಳಲ್ಲಿ ಹಾಡುಗಳು ಬಂದರೆ ಯಾರೂ ಎದ್ದು ಹೋಗುತ್ತಿರಲಿಲ್ಲ. ಹಾಡುಗಳಿಗಾಗಿಯೇ ಕಾಯ್ಕೊಂಡು ಕೂರುತ್ತಿದ್ದರು. ರಾಮಾಚಾರಿ ಪಂಚೆಯುಟ್ಟ ಮೇಲಂತೂ ರೂರಲ್ ಸೆಂಟರ್‌ನಲ್ಲಿ ರವಿಚಂದ್ರನ್ ಡಾರ್ಲಿಂಗ್ ಆಗ್ಬಿಟ್ಟರು'' ರವಿಚಂದ್ರನ್ ಅವರ ಸಂಗೀತದ ಅಭಿರುಚಿ ''ಅಡಿಯೋಗೆ ದೊಡ್ಡ ಮಾರ್ಕೆಟ್ ಇದೆ ಅಂತ ತೋರಿಸಿಕೊಟ್ಟಿದ್ದೇ ರವಿಚಂದ್ರನ್. ಹಂಸಲೇಖ ಅವರು ಯಾವತ್ತೂ ರವಿಚಂದ್ರನ್‌ಗೆ ಸೆಕೆಂಡ್ ಆಪ್ಷನ್ ಕೊಟ್ಟೇ ಇಲ್ಲ. ಅವರಿಬ್ಬರ ಮಧ್ಯೆ ಅಷ್ಟು ಅನ್ಯೋನ್ಯತೆ ಇತ್ತು. 'ಯಾರಿಗೆ ಬೇಕು ಈ ಲೋಕ..' ಹಾಡಿಗೆ ವಯಲಿನ್ ಬಿಟ್ ಕೊಟ್ಟಿದ್ದೇ ರವಿಚಂದ್ರನ್. ಅವರಿಗೆ ಸಂಗೀತದ ಅಭಿರುಚಿ ಮೊದಲಿನಿಂದಲೂ ಇತ್ತು'' ರವಿಚಂದ್ರನ್‌ಗೆ ರಾಮ್‌ಗೋಪಾಲ್ ವರ್ಮ ಹೇಳಿದ್ದೇನು? ''ರವಿಚಂದ್ರನ್ ಎಡಿಟಿಂಗ್ ಕಲಿತರು. 'ಮಂಜಿನ ಹನಿ' ಸಿನಿಮಾಗೆ ಗ್ರಾಫಿಕ್ಸ್ ಮಾಡುವ ಸಲುವಾಗಿ ಮನೆಯ ಹಿಂದೆಯೇ ಆಫೀಸ್ ಸೆಟಪ್ ಮಾಡಿದ್ದರು. ''ನಾನು ನಿಮ್ಮ ದೊಡ್ಡ ಅಭಿಮಾನಿ'' ಅಂತ ರವಿಚಂದ್ರನ್‌ಗೆ ರಾಮ್ ಗೋಪಾಲ್ ವರ್ಮಾ ಹೇಳಿದ್ದರು. ಹಾಗೇ, 'ಪ್ರೇಮಲೋಕ' ಚಿತ್ರದ ಶಾಟ್ ಬಗ್ಗೆ ಇಂಪ್ರೆಸ್ ಆಗಿ ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದರು. ರಾಜಮೌಳಿ ಕೂಡ ರವಿಚಂದ್ರನ್ ಚಿತ್ರಗಳನ್ನು ವೀಕ್ಷಿಸುತ್ತಿದ್ದರು'' ರವಿಚಂದ್ರನ್ ಅವರ ಬಿಗ್ಗೆಸ್ಟ್ ಫ್ಯಾನ್ ಸೂರಜ್ ಬರ್ಜಾಟ್ಯ ''ಮೈನೆ ಪ್ಯಾರ್ ಕಿಯಾ', 'ಹಮ್ ಆಪ್ಕೆ ಹೇ ಕೌನ್' ಚಿತ್ರಗಳ ನಿರ್ದೇಶಕ ಸೂರಜ್ ಬರ್ಜಾಟ್ಯ 'ಸ್ಕ್ರೀನ್' ಮ್ಯಾಗಝೀನ್‌ನಲ್ಲಿ ''ನಾನು ರವಿಚಂದ್ರನ್ ಅವರ ಬಿಗ್ಗೆಸ್ಟ್ ಫ್ಯಾನ್'' ಅಂತ ಹೇಳಿಕೆ ಕೊಟ್ಟಿದ್ದರು. 'ಪ್ರೇಮಲೋಕ' ಚಿತ್ರದ ಸ್ಫೂರ್ತಿಯಾಗಿ 'ಮೈನೇ ಪ್ಯಾರ್ ಕಿಯಾ' ಚಿತ್ರವನ್ನು ಸೂರಜ್ ಬರ್ಜಾಟ್ಯ ರೆಡಿ ಮಾಡಿದ್ದರು'' ರವಿಚಂದ್ರನ್ ಅವರ ಸಿನಿಮಾ ಪ್ರಮೋಷನ್ ಸ್ಟ್ರಾಟೆಜಿ ''ಪ್ರಳಯಾಂತಕ' ಸಿನಿಮಾದ ರಿಲೀಸ್ ಸಮಯದಲ್ಲಿ ಚಿತ್ರದ ಕಟೌಟ್‌ಗಳನ್ನು ಸೆಲೆಕ್ಟೆಡ್ ಪೆಟ್ರೋಲ್ ಬಂಕ್‌ಗಳಲ್ಲಿ ರವಿಚಂದ್ರನ್ ನಿಲ್ಲಿಸಿದ್ದರು. ಸಿನಿಮಾದ ಪಬ್ಲಿಸಿಟಿ, ಪ್ರಮೋಷನ್‌ನ ಹೀಗೂ ಮಾಡಬಹುದು ಅಂತ ರವಿಚಂದ್ರನ್ ತೋರಿಸಿಕೊಟ್ಟಿದ್ದರು'' ''ಶಾಂತಿ ಕ್ರಾಂತಿ' ಸಿನಿಮಾದ ಮುಹೂರ್ತದ ವೇಳೆ ಬೇರೆ ಬೇರೆ ಭಾಷೆಯಿಂದ ಪತ್ರಕರ್ತರನ್ನು ಕರೆಸಲಾಗಿತ್ತು. ಆ ಸಮಯದಲ್ಲಿ ಪತ್ರಕರ್ತರಿಗೆ 'ಪ್ರೇಮಲೋಕ' ಮತ್ತು 'ರಣಧೀರ' ಚಿತ್ರಗಳನ್ನು ತೋರಿಸಿದ್ದರು. ''ನನ್ನ ಮಗನ ಬಗ್ಗೆ ಪ್ರಶ್ನೆ ಕೇಳುವ ಮುನ್ನ ಪತ್ರಕರ್ತರು ಅವನ ಸಿನಿಮಾಗಳನ್ನು ನೋಡಲಿ'' ಎಂಬುದು ವೀರಾಸ್ವಾಮಿ ಅವರ ವಿಷನ್ ಆಗಿತ್ತು'' ಎಂದು ನಿರ್ದೇಶಕ ರಘುರಾಮ್ ಹೇಳಿದ್ದಾರೆ.