ನಟ ವಿಜಯ್ ಫ್ಯಾನ್ಸ್‌ಗೆ ಇಲ್ಲಿದೆ 'ಬಿಗ್' ನ್ಯೂಸ್‌! ಮೊದಲ ಬಾರಿಗೆ ಕಾಲಿವುಡ್ ಬೌಂಡರಿ ದಾಟಿದ 'ದಳಪತಿ'!

'ಮಾಸ್ಟರ್' ಸಿನಿಮಾದ ಯಶಸ್ಸಿನಿಂದ ಬೀಗುತ್ತಿರುವ ನಟ ದಳಪತಿ ವಿಜಯ್, ಈಗ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಅದರ ಮಧ್ಯೆ ಹೊಸದೊಂದು ಸಾಹಸಕ್ಕೂ ಅವರು ಕೈಹಾಕಿದ್ದಾರೆ. ಈ ನ್ಯೂಸ್ ಅವರ ಫ್ಯಾನ್ಸ್‌ಗಂತೂ ಖುಷಿ ನೀಡುವುದು ನಿಶ್ಚಿತ!

ನಟ ವಿಜಯ್ ಫ್ಯಾನ್ಸ್‌ಗೆ ಇಲ್ಲಿದೆ 'ಬಿಗ್' ನ್ಯೂಸ್‌! ಮೊದಲ ಬಾರಿಗೆ ಕಾಲಿವುಡ್ ಬೌಂಡರಿ ದಾಟಿದ 'ದಳಪತಿ'!
Linkup
'ದಳಪತಿ' ನಟ ವಿಜಯ್‌ಗೆ ಕಾಲಿವುಡ್‌ನಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾಗಳೆಂದರೆ, ಫ್ಯಾನ್ಸ್ ಕುತೂಹಲದಿಂದ ಕಾದಿರುತ್ತಾರೆ. ಅವರು ತಮಿಳಿನಲ್ಲಿ ನಟಿಸಿದರೂ, ಅವರ ಸಿನಿಮಾಗಳು ಬೇರೆ ಭಾಷೆಗೆ ಡಬ್ ಆಗುತ್ತವೆ. ಅಲ್ಲದೆ, ಬೇರೆ ಬೇರೆ ರಾಜ್ಯಗಳಲ್ಲಿಯೂ ಅವರಿಗೆ ಫ್ಯಾನ್ಸ್ ಇದ್ದಾರೆ. ಬೇಡಿಕೆಯೂ ಇದೆ. ಸದ್ಯ ಅವರು ಒಂದು ಹೊಸ ನಿರ್ಧಾರ ಮಾಡಿದ್ದಾರೆ. ಅವರೀಗ ಕಾಲಿವುಡ್‌ನಿಂದ ಹೊರಗೂ ಕಾಲಿಟ್ಟಿದ್ದಾರೆ! ತೆಲುಗಿಗೆ ಬಂದ ! ನಟ ವಿಜಯ್ ಇದುವರೆಗೂ ತಮಿಳಿನಲ್ಲಿ ಮಾತ್ರ ಸಿನಿಮಾ ಮಾಡುತ್ತಿದ್ದರು. ನಂತರ ಅದು ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಗೆ ಬರುತ್ತಿತ್ತು. ಆದರೆ, ಈ ಬಾರಿ ಏಕಕಾಲಕ್ಕೆ ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಮಾಡುವುದಕ್ಕೆ ಅವರು ಮುಂದಾಗಿದ್ದಾರೆ. ವಿಶೇಷವೆಂದರೆ, ಇದನ್ನು ಸಂಪೂರ್ಣವಾಗಿ ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿರುವುದು ತೆಲುಗಿನವರು. ಹೌದು, ಟಾಲಿವುಡ್‌ನ ಖ್ಯಾತ ನಿರ್ಮಾಪಕ ಇದರ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದರೆ, ಈಚೆಗಷ್ಟೇ 'ಮಹರ್ಷಿ' ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ನಿರ್ದೇಶಕ ಇದರ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ 'ಊಪಿರಿ' ಸಿನಿಮಾವನ್ನು ತೆಲುಗು ಮತ್ತು ತಮಿಳಿನಲ್ಲಿ ನಾಗಾರ್ಜುನ ಮತ್ತು ಕಾರ್ತಿ ಅವರ ಮುಖ್ಯಭೂಮಿಕೆಯಲ್ಲಿ ಮಾಡಿದ ಅನುಭವ ವಂಶಿಗೆ ಇದೆ. ಇದೀಗ ಮತ್ತೊಮ್ಮೆ ಅಂಥದ್ದೇ ಪ್ರಯತ್ನಕ್ಕೆ ಅವರು ಕೈ ಹಾಕಿದ್ದಾರೆ. ಈಗಾಗಲೇ ವಿಜಯ್‌ಗೆ ಅವರು ಹೇಳಿದ ಕಥೆ ಇಷ್ಟವಾಗಿದೆಯಂತೆ. ಹಾಗಾಗಿ, ಅವರು ತಕ್ಷಣವೇ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಸದ್ಯ, ವಿಜಯ್ ನಟನೆಯ 65ನೇ ಸಿನಿಮಾದ ಕೆಲಸಗಳು ಚಾಲ್ತಿಯಲ್ಲಿವೆ. ನೆಲ್ಸನ್‌ ನಿರ್ದೇಶನದ ಆ ಸಿನಿಮಾವನ್ನು ಸನ್‌ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ಈಚೆಗಷ್ಟೇ ವಿದೇಶದಲ್ಲಿ ಆ ಸಿನಿಮಾಗೆ ಒಂದು ಹಂತದ ಶೂಟಿಂಗ್ ಮುಗಿದಿದೆ. ಸದ್ಯ ಕೊರೊನಾ ಕಾರಣದಿಂದ ಶೂಟಿಂಗ್ ಸ್ಥಗಿತಗೊಂಡಿದೆ. ಬಹುಶಃ ಅದರ ಕೆಲಸಗಳು ಮುಗಿದ ಮೇಲೆ ವಂಶಿ-ರಾಜು ಸಿನಿಮಾವನ್ನು ವಿಜಯ್ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.