ಅಪ್ಪನ ಬಳಿ ದೂರು ನೀಡಿದ್ದಕ್ಕೇ ಬಾಲಕಿಯನ್ನು ಕೊಡಲಿಯಿಂದ ಕೊಂದ ದುಷ್ಕರ್ಮಿ

ದಿಲ್ಲಿಯಲ್ಲಿ 11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಯುವಕನೊಬ್ಬ, ಆಕೆಯ ಮೇಲೆ ಕೊಡಲಿಯಿಂದ ದಾಳಿ ನಡೆಸಿ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಅಪ್ಪನ ಬಳಿ ದೂರು ನೀಡಿದ್ದಕ್ಕೇ ಬಾಲಕಿಯನ್ನು ಕೊಡಲಿಯಿಂದ ಕೊಂದ ದುಷ್ಕರ್ಮಿ
Linkup
ಹೊಸದಿಲ್ಲಿ: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಹಲವು ತಿಂಗಳಿನಿಂದ ಹಿಂಬಾಲಿಸುತ್ತಿದ್ದ ವ್ಯಕ್ತಿಯೊಬ್ಬ, ಆಕೆಯನ್ನು ಕೊಡಲಿಯಿಂದ ಕೊಚ್ಚಿ ಮಾಡಿದ ಭಯಾನಕ ಘಟನೆ ದಿಲ್ಲಿಯಲ್ಲಿ ನಡೆದಿದೆ. 21 ವರ್ಷದ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 11ನೇ ತರಗತಿ ವಿದ್ಯಾರ್ಥಿನಿಯನ್ನು ನಿರ್ದಯವಾಗಿ ಕತ್ತರಿಸಿ ಪರಾರಿಯಾಗಿದ್ದ ಪ್ರವೀಣ್‌ನನ್ನು ಹರ್ಯಾಣದ ಪಲ್ವಾಲ್‌ನಲ್ಲಿನ ಆತನ ಅಕ್ಕನ ಮನೆಯಿಂದ ಬಂಧಿಸಲಾಗಿದೆ. 'ಬಾಲಕಿಯೊಬ್ಬಳ ಮೇಲೆ ಕೊಡಲಿಯಿಂದ ದಾಳಿ ನಡೆಸಲಾಗಿದೆ ಎಂದು ನಮಗೆ ಮಧ್ಯಾಹ್ನ 1.30ರ ಸುಮಾರಿಗೆ ಸೌತ್ ಕ್ಯಾಂಪಸ್ ಪೊಲೀಸರಿಂದ ಕರೆಬಂದಿತ್ತು. ಆಕೆಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರದೃಷ್ಟವಶಾತ್ ಆಕೆ ಮಂಗಳವಾರ ಮೃತಪಟ್ಟಿದ್ದಾಳೆ. ಆರೋಪಿಯು ಆಕೆಯನ್ನು ಸದಾ ನೀಡುತ್ತಿದ್ದ. ಆತನನ್ನು ಬಂಧಿಸಲಾಗಿದೆ' ಎಂದು ನೈಋತ್ಯ ಜಿಲ್ಲಾ ಪೊಲೀಸ್ ಆಯುಕ್ತ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ದಿಲ್ಲಿಯ ಮೋತಿ ಬಾಗ್ ಪ್ರದೇಶದ ನಿವಾಸಿಯಾಗಿದ್ದ ನಿರುದ್ಯೋಗಿ ಪ್ರವೀಣ್, ಹಲವು ತಿಂಗಳಿನಿಂದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ. ಇದರಿಂದ ಕಿರಿಕಿರಿ ಅನುಭವಿಸಿದ್ದ , ಕಾವಲುಗಾರನ ಕೆಲಸ ಮಾಡುವ ತಂದೆಗೆ ತಿಳಿಸಿದ್ದಳು. ಆಕೆಯ ತಂದೆ ಪ್ರವೀಣ್‌ನನ್ನು ಥಳಿಸಿದ್ದರು. ಇದರಿಂದ ಮತ್ತಷ್ಟು ಕೋಪಗೊಂಡಿದ್ದ ಪ್ರವೀಣ್, ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದ. ಸುಮಾರು ಒಂದು ತಿಂಗಳ ಹಿಂದೆ ಖರೀದಿಸಿದ್ದ ಆತ, ಸೋಮವಾರ ಬಾಲಕಿಯ ಮನೆಗೆ ತೆರಳಿದ್ದ. ಆಕೆಯ ಮುಖಕ್ಕೆ ಕೊಡಲಿ ಬೀಸಿ ಅಲ್ಲಿಂದ ಪರಾರಿಯಾಗಿದ್ದ. ಬಾಲಕಿಯ ಕಣ್ಣಿನ ರೆಪ್ಪೆಯ ಬಳಿ ತೀವ್ರ ಗಾಯವಾಗಿತ್ತು. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ, ಆಕೆ ಬದುಕುಳಿಯಲಿಲ್ಲ.