2024ರ ಚುನಾವಣೆಗೆ ಈಗಿನಿಂದಲೇ ತಯಾರಿ?: ಕುತೂಹಲಕ್ಕೆ ಕಾರಣವಾಯ್ತು ಪ್ರಶಾಂತ್ ಕಿಶೋರ್- ಶರದ್ ಪವಾರ್ ಭೇಟಿ

ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ವಿಧಾನಸಭೆ ಚುನಾವಣೆಗಳಲ್ಲಿನ ಚುನಾವಣಾ ಕಾರ್ಯತಂತ್ರಗಳಿಂದ ಗೆಲುವು ಕಂಡ ಬಳಿಕ ಪ್ರಶಾಂತ್ ಕಿಶೋರ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದು ಕುತೂಹಲ ಕೆರಳಿಸಿದೆ.

2024ರ ಚುನಾವಣೆಗೆ ಈಗಿನಿಂದಲೇ ತಯಾರಿ?: ಕುತೂಹಲಕ್ಕೆ ಕಾರಣವಾಯ್ತು ಪ್ರಶಾಂತ್ ಕಿಶೋರ್- ಶರದ್ ಪವಾರ್ ಭೇಟಿ
Linkup
ಮುಂಬಯಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಆಕ್ರಮಣಕಾರಿ ಪ್ರಚಾರದ ನಡುವೆಯೂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಮರಳಿ ಅಧಿಕಾರ ತಂದುಕೊಟ್ಟ ಹುಮ್ಮಸ್ಸಿನಲ್ಲಿರುವ ಚಾಣಾಕ್ಷ ಅವರ ಹೆಗಲಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ವರ್ಗಾವಣೆಯಾಗುವಂತಿದೆ. ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ಗೆಲುವಿನ ನಗೆ ಬೀರಿದ್ದ ಪ್ರಶಾಂತ್, ಈಗ ದೇಶದ ಪಶ್ಚಿಮ ದಿಕ್ಕಿನತ್ತ ತಮ್ಮ ಅಸ್ತ್ರಗಳನ್ನು ಹೊತ್ತು ಸಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮುಖ್ಯಸ್ಥ ಅವರನ್ನು ಪ್ರಶಾಂತ್ ಕಿಶೋರ್ ಭೇಟಿಯಾಗುತ್ತಿರುವುದು ಕುತೂಹಲ ಮೂಡಿಸಿದೆ. ಮಹಾರಾಷ್ಟ್ರದಲ್ಲಿ 2024ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಅಥವಾ ಸಾರ್ವತ್ರಿಕ ಚುನಾವಣೆಗೆ ಈಗಿನಿಂದಲೇ ಅಡಿಪಾಯ ಹಾಕುವ ಬಗ್ಗೆ ಈ ಮಾತುಕತೆ ನಡೆಯುತ್ತಿದೆ ಎಂಬ ಊಹಾಪೋಹಗಳು ಸೃಷ್ಟಿಯಾಗಿವೆ. ಶರದ್ ಪವಾರ್ ಅವರ ನಿವಾಸದಲ್ಲಿ ಈ ಭೇಟಿ ನಡೆಯುತ್ತಿದೆ. ಬಂಗಾಳ ಹಾಗೂ ತಮಿಳುನಾಡಿನಲ್ಲಿನ ಗೆಲುವುಗಳಿಗೆ ಧನ್ಯವಾದ ಸಲ್ಲಿಸುವುದಕ್ಕಾಗಿ ಈ ಸೌಹಾರ್ದ ಭೇಟಿ ನಡೆಯುತ್ತಿದೆ ಎಂದು ಅಧಿಕೃತವಾಗಿ ಹೇಳಿಕೆ ನೀಡಲಾಗಿದೆ. ಮಮತಾ ಬ್ಯಾನರ್ಜಿ ಮತ್ತು ಎಂಕೆ ಸ್ಟಾಲಿನ್ ಅವರಿಗೆ ಬೆಂಬಲ ಸೂಚಿಸಿದ ಎಲ್ಲ ನಾಯಕರನ್ನೂ ಭೇಟಿ ಮಾಡುವುದಾಗಿ ಪ್ರಶಾಂತ್ ಕಿಶೋರ್ ಅವರ ನಿಕಟವರ್ತಿಗಳು ತಿಳಿಸಿದ್ದಾರೆ. ಆದರೆ,ಈ ಭೇಟಿಯು 2024ರ ಚುನಾವಣೆಗೆ ತಳಪಾಯ ಹಾಕುವ ಮೊದಲ ಹೆಜ್ಜೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಎದುರು ವಿರೋಧಪಕ್ಷದಿಂದ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬ ಪ್ರಬಲ ಊಹಾಪೋಹ ಹರಿದಾಡುತ್ತಿದೆ. ಆದರೆ, ಬಂಗಾಳದಲ್ಲಿನ ಗೆಲುವಿನ ಬಳಿಕ ಚುನಾವಣಾ ಪ್ರಚಾರದ ತಂತ್ರ ರೂಪಿಸುವ ಕಾರ್ಯವನ್ನು ತೊರೆಯುವುದಾಗಿ ಅವರು ಘೋಷಿಸಿದ್ದರು. ಅತ್ತ ಬಿಹಾರದಲ್ಲಿ ಜೆಡಿಯು ಮೂಲಕ ರಾಜಕಾರಣಕ್ಕಿಳಿಯುವ ಯತ್ನದಲ್ಲಿ ವಿಫಲರಾಗಿದ್ದರು. ಹೀಗಾಗಿ ಪ್ರಶಾಂತ್ ಕಿಶೋರ್ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.