ಇರುಮುಡಿ, ಮಾಲೆ ಧರಿಸಿ 18 ಮೆಟ್ಟಿಲು ಹತ್ತಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ಕೇರಳ ರಾಜ್ಯಪಾಲ ಆರೀಫ್‌ ಖಾನ್‌

ಐದು ಕಿ.ಮೀ ನಡೆದು ನಂತರ ಹದಿನೆಂಟು ಮೆಟ್ಟಿಲುಗಳನ್ನು ಅಯ್ಯಪ್ಪ ಸ್ವಾಮಿಯ ಕೀರ್ತನೆಯೊಂದಿಗೆ ಆರೀಫ್ ಖಾನ್‌‌ ಹತ್ತಿದರು. ಸದ್ಯ ವಿಷು ಹಬ್ಬ ಹಿನ್ನೆಲೆ ತಿಂಗಳ ಪೂಜೆ ಹಿನ್ನೆಲೆ ಶಬರಿಮಲೆ ಸ್ವಾಮಿಯ ದೇವಾಲಯದ ಬಾಗಿಲು ತೆರೆಯಲಾಗಿದೆ. ಸದ್ಯ ಆರೀಫ್‌ ಖಾನ್‌ ಅಯ್ಯಪ್ಪ ಸ್ವಾಮಿಯ ದರ್ಶನದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇರುಮುಡಿ, ಮಾಲೆ ಧರಿಸಿ 18 ಮೆಟ್ಟಿಲು ಹತ್ತಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ಕೇರಳ ರಾಜ್ಯಪಾಲ ಆರೀಫ್‌ ಖಾನ್‌
Linkup
ತಿರುವನಂತಪುರಂ: ತಲೆಯಲ್ಲಿ ಇರುಮುಡಿ, ಕೊರಳಲ್ಲಿ ಅಯ್ಯಪ್ಪನ ಮಾಲೆ ಧರಿಸಿ ಆರೀಫ್ ಮೊಹಮ್ಮದ್ ಖಾನ್ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಹೌದು, ಶಬರಿಮಲೆ ಸಾಂಪ್ರದಾಯದಂತೆ ವ್ರತದಲ್ಲಿದ್ದ ರಾಜ್ಯಪಾಲ ಸ್ವಾಮಿಯ ಮಾಲೆ ಧರಿಸಿ, ಇರುಮುಡಿ ಕಟ್ಟಿಕೊಂಡು ಐದು ಕಿ.ಮೀ ಪಾದಯಾತ್ರೆ ನಡೆಸಿ ಅಯ್ಯಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ಅವರಿಗೆ ಅವರ ಪುತ್ರ ಕಬೀರ್‌ ಕೂಡ ಸಾಥ್‌ ನೀಡಿದ್ದಾರೆ. ಐದು ಕಿ.ಮೀ ನಡೆದು ನಂತರ ಹದಿನೆಂಟು ಮೆಟ್ಟಿಲುಗಳನ್ನು ಅಯ್ಯಪ್ಪ ಸ್ವಾಮಿಯ ಕೀರ್ತನೆಯೊಂದಿಗೆ ಆರೀಫ್ ಖಾನ್‌‌ ಹತ್ತಿದರು. ಸದ್ಯ ವಿಷು ಹಬ್ಬ ಹಿನ್ನೆಲೆ ತಿಂಗಳ ಪೂಜೆ ನಡೆಯುತ್ತದೆ. ಹೀಗಾಗಿ ದೇವಾಲಯ ತೆರೆಯಲಾಗಿದೆ. ಸದ್ಯ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯುವ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. 2018 ರಲ್ಲಿ ಸುಪ್ರೀಂ ಕೋರ್ಟ್ 10-50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶದ ಮೇಲಿನ ನಿಷೇಧವನ್ನು ತೆಗೆದುಹಾಕಿದ ನಂತರ ಶಬರಿಮಲೆ ದೇಗುಲ ವಿವಾದದಲ್ಲಿತ್ತು. ನಂತರ ಕೇರಳ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೆ ತರುವುದಾಗಿ ಘೋಷಿಸಿತ್ತು. ಆದರೂ ಇದು ವಿವಿಧ ಪಕ್ಷಗಳು ಹಾಗೂ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆ ಪ್ರತಿಭಟನೆಗಳು ನಡೆದವು. ಅಯ್ಯಪ್ಪ ಭಕ್ತರು ಶಬರಿಮಲೆ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ತಡೆದರು. ಸದ್ಯ ಈ ವಿವಾದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠದ ಮುಂದಿದ್ದು, ವಿಚಾರಣೆ ನಡೆಯಲಿದೆ.