ಕೊರೊನಾ: 'ನಿಮ್ಮ ಅಧಿಕಾರಿಗಳ ಮೇಲೆ ಕೊಲೆ ಆರೋಪ ಹೊರಿಸಬೇಕು' - ಚುನಾವಣಾ ಆಯೋಗಕ್ಕೆ ಕೋರ್ಟ್‌ ತರಾಟೆ

ನಿಮ್ಮ ಸಂಸ್ಥೆಯೇ (ಚುನಾವಣಾ ಆಯೋಗ) ಕೊರೊನಾ ಎರಡನೇ ಅಲೆಗೆ ಏಕೈಕ ಕಾರಣ. ನಿಮ್ಮ ಅಧಿಕಾರಿಗಳ ವಿರುದ್ಧ ಬಹುಶಃ ಕೊಲೆ ಆರೋಪದಲ್ಲಿ ಕೇಸ್‌ ದಾಖಲಿಸಬೇಕು ಎಂದು ಆಯೋಗವನ್ನು ಮದ್ರಾಸ್‌ ಹೈಕೋರ್ಟ್‌ ಸೋಮವಾರ ತರಾಟೆಗೆ ತೆಗೆದುಕೊಂಡಿದೆ.

ಕೊರೊನಾ: 'ನಿಮ್ಮ ಅಧಿಕಾರಿಗಳ ಮೇಲೆ ಕೊಲೆ ಆರೋಪ ಹೊರಿಸಬೇಕು' - ಚುನಾವಣಾ ಆಯೋಗಕ್ಕೆ ಕೋರ್ಟ್‌ ತರಾಟೆ
Linkup
ಚೆನ್ನೈ: ಕೋವಿಡ್‌ ಎರಡನೇ ಅಲೆಗೆ ಚುನಾವಣಾ ಆಯೋಗವೇ ಕಾರಣ ಎಂದಿರುವ , ಕೊಲೆಗೆ ಸಂಬಂಧಿಸಿದ ಪ್ರಕರಣ ದಾಖಲಿಸಬೇಕಾಗಬಹುದು ಎಂದು ಖಾರವಾಗಿ ಹೇಳಿದೆ. ಪಂಚ ರಾಜ್ಯ ಚುನಾವಣಾ ಪ್ರಚಾರಗಳಿಗೆ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಹೈಕೋರ್ಟ್‌ ಈ ಮಾತುಗಳನ್ನು ಹೇಳಿದೆ. ಅಷ್ಟೇ ಅಲ್ಲ ನೀಲನಕ್ಷೆ ನೀಡದಿದ್ದರೆ ಭಾನುವಾರ ಮತ ಎಣಿಕೆಯನ್ನೂ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಆದೇಶವನ್ನು ನೋಡಿದ ನಂತರ ಈ ಬಗ್ಗೆ ಪ್ರತಿಕ್ರಿಯಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. “ನಿಮ್ಮ ಸಂಸ್ಥೆಯೇ ಕೊರೊನಾ ಎರಡನೇ ಅಲೆಗೆ ಏಕೈಕ ಕಾರಣ. ನಿಮ್ಮ ಅಧಿಕಾರಿಗಳ ವಿರುದ್ಧ ಬಹುಶಃ ಕೊಲೆ ಆರೋಪದಲ್ಲಿ ಕೇಸ್‌ ದಾಖಲಿಸಬೇಕು,” ಎಂದು ಚುನಾವಣಾ ಆಯೋಗವನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯಗಳ ಆದೇಶದ ಹೊರತಾಗಿಯು ಪ್ರಚಾರದ ವೇಳೆ ಮಾಸ್ಕ್‌, ಸ್ಯಾನಿಟೈಸರ್‌, ದೈಹಿಕ ಅಂತರವೂ ಸೇರಿದಂತೆ ಕೊರೊನಾ ಸುರಕ್ಷಿತ ಕ್ರಮಗಳನ್ನು ಜಾರಿಗೆ ತರಲು ಚುನಾವಣಾ ಆಯೋಗ ವಿಫಲವಾಗಿದೆ. "ಚುನಾವಣಾ ಸಮಾವೇಶಗಳು ನಡೆಯುತ್ತಿರುವಾಗ ನೀವೇನು ಅನ್ಯಗ್ರಹದಲ್ಲಿದ್ರಾ?" ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಆಯೋಗಕ್ಕೆ ಛೀಮಾರಿ ಹಾಕಿದ್ದಾರೆ. ಮೇ 2 ರಂದು ಮತ ಎಣಿಕೆ ವೇಳೆ ಕೊರೊನಾ ನಿಯಮಗಳನ್ನು ಹೇಗೆ ಪಾಲಿಸುತ್ತೀರಿ ಎಂಬುದರ ಯೋಜನೆಯನ್ನು ಕೋರ್ಟ್‌ ಮುಂದಿಡುವಂತೆ ಚುನಾವಣಾ ಆಯೋಗವನ್ನು ನ್ಯಾಯಾಲಯ ಕೇಳಿದೆ. ಇದು ಸಾಧ್ಯವಾಗದಿದ್ದರೆ ಮತ ಎಣಿಕೆಯನ್ನೂ ನಿಲ್ಲಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಜನರ ಆರೋಗ್ಯ ಬಹಳ ಮುಖ್ಯ. ಸಾಂವಿಧಾನಿಕ ಸಂಸ್ಥೆಗಳನ್ನು ಎಚ್ಚರಿಸಬೇಕಾಗಿದೆ ಎಂಬುದು ಬೇಸರದ ಸಂಗತಿ. ನಾಗರಿಕನು ಬದುಕುಳಿದಾಗ ಮಾತ್ರ ಅವನಿಗೆ ಪ್ರಜಾಪ್ರಭುತ್ವವು ಖಾತರಿಪಡಿಸುವ ಹಕ್ಕುಗಳನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸೋಮವಾರ ಸಂಜೆ ವೇಳೆ ಪ್ರಕರಣದ ಆದೇಶ ಹೊರಬೀಳಬಹುದು ಎಂದುಕೊಳ್ಳಲಾಗಿದೆ. ತಾವು ಪ್ರತಿನಿಧಿಸುವ ಕರೂರ್‌ ಕ್ಷೇತ್ರದಲ್ಲಿ ಮತಎಣಿಕೆ ವೇಳೆ ಕೊರೊನಾ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಕೋರಿ ತಮಿಳುನಾಡು ಸಾರಿಗೆ ಸಚಿವ ಎಂಆರ್‌ ವಿಜಯಭಾಸ್ಕರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಮದ್ರಾಸ್‌ ಹೈಕೋರ್ಟ್‌ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.