ಗಂಡನಿಗೆ ಕೆಲಸವಿಲ್ಲ, ಹೆಂಡತಿಗೆ ಪುರುಸೊತ್ತಿಲ್ಲ: ಪೊಲೀಸ್ ಠಾಣೆಯಲ್ಲಿ ದಾಂಪತ್ಯ ಕಲಹದ ಪ್ರತಿಧ್ವನಿ..!

ಬೆಂಗಳೂರಿನ ಮಲ್ಲೇಶ್ವರಂ ಪೊಲಿಸ್ ಠಾಣೆಯ ಬಳಿ ಇರುವ ವನಿತಾ ಸಹಾಯವಾಣಿಗೆ ಈ ರೀತಿಯ ಪ್ರಕರಣಗಳು ಬರುವ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ ಎನ್ನುತ್ತಾರೆ, ಸಹಾಯವಾಣಿಯ ಮುಖ್ಯಸ್ಥೆ ರಾಣಿ ಶೆಟ್ಟಿ.

ಗಂಡನಿಗೆ ಕೆಲಸವಿಲ್ಲ, ಹೆಂಡತಿಗೆ ಪುರುಸೊತ್ತಿಲ್ಲ: ಪೊಲೀಸ್ ಠಾಣೆಯಲ್ಲಿ ದಾಂಪತ್ಯ ಕಲಹದ ಪ್ರತಿಧ್ವನಿ..!
Linkup
: ಹಾಗೂ ಲಾಕ್‌ಡೌನ್‌ನ ಎಫೆಕ್ಟ್, ಆಫ್ಟರ್ ಎಫೆಕ್ಟ್‌ ಹಾಗೂ ಸೈಡ್ ಎಫೆಕ್ಟ್‌ಗಳು ಒಂದೆರಡಲ್ಲ..! ಕೌಟುಂಬಿಕ ಜೀವನದ ಮೇಲೆ ಕೊರೊನಾ ಉಂಟು ಮಾಡಿರುವ ಗಾಢ ಪರಿಣಾಮ, ಒಂದಿಡೀ ತಲೆಮಾರು ಅನುಭವಿಸುವಷ್ಟು ದೊಡ್ಡದಾಗಿದೆ..! ಅದರಲ್ಲೂ ಗಂಡ ಸಂಬಂಧಕ್ಕೆ ಕೋವಿಡ್ ಹುಳಿ ಹಿಂಡಿದೆ..! ಬೆಂಗಳೂರಿನ ವನಿತಾ ಸಹಾಯವಾಣಿ ಹಾಗೂ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಹಲವು ಪ್ರಕರಣಗಳು ಇದಕ್ಕೆ ಸಾಕ್ಷಿಯಾಗಿವೆ..! ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಹಿಂಸೆ ಹಾಗೂ - ಹೆಂಡತಿ ನಡುವಣ , ಮನಸ್ಥಾಪದ ಪ್ರಕರಣಗಳು ಹೆಚ್ಚಾಗಿ ವನಿತಾ ಸಹಾಯವಾಣಿ ಮೆಟ್ಟಿಲೇರುತ್ತಿವೆ. ಕೊರೊನಾ ಸೃಷ್ಟಿಸಿದ ಆರ್ಥಿಕ ಸಂಕಷ್ಟದಿಂದಾಗಿ ಕಳೆದುಕೊಂಡ ಗಂಡ ಮನೆಯಲ್ಲೇ ಕುಳಿತು ಕಾಲ ಹರಣ ಮಾಡುತ್ತಿದ್ದರೆ ಹೆಂಡತಿ ಸುಮ್ಮನಿರಲು ಸಾಧ್ಯವೇ..? ಮನೆ ಖರ್ಚಿಗೆ ಹಣವಿಲ್ಲ, ದುಡಿಯಬಾರದೇ ಎಂಬ ಹೆಂಡತಿಯ ಪ್ರಶ್ನೆಯೇ ಗಂಡನಿಗೆ ಮಹಾಪರಾಧವಾಗಿ ಕಾಣುತ್ತಿದೆ. ಕೌಟುಂಬಿಕ ಜಗಳ, ಬಡಿದಾಟ, ಪಾತ್ರೆ ಎಸೆತಕ್ಕೆ ಕಾರಣವಾಗುತ್ತಿದೆ..! ಹೆಂಡತಿ ನನ್ನನ್ನು ಕೀಳಾಗಿ ಕಾಣುತ್ತಿದ್ದಾಳೆ ಎಂಬ ಕೀಳರಿಮೆಯ ಭಾವನೆ ಗಂಡನನ್ನು ಕಾಡುತ್ತಿದೆ. ಇದರ ಪರಿಣಾಮ ಮನೆಯಲ್ಲಿರುವ ಮಕ್ಕಳು ಹಾಗೂ ವಯೋವೃದ್ಧರನ್ನೂ ತಟ್ಟುತ್ತಿದೆ..! ಮನೆಯ ನಾಲ್ಕು ಗೋಡೆಗಳ ನಡುವೆ ಪ್ರತಿ ದಿನವೂ ರಣರಂಗವೇ ಸೃಷ್ಟಿಯಾಗುತ್ತಿದೆ. ಇನ್ನು ಹೆಂಡತಿ ಕೆಲಸ ಮಾಡುತ್ತಾಳೆ, ಆದರೆ ಗಂಡನಿಗೆ ಕೆಲಸವಿಲ್ಲ ಎಂಬ ವಿಚಾರವಂತೂ ಸಾಮಾಜಿಕವಾಗಿ ಗಂಡಿಗೆ ತನ್ನತನಕ್ಕೆ ಹಾಗೂ ಅಹಂಗೆ ಪೆಟ್ಟು ನೀಡುತ್ತಿದೆ. ಹೆಂಡತಿ ತನ್ನನ್ನು ಓವರ್ ಟೇಕ್ ಮಾಡುತ್ತಿದ್ದಾಳೆ, ನಿರ್ಲಕ್ಷಿಸುತ್ತಿದ್ದಾಳೆ, ಕೀಳಾಗಿ ಕಾಣುತ್ತಿದ್ದಾಳೆ ಎಂಬ ಭಾವ ಬಂದಿದ್ದೇ ತಡ, ಪುರುಷ ಪ್ರಜ್ಞೆ ಜಾಗೃತವಾಗಿ ಗಂಡ ವ್ಯಘ್ರನಾಗುತ್ತಾನೆ..! ಹೀಗಾಗಿ, ಗಂಡನಿಂದ ಹೊಡೆತ ತಿಂದ ಮಹಿಳೆಯರು ಪೊಲೀಸ್ ಠಾಣೆ ಹಾಗೂ ಮಹಿಳಾ ಸಹಾಯವಾಣಿಯ ಕದ ತಟ್ಟುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಪೊಲಿಸ್ ಠಾಣೆಯ ಬಳಿ ಇರುವ ವನಿತಾ ಸಹಾಯವಾಣಿಗೆ ಈ ರೀತಿಯ ಪ್ರಕರಣಗಳು ಬರುವ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ ಎನ್ನುತ್ತಾರೆ, ಸಹಾಯವಾಣಿಯ ಮುಖ್ಯಸ್ಥೆ ರಾಣಿ ಶೆಟ್ಟಿ.. ಇನ್ನು ಮನೆ ಹಾಗೂ ಆಫೀಸ್ ಎರಡೂ ಕಡೆ ಕೆಲಸ ಮಾಡುವ ಹೆಂಡತಿ ಕೂಡಾ ಮನೆಯಲ್ಲೇ ಕೂತು ಕಾಲ ಹರಣ ಮಾಡುವ ಗಂಡನ ವಿರುದ್ಧ ಸಿಟ್ಟಾಗುತ್ತಿದ್ದಾಳೆ..! ಕೆಲಸ ಮುಗಿಸಿ ಸುಸ್ತಾಗಿ ಮನೆಗೆ ಬಂದ ಹೆಂಡತಿ ಉಸ್ಸಪ್ಪಾ ಎಂದು ಕೂರುವ ಮುನ್ನವೇ ಆಕೆಯ ಗಂಡ ಅಡುಗೆ ಮಾಡು ಎಂದರೆ ಆಕೆಗೆ ಸಿಟ್ಟು ಬರದೇ ಇರುತ್ತಾ..? ಇಂಥಾ ಸಂದರ್ಭಗಳಲ್ಲಿ ಗಂಡನ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳೂ ಇವೆ..! ಮೈ - ಕೈ ಗಾಯ ಮಾಡಿಕೊಂಡ ಪತಿರಾಯ ಪೊಲೀಸ್ ಠಾಣೆಯ ಮೆಟ್ಟಿಲೇರುವ ಪ್ರಸಂಗಗಳೂ ಇವೆ..! ಇವೆಲ್ಲದರ ನಡುವೆ ಉದ್ಯೋಗ ಕಳೆದುಕೊಂಡ ಜನರು ಸಾಲ ತೀರಿಸಲಾಗದೆ ಮಾನಸಿಕ ಒತ್ತಡಕ್ಕೆ ಸಿಲುಕಿ ಕುಡಿತ ಸೇರಿದಂತೆ ಹಲವು ವ್ಯಸನಗಳಿಗೆ ತುತ್ತಾಗುತ್ತಿದ್ದಾರೆ.. ಕೆಲವೊಂದಷ್ಟು ಅಕ್ರಮ ಸಂಬಂಧ ಹಾಗೂ ಅನೈತಿಕ ಸಂಬಂಧಗಳಿಗೂ ಈ ಬೆಳವಣಿಗೆಗಳು ದಾರಿ ಮಾಡಿಕೊಡುತ್ತಿದ್ದು, ಈ ಕಾರಣಗಳಿಂದಾಗಿಯೂ ಗಂಡ ಹೆಂಡತಿ ನಡುವೆ ಬಿರುಕು, ಮನಸ್ಥಾಪ ಮೂಡುವಂತಾಗಿದೆ.