ಬುಲ್ಲಿ ಬಾಯಿ ಆಪ್‌ನಲ್ಲಿ ಮಹಿಳೆಯರ ಹರಾಜು: ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ

ಮಹಿಳೆಯರ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿ ಅವರನ್ನು ಹರಾಜು ಹಾಕುತ್ತಿದ್ದ ಬುಲ್ಲಿ ಬಾಯಿ ಆಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಮುಂಬಯಿ ಸೈಬರ್ ಘಟಕದ ಪೊಲೀಸರು ಬಂಧಿಸಿದ್ದಾರೆ.

ಬುಲ್ಲಿ ಬಾಯಿ ಆಪ್‌ನಲ್ಲಿ ಮಹಿಳೆಯರ ಹರಾಜು: ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧನ
Linkup
ಮುಂಬಯಿ: ದೇಶಾದ್ಯಂತ ಸಂಚಲನ ಮೂಡಿಸಿರುವ '' ಆಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನನ್ನು ಪೊಲೀಸ್ ಸೈಬರ್ ಘಟಕ ಬೆಂಗಳೂರಿನಲ್ಲಿ ಸೋಮವಾರ ಬಂಧಿಸಿದೆ. ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದ ಶಂಕಿತನ ಹೆಸರು ವಿಶಾಲ್ ಕುಮಾರ್ ಎಂದು ತಿಳಿದುಬಂದಿದೆ. ಆತನನ್ನು ಮುಂಬಯಿಗೆ ಸೋಮವಾರ ಕರೆದೊಯ್ಯಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಸುಮಾರು 13 ಗಂಟೆ ಆತನ ವಿಚಾರಣೆ ನಡೆದಿದೆ. ಬಂಧಿತ ವಿದ್ಯಾರ್ಥಿ ಬುಲ್ಲಿ ಬಾಯಿ ಆಪ್‌ ಅನ್ನು ನಿಭಾಯಿಸುತ್ತಿದ್ದ. ಈಗ ಕುಮಾರಸ್ವಾಮಿ ಲೇಔಟ್‌ ನಿವಾಸಿಯಾಗಿದ್ದಾನೆ. ಉತ್ತರಾಖಂಡದಲ್ಲಿ ಕೂಡ ಒಬ್ಬ ಮಹಿಳೆಯನ್ನು ಬಂಧಿಸಲಾಗಿದೆ. ಇವರಿಬ್ಬರೂ ಪರಸ್ಪರ ಪರಿಚಿತರು ಎನ್ನಲಾಗಿದೆ. ಐಪಿಸಿ ಮತ್ತು ಐಟಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿ ಪೊಲೀಸರು ಅಪರಿಚಿತ ತಪ್ಪಿತಸ್ಥರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. () ಎಂಬ ಆನ್‌ಲೈನ್ ಪ್ಲಾಟ್‌ಫಾರ್ಮ್‌ನ ಬುಲ್ಲಿ ಬಾಯಿ ಅಪ್ಲಿಕೇಷನ್‌ನಲ್ಲಿ ಮಹಿಳೆಯರ ತಿದ್ದಿದ ಚಿತ್ರಗಳನ್ನು ಅಪ್‌ಲೋಡ್ ಮಾಡಿ ಹರಾಜಿಗೆ ಹಾಕಲಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಮುಂಬಯಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಮುಂಬಯಿ ಪಶ್ಚಿಮ ಸೈಬರ್ ಪೊಲೀಸ್ ಠಾಣೆಯ ಪೊಲೀಸರು 'ಬುಲ್ಲಿ ಬಾಯಿ' ಆಪ್ ಡೆವಲಪರ್‌ಗಳು ಮತ್ತು ಆ ಆಪ್‌ ಅನ್ನು ಪ್ರಚಾರ ಮಾಡುವ ಟ್ವಿಟ್ಟರ್ ಹ್ಯಾಂಡಲ್‌ಗಳ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ನೂರಾರು ಮುಸ್ಲಿಂ ಮಹಿಳೆಯರ ಫೋಟೊಗಳು ಮತ್ತು ವಿವರಗಳನ್ನು ಪೋಸ್ಟ್ ಮಾಡಲಾಗುತ್ತಿತ್ತು. ಅಪರಿಚಿತ ತಪ್ಪಿತಸ್ಥರ ವಿರುದ್ಧ ಐಪಿಸಿಯ 153 (ಎ) ಸೆಕ್ಷನ್ (ಧರ್ಮ ಹಾಗೂ ಇತರೆ ಆಧಾರದಲ್ಲಿ ವಿಭಿನ್ನ ಗುಂಪುಗಳ ನಡುವೆ ವೈರತ್ವ ಪ್ರಚಾರ ಮಾಡುವುದು), 153 (ಬಿ) (ರಾಷ್ಟ್ರೀಯ ಸಮಗ್ರತೆಗೆ ಹಾನಿ ಮಾಡುವ ಆರೋಪ), 295 (ಎ) (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಸಲುವಾಗಿ ಉದ್ದೇಶಪೂರ್ವಕ ಮತ್ತು ಕೆಟ್ಟ ಕೃತ್ಯ), 354 (ಡಿ) (ಹಿಂಬಾಲಿಸುವಿಕೆ), 509 (ಮಹಿಳೆಯರ ಘನತೆಗೆ ಧಕ್ಕೆ ತರುವ ಉದ್ದೇಶದ ಪದ, ಸಂಜ್ಞೆ ಅಥವಾ ವರ್ತನೆ), 500 (ಅಪರಾಧ ಮಾನಹಾನಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67 (ವಿದ್ಯುನ್ಮಾನ ರೂಪದಲ್ಲಿ ಅಶ್ಲೀಲ ವಿಚಾರಗಳನ್ನು ಪ್ರಕಟಿಸುವುದು ಅಥವಾ ಹರಡುವುದು) ಪ್ರಕರಣಗಳನ್ನು ದಾಖಲಿಸಲಾಗಿದೆ. ದಿಲ್ಲಿ ಮತ್ತು ಮುಂಬಯಿ ಎರಡೂ ಕಡೆ ಪೊಲೀಸರು ಸಂಬಂಧಿತ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲು ಮಾಡಿದ್ದಾರೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ ತಿಳಿಸಿದ್ದರು. ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಯಾವ ರಾಜ್ಯದವನು ಎಂದು ತಿಳಿದುಬಂದಿಲ್ಲ. ಈ ಆಪ್ ಹಿಂದೆ ಇರುವ ಅನೇಕರಲ್ಲಿ ಆತನೂ ಒಬ್ಬ. ಇತರೆ ಬಂಧಿತರ ದೇಶದ ಬೇರೆ ಬೇರೆ ಭಾಗದವರು. ಇದು ಜಂಟಿ ಕಾರ್ಯಾಚರಣೆ ಅಲ್ಲ. ಮುಂಬಯಿ ಸೈಬರ್ ಪೊಲೀಸರು ಮಾತ್ರವೇ ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾಲೇಜು ವಿದ್ಯಾರ್ಥಿ ಹಾಗೂ ಇತರರನ್ನು ಬೇರೆ ಯಾರೋ ಇದಕ್ಕೆ ನಿಯೋಜಿಸಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಮಹಿಳೆಯರನ್ನು ಗುರಿ ಮಾಡಲು ಅವರು ಬೇರೆ ಯಾರನ್ನೋ ಬಳಸುತ್ತಿದ್ದರು ಎಂದು ಮಹಾರಾಷ್ಟ್ರ ಗೃಹ ಸಚಿವ ಸತೇಜ್ ಪಟೇಲ್ ತಿಳಿಸಿದ್ದಾರೆ.