ತಮಿಳುನಾಡಿನ ಜನತೆಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ: ಪೆಟ್ರೋಲ್ ದರ 3 ರೂ ಇಳಿಕೆ

ತಮಿಳುನಾಡಿನ ಜನತೆಗೆ ಅಲ್ಲಿನ ಸರ್ಕಾರ ಬಂಪರ್ ಸುದ್ದಿ ನೀಡಿದೆ. ಸತತ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಪೆಟ್ರೋಲ್ ದರದಲ್ಲಿ ಲೀಟರ್‌ಗೆ 3 ರೂಪಾಯಿ ಕಡಿತಗೊಳಿಸಿದೆ.

ತಮಿಳುನಾಡಿನ ಜನತೆಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ: ಪೆಟ್ರೋಲ್ ದರ 3 ರೂ ಇಳಿಕೆ
Linkup
ಚೆನ್ನೈ: ಮತ್ತು ಡೀಸೆಲ್ ದರಗಳ ಸತತ ಏರಿಕೆಯಿಂದ ತತ್ತರಿಸಿರುವ ಜನತೆಗೆ ಸರ್ಕಾರ ಖುಷಿ ಸುದ್ದಿ ನೀಡಿದೆ. ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಕಡಿತಗೊಳಿಸುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ. ತಮಿಳುನಾಡು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದ ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್, ಪೆಟ್ರೋಲ್ ದರವನ್ನು ಲೀಟರ್‌ಗೆ 3 ರೂಪಾಯಿ ಇಳಿಸುವುದಾಗಿ ಪ್ರಕಟಿಸಿದರು. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವರ್ಷಕ್ಕೆ 1,160 ಕೋಟಿ ರೂ ಹೊರೆಯಾಗಲಿದೆ ಎಂದು ತಿಳಿಸಿದರು. 'ತಮಿಳುನಾಡಿನಲ್ಲಿ 2.6 ಕೋಟಿ ಜನ ದ್ವಿಚಕ್ರ ವಾಹನ ಬಳಕೆದಾರರಿದ್ದಾರೆ. ನಾವು ಪೆಟ್ರೋಲ್ ಬೆಲೆಯನ್ನು 3 ರೂಪಾಯಿ ಕಡಿತಗೊಳಿಸಿದ್ದೇವೆ. ಇದರಿಂದ ನಾವು 1,160 ಕೋಟಿ ರೂ ಕೊರತೆ ಎದುರಿಸಲಿದ್ದೇವೆ' ಎಂದು ತ್ಯಾಗರಾಜನ್ ಹೇಳಿದರು. ಪೆಟ್ರೋಲ್ ಮೇಲಿನ ರಾಜ್ಯ ಸೆಸ್ ಅನ್ನು 3 ರೂಪಾಯಿ ಕಡಿತಗೊಳಿಸಲಾಗಿದೆ. ಈ ವರ್ಷದ ಏಪ್ರಿಲ್‌ನಲ್ಲಿ ನೇತೃತ್ವದ ಭಾರಿ ಬಹುಮತದಿಂದ ಅಧಿಕಾರಕ್ಕೆ ಬಂದ ಬಳಿಕ ಮಂಡಿಸಿದ ಮೊದಲ ಬಜೆಟ್ ಇದಾಗಿದೆ. ಪೆಟ್ರೋಲ್ ದರ ಕಡಿತವು ಆಗಸ್ಟ್ 14ರ ಶನಿವಾರದಿಂದಲೇ ಜಾರಿಗೆ ಬರಲಿದೆ. ತಮಿಳುನಾಡಿಗೆ ಪ್ರತ್ಯೇಕ ಶಿಕ್ಷಣ ನೀತಿ ಜಾರಿಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿಯ ಅನುದಾನವನ್ನು 3 ಕೋಟಿಗೆ ಹೆಚ್ಚಿಸಲಾಗಿದೆ. ಸರ್ಕಾರಿ ಸಿಬ್ಬಂದಿಯ ತಾಯ್ತನ ರಜೆಯನ್ನು 12 ತಿಂಗಳಿಗೆ ಏರಿಸಲಾಗಿದೆ. ರಾಜ್ಯದಲ್ಲಿನ ಮಸೀದಿ ಮತ್ತು ಚರ್ಚ್‌ಗಳ ನವೀಕರಣಕ್ಕೆ 6 ಕೋಟಿ ರೂ ಹಂಚಿಕೆ ಮಾಡಲಾಗಿದೆ.