ತೌಕ್ತೆ ಚಂಡಮಾರುತ: ಮುಂಬಯಿ ಬಳಿ ನೌಕಾ ದುರಂತಕ್ಕೆ 26 ಬಲಿ, 50 ಮಂದಿ ಕಣ್ಮರೆ; ಗುಜರಾತ್‌ನಲ್ಲಿ 65 ಮಂದಿ ಸಾವು!

​​286 ಜನರನ್ನು ಹೊತ್ತ ಬಾರ್ಜ್‌ ದಡ ಸೇರಲು ಇನ್ನೂ ಒಂದು ತಾಸಿನ ದಾರಿ ಉಳಿದಿದ್ದಾಗಲೇ ಚಂಡಮಾರುತದ ಅಬ್ಬರಕ್ಕೆ ಸಿಲುಕಿತು. ತಕ್ಷಣ ರಕ್ಷಣೆಗೆ ಮನವಿ ಮಾಡಲಾಯಿತು. ನೌಕಾ ಪಡೆ ಯೋಧರು ಹೆಲಿಕಾಪ್ಟರ್‌ ಮೂಲಕ ಬಾರ್ಜ್‌ನಲ್ಲಿದ್ದ 186 ಮಂದಿಯನ್ನು ರಕ್ಷಿಸಿದರು. ಉಳಿದವರಿಗೆ ನೆರವಿನ ಹಸ್ತ ಚಾಚುತ್ತಿರುವಾಗಲೇ ನೌಕೆ ಬುಡಮೇಲಾಯಿತು.

ತೌಕ್ತೆ ಚಂಡಮಾರುತ: ಮುಂಬಯಿ ಬಳಿ ನೌಕಾ ದುರಂತಕ್ಕೆ 26 ಬಲಿ, 50 ಮಂದಿ ಕಣ್ಮರೆ; ಗುಜರಾತ್‌ನಲ್ಲಿ 65 ಮಂದಿ ಸಾವು!
Linkup
ಮುಂಬಯಿ: ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ಹೊರತಾಗಿಯೂ ನಿರೀಕ್ಷೆಗೂ ಮೀರಿದ ಅನಾಹುತ ಸೃಷ್ಟಿಸಿ ಹೋಗಿದೆ. ಮಹಾರಾಷ್ಟ್ರ ಮತ್ತು ಸಾವು ನೋವಿನ ಸರಣಿಗಳಿಂದ ತತ್ತರಿಸಿವೆ. ಸಮೀಪ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಕ್ಕೆ ಸಿಲುಕಿ ಬಾರ್ಜ್‌(ನೌಕೆ) ಮುಳುಗಿದ್ದು, ಅದರಲ್ಲಿದ್ದ 26 ಮಂದಿ ಮೃತಪಟ್ಟಿದ್ದಾರೆ. ಇತರೆ 50 ಮಂದಿ ಕಣ್ಮರೆಯಾಗಿದ್ದಾರೆ. 'ಪಪಾ-305' ದುರಂತದಲ್ಲಿ ಮುಳುಗಿದ ನೌಕೆ. ಮುಂಬಯಿನಿಂದ 50 ಕಿ.ಮೀ ದೂರದ ಒಎನ್‌ಜಿಸಿ ತೈಲ ಕೊಳವೆ ಬಾವಿಯಿಂದ ಸಿಬ್ಬಂದಿಯನ್ನು ಕರೆ ತರುವ ಮಾರ್ಗ ಮಧ್ಯೆ ಈ ನೌಕೆ ಚಂಡಮಾರುತಕ್ಕೆ ಸಿಲುಕಿ ಮುಳುಗಿದೆ. ಮಂಗಳವಾರ ಮಧ್ಯಾಹ್ನ ಈ ದುರಂತ ಘಟಿಸಿತ್ತು. 286 ಜನರನ್ನು ಹೊತ್ತ ಬಾರ್ಜ್‌ ದಡ ಸೇರಲು ಇನ್ನೂ ಒಂದು ತಾಸಿನ ದಾರಿ ಉಳಿದಿದ್ದಾಗಲೇ ಚಂಡಮಾರುತದ ಅಬ್ಬರಕ್ಕೆ ಸಿಲುಕಿತು. ತಕ್ಷಣ ರಕ್ಷಣೆಗೆ ಮನವಿ ಮಾಡಲಾಯಿತು. ನೌಕಾ ಪಡೆ ಯೋಧರು ಹೆಲಿಕಾಪ್ಟರ್‌ ಮೂಲಕ ಬಾರ್ಜ್‌ನಲ್ಲಿದ್ದ 186 ಮಂದಿಯನ್ನು ರಕ್ಷಿಸಿದರು. ಉಳಿದವರಿಗೆ ನೆರವಿನ ಹಸ್ತ ಚಾಚುತ್ತಿರುವಾಗಲೇ ನೌಕೆ ಬುಡಮೇಲಾಯಿತು. ರಕ್ಕಸ ಗಾತ್ರದ ಅಲೆ ಹಾಗೂ ಶರವೇಗದ ಗಾಳಿಗೆ ಕಡಲು ಅಯೋಮಯವಾಯಿತು. ಮುಗುಚಿದ ನೌಕೆ ಕ್ಷಣ ಮಾತ್ರದಲ್ಲಿ ಕಣ್ಮರೆಯಾಗಿತು. ಬುಧವಾರ ಕಾರ್ಯಾಚರಣೆ ಮುಂದುವರಿಸಿದ ನೌಕಾ ಪಡೆ, ದುರಂತ ಸ್ಥಳದಿಂದ 25 ಮೃತದೇಹಗಳನ್ನು ಮೇಲಕ್ಕೆತ್ತಿದೆ. ಕಣ್ಮರೆಯಾಗಿರುವ 50 ಮಂದಿಗಾಗಿ ಹುಡುಕಾಟ ಸಾಗಿದೆ. ಸಾರ್ವಜನಿಕ ಒಡೆತನದ ಒಎನ್‌ಜಿಸಿ ತೈಲ ಬಾವಿಯಲ್ಲಿ ಇವರೆಲ್ಲರೂ ಕೆಲಸ ಮಾಡುತ್ತಿದ್ದರು. ಮಂಗಳವಾರ ಚಂಡಮಾರುತದ ಮುನ್ಸೂಚನೆ ಇದ್ದದ್ದರಿಂದ ದಿನದ ಅರ್ಧದಲ್ಲಿಯೇ ದುಡಿಮೆ ನಿಲ್ಲಿಸಿ, ಅವಸರದಲ್ಲಿಯೇ ಮನೆಗೆ ವಾಪಸಾಗಿದ್ದರು. ಆದರೆ, ಮನೆ ಸೇರುವ ಮೊದಲೇ ಸಾವು ಅವರನ್ನು ಸೆಳೆದೊಯ್ದಿದೆ. ಚಂಡಮಾರುತಕ್ಕೆ ಇನ್ನೂ ಎರಡು ಬಾರ್ಜ್‌ಗಳು ಜಖಂಗೊಂಡಿವೆ. ಆದರೆ ಅವುಗಳಲ್ಲಿದ್ದ ಪ್ರಯಾಣಿಕರೆಲ್ಲರನ್ನೂ ಸುರಕ್ಷಿತವಾಗಿ ಪಾರು ಮಾಡಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ಕಣ್ಮರೆಯಾದವರ ಪತ್ತೆಗೆ ನೌಕಾ ಪಡೆ ಮತ್ತು ಕರಾವಳಿ ಕಾವಲು ಪಡೆ ಶ್ರಮಿಸುತ್ತಿವೆ. ದುರಂತ ಘಟಿಸಿ ಎರಡು ದಿನ ಕಳೆದಿರುವುದರಿಂದ ಅವರಾರೂ ಬದುಕುಳಿದ ಸಾಧ್ಯತೆ ಕ್ಷೀಣ ಎಂದು ಅಧಿಕಾರಿಗಳು ಹೇಳಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ನೌಕಾಪಡೆ ಅಧಿಕಾರಿಗಳಿಂದ ರಕ್ಷಣಾ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದರು. ಗುಜರಾತಿನಲ್ಲೂ ಮರಣ ಮೃದಂಗ!ಗುಜರಾತಿನಲ್ಲೂ ತೌಕ್ತೆ ಚಂಡಮಾರುತ ಭಾರಿ ಅನಾಹುತ ಸೃಷ್ಟಿ ಮಾಡಿದೆ. ಕರಾವಳಿ ಜಿಲ್ಲೆಗಳಲ್ಲಿ ಬುಧವಾರ ಇನ್ನೂ 45 ಮಂದಿ ಚಂಡಮಾರುತಕ್ಕೆ ಬಲಿಯಾದ ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 65ಕ್ಕೆ ಏರಿದೆ. ಅತಿ ಹೆಚ್ಚು ಚಂಡಮಾರುತ ಬಾಧಿತ ಸೌರಾಷ್ಟ್ರದ ಅಮ್ರೇಲಿ ಜಿಲ್ಲೆಯಲ್ಲಿ ಹದಿನೈದು, ಭಾವ್‌ನಗರ ಮತ್ತು ಗಿರ್‌ ಸೋಮನಾಥ್‌ ಜಿಲ್ಲೆಗಳಲ್ಲಿ ಎಂಟು, ಅಹಮದಾಬಾದ್‌ನಲ್ಲಿ ಐವರು, ಖೇಡಾದಲ್ಲಿ ಇಬ್ಬರು, ಆನಂದ್‌, ವಡೋದರ, ಸೂರತ್‌ ಮತ್ತು ವಾಲ್ಸದ್‌, ರಾಜ್‌ಕೋಟ್‌, ನವ್‌ಸಾರಿ ಮತ್ತು ಪಂಚಮಹಲ್‌ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1000 ಕೋಟಿ ರೂ. ಪರಿಹಾರ!ಬುಧವಾರ ಗುಜರಾತಿನ ಚಂಡಮಾರುತ ಬಾಧಿತ ಕರಾವಳಿ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, 1000 ಕೋಟಿ ರೂ.ಗಳ ಹಣಕಾಸು ನೆರವು ಘೋಷಣೆ ಮಾಡಿದ್ದಾರೆ. ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಮತ್ತು ಗಾಯ-ಗೊಂಡವರಿಗೆ 50 ಸಾವಿರ ರೂ. ನೆರವನ್ನು ಕೂಡ ಅವರು ಈ ವೇಳೆ ಘೋಷಿಸಿದರು.