ಕೆಂಗೇರಿ ಮೆಟ್ರೋ ಮಾರ್ಗದಲ್ಲಿ ರಸ್ತೆ ಅಧ್ವಾನ; ಕುಸಿದು ಬಿದ್ದ ನದಿ ತಡೆಗೋಡೆ ದುರಸ್ತಿಗೆ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ!

ಕಳೆದ ವರ್ಷ ಜೂನ್‌ನಲ್ಲಿ ಮಳೆಯಿಂದಾಗಿ ಕೆಂಗೇರಿ ಸಮೀಪ ವೃಷಭಾವತಿ ನದಿಗೆ ಕಟ್ಟಲಾದ ತಡೆಗೋಡೆ ಕುಸಿದು ಸುಮಾರು 1 ಕಿ.ಮೀ ರಸ್ತೆ ಕುಸಿದಿದೆ. ಈ ಜಾಗ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಡೆಗೋಡೆ ದುರಸ್ತಿ ಮಾಡಬೇಕಿದೆ. ವರ್ಷ ಕಳೆದರೂ ತಡೆಗೋಡೆ ದುರಸ್ತಿ ಕಾಮಗಾರಿ ಪ್ರಗತಿಯಾಗಿಲ್ಲ.

ಕೆಂಗೇರಿ ಮೆಟ್ರೋ ಮಾರ್ಗದಲ್ಲಿ ರಸ್ತೆ ಅಧ್ವಾನ; ಕುಸಿದು ಬಿದ್ದ ನದಿ ತಡೆಗೋಡೆ ದುರಸ್ತಿಗೆ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ!
Linkup
ಬೆಂಗಳೂರು: ಬಹು ನಿರೀಕ್ಷೆಯ ನಾಯಂಡಹಳ್ಳಿ-ಕೆಂಗೇರಿ ನಡುವಿನ ಮೆಟ್ರೊ ಮಾರ್ಗ ಸಿದ್ಧಗೊಂಡಿದ್ದು, ರೈಲು ಸಂಚಾರಕ್ಕೆ ಸಿದ್ಧವಾಗಿದೆ. ಆದರೆ, ಇದೇ ಮಾರ್ಗದಲ್ಲಿ ಕೆಂಗೇರಿ ಬಳಿ ವೃಷಭಾವತಿ ನದಿ ತಡೆಗೋಡೆ ಕುಸಿದ ಜಾಗದಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಭಾಗದಲ್ಲಿ ಸುಮಾರು ಅರ್ಧ ಕಿಲೋ ಮೀಟರ್‌ ಉದ್ದ ಏಕಮುಖ ಮಾರ್ಗ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದೇ ಅವ್ಯವಸ್ಥೆ ವರ್ಷಾನುಗಟ್ಟಲೆ ಮುಂದುವರಿದರೂ ಅಚ್ಚರಿಯಿಲ್ಲ. ಸಮಸ್ಯೆ ಏನು? ಕಳೆದ ವರ್ಷ ಜೂನ್‌ನಲ್ಲಿ ಮಳೆಯಿಂದಾಗಿ ಕೆಂಗೇರಿ ಸಮೀಪ ವೃಷಭಾವತಿ ನದಿಗೆ ಕಟ್ಟಲಾದ ತಡೆಗೋಡೆ ಕುಸಿದು ಸುಮಾರು 1 ಕಿ.ಮೀ ರಸ್ತೆ ಕುಸಿದಿದೆ. ಈ ಜಾಗ ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿರುವುದರಿಂದ ರಾಷ್ಟ್ರೀಯ ತಡೆಗೋಡೆ ದುರಸ್ತಿ ಮಾಡಬೇಕಿದೆ. ವರ್ಷ ಕಳೆದರೂ ತಡೆಗೋಡೆ ದುರಸ್ತಿ ಕಾಮಗಾರಿ ಪ್ರಗತಿಯಾಗಿಲ್ಲ. ತಡೆಗೋಡೆ ಕುಸಿದ ಕೆಲ ತಿಂಗಳು ದುರಸ್ತಿ ಆರಂಭಿಸಲಾಯಿತಾದರೂ ಕೆಲ ದಿನ ಕಾಮಗಾರಿ ನಡೆಸಿ ಅಲ್ಲಿಗೇ ಸ್ಥಗಿತಗೊಂಡಿದೆ. ಸದ್ಯಕ್ಕೆ ಮುಂದುವರಿಯುವ ಲಕ್ಷಣಗಳೂ ಕಾಣುತ್ತಿಲ್ಲ. ತಡೆಗೋಡೆ ನಿರ್ಮಿಸದೆ ರಸ್ತೆ ನಿರ್ಮಾಣ ಅಸಾಧ್ಯ. ಇದರಿಂದಾಗಿ ಬಿಎಂಆರ್‌ಸಿಎಲ್‌ ಕೂಡ ಕೈಚೆಲ್ಲಿದೆ. ಇದರಿಂದಾಗಿ ಸದ್ಯಕ್ಕಂತೂ ಆರ್‌.ವಿ. ಕಾಲೇಜ್‌ನಿಂದ ಮೈಲಸಂದ್ರವರೆಗೆ ಏಕಮುಖ ಮಾರ್ಗ ಸಂಚಾರವೇ ಮುಂದುವರಿಯಲಿದೆ. ಸಂಚಾರ ದಟ್ಟಣೆ ಸೃಷ್ಟಿ - ಮೈಸೂರು ನಡುವೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿರುವುದರಿಂದ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಏಕಮುಖ ಮಾರ್ಗವಿರುವ ಕಡೆ ನಿತ್ಯವೂ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪದೇ ಪದೆ ವಾಹನ ಅಪಘಾತಕ್ಕೂ ಕಾರಣವಾಗುತ್ತಿದೆ. ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಆತಂಕ ಮೆಟ್ರೊ ಮಾರ್ಗ ಸಿದ್ಧಗೊಂಡು ರೈಲು ಸಂಚಾರ ಆರಂಭಿಸುವಷ್ಟರಲ್ಲಿ ಮಾರ್ಗ ನಿರ್ಮಾಣಕ್ಕಾಗಿ ಬಳಸಿದ ರಸ್ತೆಗಳನ್ನು ದುರಸ್ತಿಗೊಳಿಸುವ ಹೊಣೆಗಾರಿಕೆ ಬಿಎಂಆರ್‌ಸಿಎಲ್‌ ಮೇಲಿದೆ. ಅದರಂತೆ ಬಹುತೇಕ ಕಡೆ ರಸ್ತೆಗಳನ್ನು ಬಿಎಂಆರ್‌ಸಿಎಲ್‌ ಸಿದ್ಧಪಡಿಸಿಕೊಡುತ್ತಿದೆ. ಕೆಲವೆಡೆ ರಸ್ತೆ ನಿರ್ಮಿಸಿಕೊಟ್ಟಿಲ್ಲಎಂಬ ಆರೋಪವೂ ಇದೆ. ಆದರೆ ತಡೆಗೋಡೆ ಸಿದ್ಧಗೊಳ್ಳುವುದು ವರ್ಷಗಟ್ಟಲೆ ತಡವಾದಲ್ಲಿಆ ಬಳಿಕವೂ ಬಿಎಂಆರ್‌ಸಿಎಲ್‌ ರಸ್ತೆ ನಿರ್ಮಿಸಿಕೊಡಲಿದಯೇ ಎಂಬುದು ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಹಲವೆಡೆ ಅವ್ಯವಸ್ಥೆ ಕೆಂಗೇರಿ ನಂತರ ನೈಸ್‌ ರಸ್ತೆ ಸಂಪರ್ಕಿಸುವಲ್ಲಿ ಸಾಕಷ್ಟು ರಸ್ತೆ ಹಾಳಾಗಿದ್ದು, ಇದರ ದುರಸ್ತಿ ಕಾರ್ಯ ಆಗಬೇಕಿದೆ. ಅಲ್ಲದೆ, ಜ್ಞಾನಭಾರತಿ ನಿಲ್ದಾಣದ ಎದುರಿನ ಸೇತುವೆಗಳ ಮೇಲ್ಭಾಗ ಸಂಪೂರ್ಣ ಹಾನಿಯಾಗಿದ್ದು, ಡಾಂಬರೀಕರಣ ಕೂಡ ಆಗಿಲ್ಲ. ಗೋಪಾಲನ್‌ ಮಾಲ್‌ ಬಳಿಯೂ ರಸ್ತೆ ದುರಸ್ತಿ ಪೂರ್ಣಗೊಂಡಿಲ್ಲ. ರಸ್ತೆ ಕುರುಹೇ ಮಾಯ! ಕೆಂಗೇರಿ ಬಳಿ ಹೆದ್ದಾರಿ ಕುಸಿದಿರುವ ಜಾಗದಲ್ಲಿnರಸ್ತೆಯಿದ್ದ ಕುರುಹೇ ಇಲ್ಲದಂತಾಗುತ್ತಿದೆ. ಅಷ್ಟರ ಮಟ್ಟಿಗೆ ಗಿಡಗಂಟಿಗಳು ಬೆಳೆದು ನಿಂತಿದೆ. ಕೆಲವರು ಕಸವನ್ನೂ ತಂದು ಸುರಿಯುತ್ತಿದ್ದಾರೆ. ಇದರಿಂದಾಗಿ ಹೆದ್ದಾರಿ ಅಂದಕ್ಕೂ ಧಕ್ಕೆಯಾಗುತ್ತಿದೆ. ವೃಷಭಾವತಿ ನದಿ ತಡೆಗೋಡೆ ಕುಸಿದ ಜಾಗದಲ್ಲಿಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದು, ವಾಹನ ಸವಾರರು ಆತಂಕದಲ್ಲೇ ಸಂಚರಿಸುವಂತಾಗಿದೆ. ಒಂದೇ ಪಥದಲ್ಲಿಬಹಳಷ್ಟು ವಾಹನಗಳು ಸಂಚಧಿರಿಧಿಸುಧಿವುಧಿದಧಿರಿಂದ ಬಹಳಷ್ಟು ಅಪಘಾತಗಳು ಸಂಭವಿಸುತ್ತಿವೆ. ಈ ಸಮಸ್ಯೆ ಪರಿಹರಿಸಲು ರಸ್ತೆ ದುರಸ್ತಿ ಕಾಮಗಾರಿ ಶೀಘ್ರ ನಡೆಯಬೇಕಿದೆ. ಲೋಕೇಶ್‌ ಕುಮಾರ್‌, ದ್ವಿಚಕ್ರ ವಾಹನ ಸವಾರ