ಮಧ್ಯಾಹ್ನದ ಬಿಸಿಯೂಟ ಇನ್ಮುಂದೆ 'ಪಿಎಂ ಪೋಷಣ್‌'

ಪ್ರತಿ ಸರಕಾರಿ ಶಾಲೆಯಲ್ಲಿ'ಪೌಷ್ಠಿಕಾಂಶ ಉದ್ಯಾನ' ಬೆಳೆಸಲು ಸರಕಾರ ಉತ್ತೇಜನ ನೀಡಲಿದೆ. ಪ್ರಕೃತಿಯೊಂದಿಗೆ ವಿದ್ಯಾರ್ಥಿಗಳು ಬೆರೆಯಲು ಮತ್ತು ತೋಟಗಾರಿಕೆಯ ಪ್ರಾಥಮಿಕ ಅನುಭವವನ್ನು ಕೂಡ ವಿದ್ಯಾರ್ಥಿಗಳಿಗೆ ಈ ಮೂಲಕ ನೀಡಲು ಮಾರ್ಗವಾಗಲಿದೆ

ಮಧ್ಯಾಹ್ನದ ಬಿಸಿಯೂಟ ಇನ್ಮುಂದೆ 'ಪಿಎಂ ಪೋಷಣ್‌'
Linkup
ಹೊಸದಿಲ್ಲಿ: ಪ್ರಧಾನಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿಇದುವರೆಗೂ ಚಾಲ್ತಿಯಲ್ಲಿದ್ದ ಶಾಲೆಗಳಲ್ಲಿ ಮಧ್ಯಾಹ್ನದ ನೀಡುವ ರಾಷ್ಟ್ರೀಯ ಯೋಜನೆಗೆ ಹೊಸ ರೂಪ ನೀಡುವ ಉದ್ದೇಶದಿಂದ '' ಎಂದು ಮರುನಾಮಕರಣ ಮಾಡಲಾಗಿದೆ. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದೇಶಾದ್ಯಂತ ವ್ಯಾಸಂಗ ಮಾಡುತ್ತಿರುವ 11.80 ಕೋಟಿ ವಿದ್ಯಾರ್ಥಿಗಳು ಬಿಸಿಯೂಟದ ಫಲಾನುಭವಿಗಳಾಗಿದ್ದಾರೆ. ಮುಂದಿನ ಐದು ವರ್ಷಗಳವರೆಗೂ ಈ ಯೋಜನೆ ಮುಂದುವರಿಯಲಿದ್ದು, ಇದಕ್ಕಾಗಿ 1.31 ಲಕ್ಷ ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಮೀಸಲಿಟ್ಟಿದೆ. ಕೇಂದ್ರ ಸರಕಾರವು ಹೆಚ್ಚಿನ ಅನುದಾನ ನೀಡುವ ಜತೆಗೆ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ಸಹಯೋಗದಲ್ಲಿಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಯೋಜನೆಯನ್ನು ದೇಶದ 11.20 ಲಕ್ಷ ಶಾಲೆಗಳಲ್ಲಿಜಾರಿ ಮಾಡಲಾಗಿದೆ. ಪಿಎಂ ಪೋಷಣ್‌ ಯೋಜನೆಯ ಒಟ್ಟಾರೆ ವೆಚ್ಚದಲ್ಲಿ54 ಸಾವಿರ ಕೋಟಿ ರೂ. ಕೇಂದ್ರ ಸರಕಾರ ಭರಿಸಲಿದೆ. ರಾಜ್ಯ ಸರಕಾರಗಳು 31,733 ಕೋಟಿ ರೂ. ಖರ್ಚು ಮಾಡಲಿವೆ. ಇನ್ನೂ ಬಾಕಿಯಾಗಿರುವ ಹೆಚ್ಚುವರಿ ಮೊತ್ತ 45 ಸಾವಿರ ರೂ.ಗಳನ್ನು (ಧಾನ್ಯಗಳ ಖರೀದಿ ವೆಚ್ಚ) ಕೂಡ ಕೇಂದ್ರ ಸರಕಾರವೇ ಭರಿಸುವ ಭರವಸೆ ನೀಡಿದೆ. ಉದ್ಯಾನ, ಆಹಾರ ತಯಾರಿಕೆ ಇದಲ್ಲದೇ, ಪ್ರತಿ ಸರಕಾರಿ ಶಾಲೆಯಲ್ಲಿ'ಪೌಷ್ಠಿಕಾಂಶ ಉದ್ಯಾನ' ಬೆಳೆಸಲು ಸರಕಾರ ಉತ್ತೇಜನ ನೀಡಲಿದೆ. ಪ್ರಕೃತಿಯೊಂದಿಗೆ ವಿದ್ಯಾರ್ಥಿಗಳು ಬೆರೆಯಲು ಮತ್ತು ತೋಟಗಾರಿಕೆಯ ಪ್ರಾಥಮಿಕ ಅನುಭವವನ್ನು ಕೂಡ ವಿದ್ಯಾರ್ಥಿಗಳಿಗೆ ಈ ಮೂಲಕ ನೀಡಲು ಮಾರ್ಗವಾಗಲಿದೆ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ. ಈ ಉದ್ಯಾನಗಳಲ್ಲಿ ಬಿಸಿಯೂಟಕ್ಕೆ ಅಗತ್ಯವಾದ ತರಕಾರಿಗಳು, ಸಾಧ್ಯವಾದಲ್ಲಿ ಕೆಲವು ಧಾನ್ಯಗಳನ್ನು ಕೂಡ ಬೆಳೆಯಬಹುದಾಗಿದೆ. ಪಿಎಂ ಪೋಷಣ್‌ ಯೋಜನೆ ಅಡಿಯಲ್ಲಿ'ರಕ್ತಹೀನತೆ'ಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಹೆಚ್ಚಾಗಿರುವ ಜಿಲ್ಲೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸಿ, ಸಮಸ್ಯೆ ಪರಿಹರಿಸಲು ನೆರವಾಗುವ ವಿಶೇಷ ಧಾನ್ಯಗಳನ್ನು ಪೂರೈಕೆ ಮಾಡಲು ಸರಕಾರ ಒತ್ತು ನೀಡಲಿದೆ. ವಿದ್ಯಾರ್ಥಿಗಳಿಗೆ ತರಕಾರಿ ಬೆಳೆಯುವುದು, ಅವುಗಳನ್ನು ನಿತ್ಯ ಅಡುಗೆಯಲ್ಲಿಬಳಸುವುದರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶಾಲಾ ಮಟ್ಟದಲ್ಲಿ ಯೋಜನೆ ಅಡಿಯಲ್ಲಿಖಾದ್ಯಗಳ ತಯಾರಿಕೆ ಸ್ಪರ್ಧೆಗಳನ್ನು ಕೂಡ ಆಯೋಜಿಸಲು ಚಿಂತಿಸಲಾಗಿದೆ. ಪಿಎಂ ಪೋಷಣ್‌ ಯೋಜನೆಯ ಪರಿಣಾಮಕಾರಿ ಜಾರಿಗೆ ಕೃಷಿ ಉತ್ಪಾದನಾ ರೈತ ಸಂಘಗಳು ಮತ್ತು ಮಹಿಳಾ ಸ್ವಸಹಾಯ ಗುಂಪುಗಳ ನೆರವು ಪಡೆಯಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂಪುಟದ ಇತರ ಪ್ರಮುಖ ನಿರ್ಧಾರಗಳು
  • ಮಧ್ಯಪ್ರದೇಶದ ನಿಮಛ್‌-ರತ್ಲಾಂ ಹಾಗೂ ಗುಜರಾತಿನ ರಾಜ್‌ಕೋಟ್‌ -ಕನಾಲುಸ್‌ ನಡುವಿನ ರೈಲ್ವೆ ಮಾರ್ಗ 'ದ್ವಿಪಥ' ಮಾಡಲು ಅಸ್ತು
  • ಸರಕಾರಿ ಸ್ವಾಮ್ಯದ ರಫ್ತು ಸಾಲ ಖಾತ್ರಿ ಮಂಡಳಿ(ಇಸಿಜಿಸಿ)ಗೆ ಮುಂದಿನ ವರ್ಷ ಷೇರು ಮಾರುಕಟ್ಟೆ ಪ್ರವೇಶಕ್ಕೆ ಒಪ್ಪಿಗೆ
  • ಇಸಿಜಿಸಿ ಉತ್ತೇಜನಕ್ಕೆ 5 ವರ್ಷಗಳಲ್ಲಿಕೇಂದ್ರದಿಂದ 4,400 ಕೋಟಿ ರೂ. ಮೊತ್ತ ಹೆಚ್ಚುವರಿ ಹೂಡಿಕೆ, ಸದ್ಯಕ್ಕೆ ತುರ್ತು ಹೂಡಿಕೆಯಾಗಿ 500 ಕೋಟಿ ರೂ.
  • ರಾಷ್ಟ್ರೀಯ ರಫ್ತು ವಿಮೆ ಖಾತೆ (ಎನ್‌ಇಐಎ) ಯೋಜನೆಗೆ 1,650 ಕೋಟಿ ರೂ. ಹೂಡಿಕೆ
  • 2021ರ ಸೆ. 21ರವರೆಗೆ ಭಾರತದಿಂದ ದಾಖಲೆ ಮೊತ್ತದ ಸರಕು (185 ಶತಕೋಟಿ ರೂ.) ರಫ್ತು ಮಾಡಲಾಗಿದೆ