ಈಶ್ವರಪ್ಪಗೆ ಹೆಚ್ಚಿದ ಭದ್ರತೆ..!? ಪ್ರಚೋದನಕಾರಿ ಹೇಳಿಕೆ ಕಾರಣವೇ?

ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಮಾತ್ರ ಪೊಲೀಸ್‌ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕಾರಣ ಏನಿರಬಹುದು? ಇದ್ದಕ್ಕಿದ್ದಂತೆ ಭದ್ರತೆ ಹೆಚ್ಚಳಕ್ಕೆ ಈಶ್ವರಪ್ಪ ಅವರ ಇತ್ತೀಚಿನ ಪ್ರಚೋದನಾಕಾರಿ ಹೇಳಿಕೆಗಳಿರಬಹುದು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ.

ಈಶ್ವರಪ್ಪಗೆ ಹೆಚ್ಚಿದ ಭದ್ರತೆ..!? ಪ್ರಚೋದನಕಾರಿ ಹೇಳಿಕೆ ಕಾರಣವೇ?
Linkup
ಶಿವಮೊಗ್ಗ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ವಿಚಿತ್ರ ಪ್ರವೃತ್ತಿಯ ವೈವಿಧ್ಯಮಯ ನಾಯಕರಿರುವುದು ಆಗಾಗ ನಮಗೆ ಅರಿವಿಗೆ ಬರುತ್ತದೆ. ಒಂದು ಕಡೆ ಗೃಹ ಸಚಿವ ಆರಗ ಜ್ಞಾನೇಂದ್ರನಂತವರು ತಮಗೆ ಹೆಚ್ಚಿನ ಭದ್ರತಾ ವಾಹನ, ಝೀರೋ ಟ್ರಾಫಿಕ್‌ ವ್ಯವಸ್ಥೆ ಬೇಡ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡರೆ, ಇನ್ನು ಕೆಲವರು ಕಸ ಗುಡಿಸಿ, ಬಸ್‌ ಹತ್ತಿ ತಾವು ಸಿಂಪಲ್‌ ಆರ್‌ಎಸ್‌ಎಸ್‌ ನೆಲೆಯ ಮುಖಂಡರು ಎಂದು ತೋರಿಸಿಕೊಳ್ಳುತ್ತಾರೆ. ಆದರೆ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಮಾತ್ರ ಪೊಲೀಸ್‌ ಬಿಗಿ ಕಲ್ಪಿಸಲಾಗಿದೆ. ಕಾರಣ ಏನಿರಬಹುದು? ಇದ್ದಕ್ಕಿದ್ದಂತೆ ಭದ್ರತೆ ಹೆಚ್ಚಳಕ್ಕೆ ಈಶ್ವರಪ್ಪ ಅವರ ಇತ್ತೀಚಿನ ಪ್ರಚೋದನಾಕಾರಿ ಹೇಳಿಕೆಗಳಿರಬಹುದು ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಸಚಿವರಿಗೆ ಎಸ್ಕಾರ್ಟ್‌‌ಗಾಗಿ ಪೊಲೀಸ್‌ ವಾಹವೊಂದೇ ಇಷ್ಟು ದಿನ ಕೆಲಸ ನಿರ್ವಹಿಸುತ್ತಿತ್ತು. ಆದರೆ, ಈಗ ವಿಶೇಷ ಮೀಸಲು ಪಡೆಯ ವಾಹನ ಈಶ್ವರಪ್ಪನವರಿಗೆ ಬೆಂಗಾವಲಾಗಿದೆ. ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿಂದ ಟೈಟ್ ಸೆಕ್ಯೂರಿಟಿ ನೀಡಲಾಗಿದೆ. 7 ರಿಂದ 8 ಸಿಬ್ಬಂದಿಯನ್ನು ಹೊಂದಿರುವ ಡಿಎಆರ್ ವಾಹನದ ಜತೆ ಇಂಟರ್‌ಸೆಪ್ಟಾರ್ ಕೂಡ ನೀಡಲಾಗಿದೆ. ಕಳೆದ ವಾರದಿಂದ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗುತ್ತಿರುವ ಸಚಿವರು. ಪ್ರತಿಭಟನೆ, ಮುತ್ತಿಗೆ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತೆ ನೀಡಿರಬಹುದು ಎಂದು ಹೇಳಲಾಗಿದೆ. ಹೆಚ್ಚುವರಿ ಭದ್ರತೆಯ ಬಗ್ಗೆ ಮಾಹಿತಿ ಇಲ್ಲವೆಂದ ಸಚಿವ ಈಶ್ವರಪ್ಪ ಹೇಳಿದ್ದು, ಕಾಂಗ್ರೆಸ್‌ನವರು ಅಲ್ಲಿ ಇಲ್ಲಿ ಧಿಕ್ಕಾರ ಕೂಗಿದ್ರು. ಆ ಕಾರಣಕ್ಕೇ ಗೃಹಮಂತ್ರಿ ಪ್ರೀತಿಯಿಂದ ಕೊಟ್ಟಿರಬಹುದು ಎಂದು ಸುಮ್ಮನಾಗುತ್ತಾರೆ. ಒಟ್ಟಿನಲ್ಲಿ ಸ್ಮಾರ್ಟ್‌ ಸಿಟಿ ಕಾಮಗಾರಿಗಳಿಂದ ಅದ್ವಾನವಾಗಿರುವ ಶಿವಮೊಗ್ಗ ನಗರದಲ್ಲಿ ಈಶ್ವರಪ್ಪನವರ ಕಾರು, ಬೆಂಗಾವಲು ವಾಹನ ಹಾಗೂ ಹಿಂಬಾಲಕರು ಸಲೀಸಾಗಿ ಎಷ್ಟು ದಿನ ಓಡಾಡಬಲ್ಲರು ಎಂಬುದು ಕುತೂಹಲ ಮೂಡಿಸಿದೆ.