ಕೋವಿಡ್‌ ನಿಯಮ ಪಾಲಿಸಿದ್ರೆ ಲಾಕ್ಡೌನ್‌ ಇಲ್ಲ: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೇಳಿಕೆ

ಮಾಸ್ಕ್ ಧಾರಣೆ, ದೈಹಿಕ ಅಂತ ಸೇರಿ ಸರ್ಕಾರ ವಿಧಿಸಿರುವ ಕೊರೊನಾ ನಿಯಮಾವಳಿಗಳನ್ನು ಪಾಲನೆ ಮಾಡಿದ್ದೇ ಆದಲ್ಲಿ ದೆಹಲಿಯಲ್ಲಿ ಲಾಕ್‌ಡೌನ್‌ ಹೇರಿಕೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಕೋವಿಡ್‌ ನಿಯಮ ಪಾಲಿಸಿದ್ರೆ ಲಾಕ್ಡೌನ್‌ ಇಲ್ಲ: ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೇಳಿಕೆ
Linkup
ಹೊಸದಿಲ್ಲಿ: ರೂಪಾಂತರಿ ಓಮಿಕ್ರಾನ್‌ನಿಂದ ಉಂಟಾಗಿರುವ ಕೋವಿಡ್‌ನ ಮೂರನೇ ಅಲೆ ತತ್ತರಿಸಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲಾಕ್‌ಡೌನ್ ಹೇರುವುದಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಹೇಳಿದ್ದಾರೆ. ಆ ಮೂಲಕ ದೆಹಲಿಯಲ್ಲಿ ಹೇರಲಾಗುತ್ತದೆ ಎನ್ನುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರು ಮಾಸ್ಕ್‌ ಧರಿಸಬೇಕು. ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್‌ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದು ವಿನಂತಿಸಿದರು. ಹೀಗಾದಲ್ಲಿ ದೆಹಲಿಯಲ್ಲಿ ಲಾಕ್‌ಡೌನ್‌ ಮಾಡುವುದಿಲ್ಲ ಎಂದು ವಾಗ್ದಾನ ಮಾಡಿದರು. 'ಯಾರೂ ಭಯ ಪಡಬೇಕಾದ ಅಗತ್ಯ ಇಲ್ಲ. ನಾವು ಈಗಲೇ ಲಾಕ್‌ಡೌನ್‌ ಹೇರಿಕೆ ಮಾಡುವುದಿಲ್ಲ. ಜನಸಾಮಾನ್ಯರಿಗೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ನಾವು ಆದಷ್ಟು ಕಡಿಮೆ ನಿರ್ಬಂಧಗಳನ್ನು ಹಾಕುತ್ತಿದ್ದೇವೆ. ನಾಳೆ ಮತ್ತೆ ದೆಹಲಿ ವಿಪತ್ತು ನಿರ್ವಹಣಾ ಸಂಸ್ಥೆ (Delhi Disaster Management Agency - DDMA) ಮತ್ತೊಂದು ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಲಿದೆ' ಎಂದು ಹೇಳಿದರು. ಇದೇ ವೇಳೆ ಕೋವಿಡ್‌ ನಿಯಮಾವಳಿಗಳನ್ನು ಪಾಲನೆ ಮಾಡಿ ಎಂದು ಜನರಲ್ಲಿ ಭಿನ್ನವಿಸಿಕೊಂಡಿರುವ ಅವರು, ಆದಷ್ಟು ಬೇಗ ಎಲ್ಲರೂ ಎರಡೂ ಡೋಸ್‌ ಲಸಿಕೆ ಹಾಕಿಸಿಕೊಳ್ಳಿ ಎಂದು ವಿನಂತಿ ಮಾಡಿಕೊಂಡಿದ್ದಾರೆ. ಇದೇ ವೇಳೆ ತಾವು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾಗಿಯೂ ಅವರು ಹೇಳಿದ್ದಾರೆ. ಕೋವಿಡ್‌ನಿಂದ ಗುಣಮುಖನಾಗಿ ಮತ್ತೆ ನಿಮ್ಮ ಸೇವೆಗೆ ನಾನು ಲಭ್ಯನಿದ್ದೇನೆ. ಎರಡು ದಿನಳಿಂದ ಜ್ವರ ಬಾಧಿಸಿ ನಾನು ಐಸೊಲೇಷನ್‌ನಲ್ಲಿದ್ದೆ ಎಂದು ಅವರು ಹೇಳಿದ್ದಾರೆ. ಉತ್ತರಾಖಂಡ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಅವರಿಗೆ ಕೋವಿಡ್‌ ಸೋಂಕು ತಗುಲಿತ್ತು. ಇದಾದ ಬಳಿಕ ಅವರು ಇದೀಗ ಚೇತರಿಸಿಕೊಂಡಿದ್ದಾರೆ. ಇನ್ನು ಶನಿವಾರ ದೆಹಲಿಯಲ್ಲಿ 20,181 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ಅಲ್ಲಿನ ಪಾಸಿಟಿವಿಟಿ ದರ ಶೇ.16ಕ್ಕೆ ಏರಿದೆ. ಎರಡನೇ ಅಲೆ ಉಲ್ಬಣವಾಗಿದ್ದ ವೇಳೆ ಏಪ್ರಿಲ್‌ 23 ರಂದು ದೆಹಲಿಯಲ್ಲಿ ಒಂದೇ ದಿನ 26,169 ಪ್ರಕರಣಗಳು ಪತ್ತೆಯಾಗಿದ್ದವು. ಈ ಬಾರಿ ಸೋಂಕು ಹರಡುತ್ತಿರುವ ಪ್ರಮಾಣ ನೋಡಿದರೆ ಇದಕ್ಕಿಂತ ಹೆಚ್ಚು ಕೇಸುಗಳು ದಾಖಲಾಗಬಹದು ಎಂದು ಅಂದಾಜಿಸಲಾಗಿದೆ. ಪ್ರಕರಣ ಹೆಚ್ಚಾದರೂ ಅಪಾಯ ಕಡಿಮೆ ತಳಿ ಪ್ರಬಲವಾಗುತ್ತಿದ್ದರೂ, ಭವಿಷ್ಯದಲ್ಲಿ ಅದು ಹೆಚ್ಚೇನೂ ತೊಂದರೆ ನೀಡುವುದಿಲ್ಲ. ಏಕೆಂದರೆ ಇತರೆ ಕಳವಳಕಾರಿ ತಳಿಗಳಷ್ಟು ಅದರ ಲಕ್ಷಣಗಳು ಗಂಭೀರವಾಗಿಲ್ಲ ಎಂದು ಆರೋಗ್ಯ ತಜ್ಞರೊಬ್ಬರು ಹೇಳಿದ್ದಾರೆ. ಓಮಿಕ್ರಾನ್ ಭಾರತದಲ್ಲಿ ಡೆಲ್ಟಾಕ್ಕಿಂತಲೂ ಹೆಚ್ಚು ಪ್ರಾಬಲ್ಯ ಪ್ರದರ್ಶಿಸುತ್ತಿದೆ. ಹಾಗೆಂದಯ ಭವಿಷ್ಯದಲ್ಲಿ ಇದು ಕೆಟ್ಟ ಸ್ಥಿತಿ ನಿರ್ಮಿಸುವುದಿಲ್ಲ. ಓಮಿಕ್ರಾನ್ ತಳಿಯ ಕೊರೊನಾ ಸೋಂಕಿತ ರೋಗಿಗಳ ಪೈಕಿ ಹೆಚ್ಚಿನವರಲ್ಲಿ ಲಘು ಮತ್ತು ಮಧ್ಯಮ ಪ್ರಮಾಣದಲ್ಲಿ ಲಕ್ಷಣಗಳು ಇದ್ದರೂ, ಮೂರರಿಂದ ನಾಲ್ಕು ದಿನಗಳಲ್ಲಿ ಅವು ಕಡಿಮೆಯಾಗುತ್ತಿವೆ ಎಂದು ದಿಲ್ಲಿಯ ಹೆಲ್ವೆಟಿಯಾ ವೈದ್ಯಕೀಯ ಕೇಂದ್ರದ ವೈದ್ಯ ಡಾ. ಎಸ್ ಚಂದ್ರ ತಿಳಿಸಿದ್ದಾರೆ. 'ಓಮಿಕ್ರಾನ್ ತಳಿಯ ಲಕ್ಷಣಗಳು ಬಹಳ ಕಡಿಮೆ ಅಪಾಯಕಾರಿ ಎಂಬ ಅಂಶವನ್ನು ಪರಿಗಣಿಸಿದರೆ, ಓಮಿಕ್ರಾನ್ ಪ್ರಬಲ ತಳಿಯಾಗಿ ಕೆಡುಕಿನ ಸನ್ನಿವೇಶ ಉಂಟುಮಾಡುವುದಿಲ್ಲ' ಎಂದು ಅವರು ತಿಳಿಸಿದ್ದಾರೆ. 'ಓಮಿಕ್ರಾನ್ ರೋಗಿಗಳಲ್ಲಿ ಲಕ್ಷಣಗಳು ಬಹುತೇಕ ಲಘು ಮತ್ತು ಮಧ್ಯಮ ಪ್ರಮಾಣದಲ್ಲಿ ಕಂಡುಬಂದಿದೆ. ಈ ಲಕ್ಷಣಗಳು ಮೂರರಿಂದ ನಾಲ್ಕು ದಿನಗಳಲ್ಲಿ ಕಡಿಮೆಯಾಗುತ್ತಿವೆ' ಎಂದು ಹೇಳಿದ್ದಾರೆ.