ಅಕ್ರಮ ಭೂ ವ್ಯವಹಾರ: ಎನ್‌ಸಿಪಿ ಮುಖಂಡ ಖಾಡ್ಸೆ ಅಳಿಯನನ್ನು ಬಂಧಿಸಿದ ಇ.ಡಿ

2016ರ ಭೂ ಖರೀದಿ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ಮುಖಂಡ ಏಕನಾಥ್ ಖಾಡ್ಸೆ ಅವರ ಅಳಿಯ ಗಿರೀಶ್ ಚೌಧರಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿ ಬಂಧಿಸಿದ್ದಾರೆ.

ಅಕ್ರಮ ಭೂ ವ್ಯವಹಾರ: ಎನ್‌ಸಿಪಿ ಮುಖಂಡ ಖಾಡ್ಸೆ ಅಳಿಯನನ್ನು ಬಂಧಿಸಿದ ಇ.ಡಿ
Linkup
ಮುಂಬಯಿ: ಐದು ವರ್ಷದ ಹಿಂದಿನ ಭೂ ವ್ಯವಹಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಖಂಡ ಅವರ ಅಳಿಯ ಗಿರೀಶ್ ಚೌಧರಿ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಬಂಧಿಸಿದೆ. ಪುಣೆಯಲ್ಲಿ 2016ರಲ್ಲಿ ನಡೆಸಿದ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಬಂಧನವಾಗಿದೆ. ಮುಂಬಯಿಯ ಕಚೇರಿಯಲ್ಲಿ ಮಂಗಳವಾರ ತಡರಾತ್ರಿಯವರೆಗೂ ಚೌಧರಿ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ದಾಖಲಾದ ಪ್ರಕರಣಗಳ ವಿಚಾರಣೆಗೆಂದು ರಚಿಸಲಾಗಿರುವ ವಿಶೇಷ ನ್ಯಾಯಾಲಯದ ಮುಂದೆ ಅವರನ್ನು ಹಾಜರುಪಡಿಸುವ ನಿರೀಕ್ಷೆಯಿದೆ. ಬಿಜೆಪಿ ತೊರೆದು ಎನ್‌ಸಿಪಿ ಸೇರಿದ್ದ ಖಾಡ್ಸೆ ಅವರಿಗೆ, ಇದೇ ಪ್ರಕರಣದಲ್ಲಿ 2020ರ ಡಿಸೆಂಬರ್‌ನಲ್ಲಿ ಇ.ಡಿ ಸಮನ್ಸ್ ನೀಡಿತ್ತು. ಜನವರಿಯಲ್ಲಿ ಅವರನ್ನು ಸುಮಾರು ಆರು ಗಂಟೆ ಕಾಲ ವಿಚಾರಣೆಗೆ ಒಳಪಡಿಸಿತ್ತು. ಮಹಾರಾಷ್ಟ್ರದ ದೇವೇಂದ್ರ ಫಡ್ನವೀಸ್ ಸರಕಾರದಲ್ಲಿ ಸಚಿವರಾಗಿದ್ದ ಖಾಡ್ಸೆ ಅವರು, ಪುಣೆ ಸಮೀಪದ ಭೋಸರಿ ಎಂಬಲ್ಲಿ ಸರಕಾರಿ ಜಮೀನನ್ನು ಖರೀದಿಸಲು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದಡಿ 2016ರಲ್ಲಿ ರಾಜೀನಾಮೆ ನೀಡಿದ್ದರು. 2017ರಲ್ಲಿ ಪೊಲೀಸ್ ಇಲಾಖೆಯ ಭ್ರಷ್ಟಾಚಾರ ವಿರೋಧಿ ದಳವು ಖಾಡ್ಸೆ, ಅವರ ಪತ್ನಿ ಮಂದಾಕಿನಿ, ಅಳಿಯ ಚೌಧರಿ ಮತ್ತು ಮೂಲ ಭೂ ಮಾಲೀಕ ಅಬ್ಬಾಸ್ ಅಖಾನಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿತ್ತು. ಆದರೆ 2018ರಲ್ಲಿ ಖಾಡ್ಸೆ ಅವರಿಗೆ ಎಸಿಬಿ ವರದಿಯಲ್ಲಿ ಕ್ಲೀನ್ ಚಿಟ್ ನೀಡಲಾಗಿತ್ತು.