ಎಂಎಸ್‌ಸಿಬಿ ಹಗರಣ, ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ಗೆ ಸಂಬಂಧಿಸಿದ ಕಂಪನಿಯ ಆಸ್ತಿ ಜಪ್ತಿ

25,000 ಕೋಟಿ ರೂ. ಮೊತ್ತದ ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಹಲವು ಸಕ್ಕರೆ ಕಾರ್ಖಾನೆಗಳು ಸೇರಿ 65 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ್ದು, ಇದರಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ ಅವರಿಗೆ ಸಂಬಂಧಿಸಿದ ಕಂಪನಿಯ ಪಾಲೂ ಇದೆ.

ಎಂಎಸ್‌ಸಿಬಿ ಹಗರಣ, ಮಹಾರಾಷ್ಟ್ರ ಡಿಸಿಎಂ ಅಜಿತ್‌ ಪವಾರ್‌ಗೆ ಸಂಬಂಧಿಸಿದ ಕಂಪನಿಯ ಆಸ್ತಿ ಜಪ್ತಿ
Linkup
ಮುಂಬಯಿ: 25,000 ಕೋಟಿ ರೂ. ಮೊತ್ತದ ರಾಜ್ಯ ಸಹಕಾರ ಬ್ಯಾಂಕ್‌ (ಎಂಎಸ್‌ಸಿಬಿ) ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಹಲವು ಸಕ್ಕರೆ ಕಾರ್ಖಾನೆಗಳು ಸೇರಿ 65 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದ್ದು, ಇದರಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅವರಿಗೆ ಸಂಬಂಧಿಸಿದ ಕಂಪನಿಯ ಪಾಲೂ ಇದೆ ಎಂದು ತಿಳಿದುಬಂದಿದೆ. ಸತಾರ ಜಿಲ್ಲೆ ಚಿಮಣ್‌ಗಾಂವ್‌- ಕೋರೆಗಾಂವ್‌ ಪ್ರದೇಶದಲ್ಲಿರುವ ಜರಂದೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ (ಎಸ್‌ಎಸ್‌ಕೆ) ಎಂಬ ಸಕ್ಕರೆ ಕಾರ್ಖಾನೆಯನ್ನು ಜಪ್ತಿ ಮಾಡಿದ್ದು, ಇದರಲ್ಲಿ ಅಜಿತ್‌ ಪವಾರ್‌ ಒಡೆತನದ ಸ್ಪಾಕ್ರ್ಲಿಂಗ್‌ ಸಾಯಿಲ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಪಾಲು ಜಾಸ್ತಿ ಇದೆ ಎಂದು ಮೂಲಗಳು ತಿಳಿಸಿವೆ. "ಸ್ಪಾರ್ಕ್ಲಿಂಗ್ ಸಾಯಿಲ್ ಪ್ರೈವೇಟ್ ಲಿಮಿಟೆಡ್ ಜರಾಂದೇಶ್ವರ ಶುಗರ್ ಮಿಲ್ಸ್‌ನ ಬಹುಪಾಲು ಷೇರುಗಳನ್ನು ಹೊಂದಿದೆ. ಇದು ಅಜಿತ್ ಪವಾರ್ ಮತ್ತು ಸುನೇತ್ರ ಪವಾರ್ (ಅವರ ಪತ್ನಿ) ಗೆ ಸಂಬಂಧಿಸಿದ್ದು ಎಂದು ತನಿಖೆಯಿಂದ ತಿಳಿದುಬಂದಿದೆ," ಎಂದು ತನಿಖಾ ಸಂಸ್ಥೆ ಹೇಳಿದೆ. ಎಂಎಸ್‌ಸಿಬಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಅನ್ವಯ ಕೇಸ್‌ ದಾಖಲಿಸಿಕೊಂಡು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.