ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಫೋಟೋಕ್ಕೆ ಚಪ್ಪಲಿ ಹಾರ, ಭಾವಪೂರ್ಣ ಶ್ರದ್ಧಾಂಜಲಿ: ಇದು ದರ್ಶನ್ ಫ್ಯಾನ್ಸ್ ಆಕ್ರೋಶ

'ಚಾಲೆಂಜಿಂಗ್ ಸ್ಟಾರ್' ದರ್ಶನ್ ಮೈಸೂರು ಹೋಟೆಲ್ ಘಟನೆ ಹಾಗೂ ಅರುಣಾ ಕುಮಾರಿ 25 ಕೋಟಿ ರೂ ವಂಚನೆ ಮಾಡಿದ್ದಾರೆ ಎಂಬ ಆರೋಪ, ಇಂದ್ರಜಿತ್ ಲಂಕೇಶ್‌ಗಳು ಮಾಡಿರುವ ಆರೋಪಗಳ ಕುರಿತು ತನಿಖೆ ನಡೆಯುತ್ತಿದೆ. ಈ ನಡುವೆ ಇಂದ್ರಜಿತ್ ಲಂಕೇಶ್‌ ಫೋಟೋಕ್ಕೆ ಚಪ್ಪಲಿ ಹಾರ ಹಾಕಿ ದರ್ಶನ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಫೋಟೋಕ್ಕೆ ಚಪ್ಪಲಿ ಹಾರ, ಭಾವಪೂರ್ಣ ಶ್ರದ್ಧಾಂಜಲಿ: ಇದು ದರ್ಶನ್ ಫ್ಯಾನ್ಸ್ ಆಕ್ರೋಶ
Linkup
'ಚಾಲೆಂಜಿಂಗ್ ಸ್ಟಾರ್' ನಟ ಅವರ ಮೇಲೆ ನಿರ್ದೇಶಕ ಸಾಕಷ್ಟು ಆರೋಪ ಮಾಡಿದ್ದರು. ಮಾಧ್ಯಮಗಳ ಮುಂದೆ ಇಂದ್ರಜಿತ್, ದರ್ಶನ್ ನೀಡಿದ ಹೇಳಿಕೆಗಳು ಭಾರೀ ದೊಡ್ಡದಾಗಿ ಇನ್ನೊಂದಿಷ್ಟು ಸಮಸ್ಯೆ ಉಂಟು ಮಾಡಿತ್ತು. ಈ ನಡುವೆ ಡಿ ಬಾಸ್ ಮೇಲೆ ಆರೋಪ ಮಾಡಿದ್ದಕ್ಕೆ ದರ್ಶನ್ ಅಭಿಮಾನಿಗಳು ಇಂದ್ರಜಿತ್ ವಿರುದ್ಧ ರಾಜ್ಯದ ನಾನಾ ಭಾಗಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ನಟ ದರ್ಶನ್ ಹಾವೇರಿ, ದಾವಣಗೆರೆಗೆ ಭೇಟಿ ನೀಡಿದ್ದಾರೆ. ಮಾಧ್ಯಮಗಳ ಮುಂದೆ ಬರದ ದರ್ಶನ್ ಅವಸರವಾಗಿ ಕಾರ್ ಹತ್ತಿದ್ದಾರೆ. ದಾಸನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ದರ್ಶನ್‌ರನ್ನು ನೋಡಲು ಬಂದಿದ್ದವರನ್ನು ನಿಭಾಯಿಸಲು ಆಗದೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ. ಹಾವೇರಿಯಲ್ಲಿ ಇಂದ್ರಜಿತ್ ಲಂಕೇಶ್ ಫೋಟೋಕ್ಕೆ ಚಪ್ಪಲಿ ಹಾರ ಹಾಕಿ ದರ್ಶನ್ ಫ್ಯಾನ್ಸ್ ಧರಣಿ ನಡೆಸುತ್ತಿದ್ದಾರೆ. ಅನೇಕರು ಇಂದ್ರಜಿತ್ ಲಂಕೇಶ್ ವಿರುದ್ಧವಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುತ್ತಿದ್ದಾರೆ. ಇಂದ್ರಜಿತ್ ಫೋಟೋಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಶೀರ್ಷಿಕೆ ಕೂಡ ನೀಡುತ್ತಿದ್ದಾರೆ. ಈ ಎಲ್ಲ ಘಟನೆಗಳ ನಡುವೆ ದರ್ಶನ್ ಮಾತುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ನಟರಾದ ಧನ್ವೀರ್, ಶಿವರಾಜ್ ಕೆಆರ್‌ಪೇಟೆ, ಪ್ರೇಮ್, ಬುಲೆಟ್ ಪ್ರಕಾಶ್ ಪುತ್ರ ರಕ್ಷ್, ನಟಿ ಆಶಿತಾ ಚಂದ್ರಪ್ಪ, ಪ್ರಜ್ವಲ್ ದೇವರಾಜ್, ಪ್ರಣವ್ ದೇವರಾಜ್ ಮುಂತಾದವರು ದರ್ಶನ್ ಪರ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕುತ್ತಿದ್ದಾರೆ. ಏಕವಚನದಿಂದ, ಅಶ್ಲೀಲವಾಗಿ ಮಾತನಾಡಿರುವ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ಅವರನ್ನು 5 ವರ್ಷ ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕೂಡ ಕೆಲವರು ಆಗ್ರಹಿಸುತ್ತಿದ್ದಾರೆ. ಒಟ್ಟಿನಲ್ಲಿ ದರ್ಶನ್‌ಗೆ 25 ಕೋಟಿ ರೂಪಾಯಿ ವಂಚನೆ ಮಾಡಿರುವ ವಿಷಯ ಹಾಗೂ ಮೈಸೂರಿನಲ್ಲಿ ದರ್ಶನ್ ಹೋಟೆಲ್ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ವಿಷಯಗಳು ಇನ್ನು ಎಲ್ಲಿಗೆ ಹೋಗಿ ಮುಟ್ಟತ್ತೋ ಕಾದು ನೋಡಬೇಕಿದೆ.