15 ದಿನಗಳಿಂದ ಟೊಮೇಟೊ ಬೆಲೆ ಏರಿಕೆ:₹1000ಕ್ಕೆ ಹರಾಜಾಗುತ್ತಿವೆ 15 ಕೆಜಿ ಕ್ರೇಟ್‌!

ಕೋಲಾರದ ಮುಳಬಾಗಿಲು ತಾಲೂಕಿನ ಎನ್‌.ವಡ್ಡಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಒಂದು ಕ್ರೇಟ್‌ ಟೊಮೇಟೊ 1000 ರೂ.ಗೆ ಹರಾಜಾಗಿದ್ದು, 15 ದಿನಗಳಿಂದ ಬೆಲೆ ಏರಿಕೆಯಾಗುತ್ತಿರುವುದರಿಂದ ಉತ್ತಮ ಬೆಳೆ ಹೊಂದಿರುವವರೆಗೆ ಹೆಚ್ಚು ಖುಷಿ ತಂದಿದೆ.

15 ದಿನಗಳಿಂದ ಟೊಮೇಟೊ ಬೆಲೆ ಏರಿಕೆ:₹1000ಕ್ಕೆ ಹರಾಜಾಗುತ್ತಿವೆ 15 ಕೆಜಿ ಕ್ರೇಟ್‌!
Linkup
ಕೆ.ಪ್ರಕಾಶ್‌ ಮುಳಬಾಗಲು ತಾಲೂಕಿನ ಎನ್‌.ವಡ್ಡಹಳ್ಳಿ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಒಂದು ಕ್ರೇಟ್‌ ಟೊಮೇಟೊ 1000 ರೂ.ಗೆ ಹರಾಜಾಗಿದ್ದು, 15 ದಿನಗಳಿಂದ ಬೆಲೆ ಏರಿಕೆಯಾಗುತ್ತಿರುವುದರಿಂದ ಉತ್ತಮ ಬೆಳೆ ಹೊಂದಿರುವವರೆಗೆ ಹೆಚ್ಚು ಖುಷಿ ತಂದಿದೆ. ಕಳೆದ 2 ತಿಂಗಳಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ರೈತಾಪಿ ವರ್ಗ ಬೆಳೆದ ಶೇ.50ರಷ್ಟು ಟೊಮೇಟೊ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಬೆಲೆ ಇದ್ದರೂ ರೈತರಿಗೆ ಹೆಚ್ಚಿನ ಆದಾಯ ಸಿಗದೇ ಇರುವುದರಿಂದ ಅತೃಪ್ತಿ ಉಂಟಾಗಿದೆ. ಕೆಲ ರೈತರ ಬೆಳೆ ಉತ್ತಮವಾಗಿದ್ದು ಅವರಿಗೆ ಒಳ್ಳೆಯ ವರಮಾನ ಸಿಗುತ್ತಿದೆ. ಒಂದು ಎಕರೆ ಟೊಮೇಟೊ ಬೆಳೆಯಬೇಕಾದರೆ 1.5 ಲಕ್ಷ ವೆಚ್ಚ ತಗಲುತ್ತದೆ. ಈಗ ಉತ್ತಮ ಬೆಲೆ ಇದ್ದರೂ ಸಹ ಕಡಿಮೆ ಬೆಳೆ ಇರುವುದರಿಂದ ರೈತರು ನಿರಾಶೆ ಪಡುವಂತಾಗಿದೆ. ಹೊರರಾಜ್ಯಗಳಿಂದ ಹೆಚ್ಚಿನ ಬೇಡಿಕೆ: ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮಳೆಯಾಗಿರುವುದರಿಂದ ಅಲ್ಲಿನ ರೈತರು ಬೆಳೆದ ಟೊಮೇಟೊ ಸಂಪೂರ್ಣ ನಾಶವಾಗಿದ್ದು ಇಲ್ಲಿನ ಟೊಮೇಟೊಗೆ ಭಾರಿ ಬೇಡಿಕೆ ಇದೆ. ಈ ರಾಜ್ಯಗಳಿಂದ ಟೊಮೇಟೊ ಖರೀದಿಗೆ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಬೇಡಿಕೆ ಹೆಚ್ಚಲು ಪ್ರಮುಖ ಕಾರಣವಾಗಿದೆ. ಹಿಂದೆ ಮಾರುಕಟ್ಟೆಗೆ ಒಂದು ಲಕ್ಷ ಕ್ರೇಟ್‌ಗಳು ಹರಾಜಿಗೆ ಬರುತ್ತಿತ್ತು. ಈಗ ಕೇವಲ 30 ಸಾವಿರ ಕ್ರೇಟ್‌ಗಳು ಬರುತ್ತಿವೆ. ಉತ್ತಮ ಬೆಲೆ ಸಿಕ್ಕಿದರೂ ರೈತರು ಬೆಳೆದ ಪೂರ್ತಿ ಬೆಳೆಗಳಿಗೆ ಬೆಲೆ ಸಿಗಲಿಲ್ಲ ಎಂಬ ಕೊರಗು ರೈತರಲ್ಲಿ ಮನೆ ಮಾಡಿದೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ರೈತರು ಬೆಳೆದ ಟೊಮೇಟೊಗೆ ಬೇಡಿಕೆ ಇಲ್ಲದಂತಾಗಿತ್ತು. ಆಗ ರೈತರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು ಈಗ ಉತ್ತಮ ಬೆಲೆ ಇದ್ದರೂ ಬೆಳೆನಾಶದಿಂದ ಹೆಚ್ಚಿನ ಆದಾಯ ತಪ್ಪಿದೆ. ಪ್ರಸುತ್ತ 15 ಕೆಜಿ ಟೊಮೇಟೊ ಬೆಲೆ 1000 ರೂ.ಗಳಿಗೆ ಮಾರಾಟವಾಗುತ್ತಿದ್ದರೂ ಹೆಚ್ಚಿನ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು ರೈತರಿಗೆ ಹೆಚ್ಚಿನ ಆದಾಯ ಬರುತ್ತಿಲ್ಲ. ಇದರಿಂದ ಬ್ಯಾಂಕ್‌, ಕೈಸಾಲ ಹೇಗೆ ತೀರಿಸುವುದು ಎಂಬ ಲೆಕ್ಕಾಚಾರದಲ್ಲಿ ರೈತಾಪಿ ವರ್ಗ ತೊಡಗಿದೆ. -ನಗವಾರ ಸತ್ಯಣ್ಣ, ಎಪಿಎಂಸಿ ನಿರ್ದೇಶಕ ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಲಾಕ್‌ಡೌನ್‌ ಎಫೆಕ್ಟ್‌ನಿಂದ ಟೊಮೇಟೊ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದು ಈಗ ಮಳೆಯಿಂದ ಇನ್ನೂ ಹೆಚ್ಚಿನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಟೊಮೇಟೊ ಬೆಲೆ ಹೆಚ್ಚಾಗಿದ್ದರೂ ರೈತರಲ್ಲಿ ಸಂತಸ ಇಲ್ಲ. -ಶಂಕರಪ್ಪ, ರೈತ