ಉದ್ಯೋಗ ಯೋಜನೆ ಮೂಲಕ 1 ಲಕ್ಷ ಕೌಶಲ್ಯ ಕಾರ್ಮಿಕರನ್ನು ಸೃಷ್ಟಿಸುವ ಗುರಿ: ಯಡಿಯೂರಪ್ಪ

ಉದ್ಯೋಗ ಯೋಜನೆ ಮೂಲಕ ಪ್ರತಿ ವರ್ಷವೂ ಒಂದು ಲಕ್ಷ ಕೌಶಲ ಕಾರ್ಮಿಕರನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವ ಯುವ ಕೌಶಲ್ಯ ದಿನಾಚರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ.

ಉದ್ಯೋಗ ಯೋಜನೆ ಮೂಲಕ 1 ಲಕ್ಷ ಕೌಶಲ್ಯ ಕಾರ್ಮಿಕರನ್ನು ಸೃಷ್ಟಿಸುವ ಗುರಿ: ಯಡಿಯೂರಪ್ಪ
Linkup
ಬೆಂಗಳೂರು: ಯುವಜನತೆಯ ಉದ್ಯೋಗಾವಕಾಶಗಳಿಗಾಗಿ ಆರಂಭಿಸಲಾಗಿದ್ದು, ವಾರ್ಷಿಕ 1 ಲಕ್ಷ ಕೌಶಲ್ಯ ಹೊಂದಿದ ಕಾರ್ಮಿಕರನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಸಿಎಂ ತಿಳಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಟಾಟಾ ಟೆಕ್ನಾಲಜೀಸ್ ಹಾಗೂ 20 ಉದ್ಯಮ ಪಾಲುದಾರರ ಸಹಯೋಗದೊಂದಿಗೆ 150 ಕೈಗಾರಿಕಾ ತರಬೇತಿ ಕೇಂದ್ರಗಳನ್ನು ತಾಂತ್ರಿಕ ಚಟುವಟಿಕಾ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದು 4,636 ಕೋಟಿ ರೂ. ಯೋಜನೆಯಾಗಿದ್ದು, ಈ ಮೂಲಕ ವಾರ್ಷಿಕ 1 ಲಕ್ಷ ಕೌಶಲ್ಯ ಕಾರ್ಮಿಕರನ್ನು ಸೃಷ್ಟಿಸಲಾಗುತ್ತದೆ ಎಂದರು. ದೇಶದ ಹಾಗೂ ರಾಜ್ಯದ ಏಳಿಗೆಗೆ ಯುವಕರ ಕೊಡುಗೆ ಮಹತ್ವದ್ದಾಗಿದೆ. ಇದಕ್ಕಾಗಿ ರಾಜ್ಯದ 155 ಸರ್ಕಾರಿ‌ ಐಟಿಐಗಳನ್ನು ಉನ್ನತೀಕರಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಅಶ್ವತ್ಥ್ ನಾರಾಯಣ್, ಇಂದು ಎಲ್ಲರೂ ವೈಟ್ ಕಾಲರ್ ಕೆಲಸ‌ ಬಯಸುತ್ತಿದ್ದಾರೆ. ಬ್ಲೂ ಕಾಲರ್ ಕೆಲಸದ ಬಗ್ಗೆ ಯುವ ಜನರಲ್ಲಿ ಹೆಚ್ಚಿನ ಆಸಕ್ತಿ ಇಲ್ಲ. ಶ್ರಮವಿಲ್ಲದ ಕೆಲಸ‌ ಮಾಡುವ ಕಲ್ಪನೆ ಈಗಿನ ಜನರಲ್ಲಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಶ್ರಮಿಕ ವರ್ಗದವರಿಗೆ ಕೌಶಲ್ಯ ವೃದ್ಧಿ ಮಾಡಲು ಯೋಜಿಸಲಾಗಿದೆ ಎಂದರು. ಐಟಿಐ ಶಿಕ್ಷಣ ಸಂಸ್ಥೆಗಳಿಗೆ ಪುನರುಜ್ಜೀವನನೆನೆಗುದಿಗೆ ಬಿದ್ದಿದ್ದ ಐಟಿಐ ಶಿಕ್ಷಣ ಸಂಸ್ಥೆಗಳಿಗೆ ಪುನರುಜ್ಜೀವನ‌ ನೀಡಲಾಗಿದೆ. 155 ಐಟಿಐ ಶಿಕ್ಷಣ ಸಂಸ್ಥೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಒಂದು ಕೋಟಿ ಆರ್ಥಿಕ ಸೃಷ್ಟಿಯ ಗುರಿ ಹೊಂದಲಾಗಿದೆ. ಈ ಸಂಬಂಧ ಎಲ್ಲಾ ಇಲಾಖೆ ಜೊತೆ ಸಮನ್ವಯತೆ ಸಾಧಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ಬೆರಳ ತುದಿಯಲ್ಲಿ ಸಿಗುವ ನಿಟ್ಟಿನಲ್ಲಿ ಆನ್ ಲೈನ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಕ್ರಮಗಳೇನು! ರಾಜ್ಯದ ಯುವ ಜನತೆಗೆ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಮತ್ತು ಪ್ರಧಾನ ಮಂತ್ರಿಗಳ ಕೌಶಲ ವಿಕಾಸ ಯೋಜನೆಯಡಿಯಲ್ಲಿ ವಿವಿಧ ಜಾಬ್ ರೋಲ್ ಗಳಲ್ಲಿ ಭವಿಷ್ಯ ಕೌಶಲ ತರಬೇತಿ ಒಳಗೊಂಡಂತೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಿಗಮವು ಕಾರ್ಯ ನಿರ್ವಹಿಸುತ್ತಿದೆ. ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ ಹಾಗೂ ಪ್ರಧಾನಮಂತ್ರಿ ಯೋಜನೆಯಡಿಯಲ್ಲಿ ಕಳೆದ ಸಾಲಿನಲ್ಲಿ ಕೋವಿಡ್ 19 ನಂತರದ ಅವಧಿಯಲ್ಲಿ 40,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಿ ಸುಮಾರು 7,000ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗವಕಾಶ ಕಲ್ಪಿಸಿಕೊಡಲಾಗಿದೆ. ಸ್ಕಿಲ್ ಕನೆಕ್ಟ್ ಪೋರ್ಟಲ್ ಮುಖಾಂತರ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಒಂದೇ ಸೂರಿನಡಿಯಲ್ಲಿ ತಂದು, ವರ್ಚ್ಯುವಲ್ ಉದ್ಯೋಗ ಮೇಳಗಳನ್ನು 50ಕ್ಕೂ ಹೆಚ್ಚಿನ ಕಂಪೆನಿಗಳಿಂದ ನಡೆಸಿ, 4,500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ವಲಯದಲ್ಲಿ ಕೋವಿಡ್ ವಾರಿಯರ್ಸ್‌ಗಳಿಗಾಗಿ 6 ಜಾಬ್ ರೋಲ್‌ಗಳಲ್ಲಿ 21 ದಿನಗಳ ಕ್ರ್ಯಾಶ್ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ವಯಂಸೇವಕಗಳ ನಿರ್ವಹಣೆಗೆ ತರಬೇತಿ ನೀಡಲಾಗುತ್ತಿದೆ. ಕೋವಿಡ್ ಪರಿಣಾಮದಿಂದಾಗಿ ಶಿಕ್ಷಕರು ಪ್ರವಾಸಿ ಮಾರ್ಗದರ್ಶಿಗಳು ಸೇರಿದಂತೆ, ಇನ್ನಿತರ ವಲಯಗಳಲ್ಲಿ ಉದ್ಯೋಗ ಕಳೆದುಕೊಂಡವರಿಗಾಗಿ ಉದ್ಯೋಗಕ್ಕಾಗಿ ಕೌಶಲ್ಯ ಕಾರ್ಯಕ್ರಮದ ಮೂಲಕ 'ಹೊಸ ಕೌಶಲ್ಯ ಕಲಿಕೆ' ಹಾಗೂ ಉಚಿತ ತರಬೇತಿಯನ್ನು ನಿಗಮವು ನೀಡುತ್ತಿದೆ. ವಿವಿಧ ಸಂಸ್ಥೆಗಳ ಜೊತೆ ಒಡಂಬಡಿಕೆಕಾರ್ಯಕ್ರಮದಲ್ಲಿ ಯುವಕರಿಗೆ ಅಲ್ಪಾವಧಿ ತರಬೇತಿ ನೀಡುವ ಸಲುವಾಗಿ ಟೊಯೊಟಾ, ವಿಪ್ರೊ, ನಾರಾಯಣ ಹೃದಯಾಲಯ, ಆದಿತ್ಯ ಬಿರ್ಲಾ, ಹೋಮ್ ಲೋನ್ ಇತ್ಯಾದಿ ಸಂಸ್ಥೆಗಳ ಜತೆ ಅಧಿಕಾರಿಗಳು ಒಪ್ಪಂದಗಳಿಗೆ ಸಹಿ ಹಾಕಿದರು. ಒಟ್ಟು ಎಂಟು ಒಪ್ಪಂದಗಳಿಗೆ ಸಹಿ ಹಾಕಲಾಯಿತು.