ಆರೆಸ್ಸೆಸ್ ಮತ್ತು ಬಿಜೆಪಿಯವರು ಧರ್ಮದ ದಲ್ಲಾಳಿಗಳು: ರಾಹುಲ್ ಗಾಂಧಿ ಟೀಕೆ

ಆರೆಸ್ಸೆಸ್ ಮತ್ತು ಬಿಜೆಪಿಯವರು ನಕಲಿ ಹಿಂದೂಗಳು. ಅವರು ಧರ್ಮವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರು ಧರ್ಮದ ದಲ್ಲಾಳಿಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಆರೆಸ್ಸೆಸ್ ಮತ್ತು ಬಿಜೆಪಿಯವರು ಧರ್ಮದ ದಲ್ಲಾಳಿಗಳು: ರಾಹುಲ್ ಗಾಂಧಿ ಟೀಕೆ
Linkup
ಹೊಸದಿಲ್ಲಿ: ಹಿಂದುತ್ವದ ಪ್ರತಿಪಾದನೆ ಮಾಡುತ್ತಿರುವ ಮತ್ತು ಬಿಜೆಪಿಯವರು ನಕಲಿ ಹಿಂದೂಗಳು. ಅವರು ಧರ್ಮವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ದಲ್ಲಾಳಿಗಳಾಗಿದ್ದಾರೆ ಎಂದು ನಾಯಕ ಟೀಕಾಪ್ರಹಾರ ನಡೆಸಿದ್ದಾರೆ. ರಾಜಧಾನಿ ಹೊಸದಿಲ್ಲಿಯಲ್ಲಿ ಬುಧವಾರ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್‌ನ ಸಿದ್ಧಾಂತಗಳು ಬಿಜೆಪಿ-ಆರೆಸ್ಸೆಸ್ ಸಿದ್ಧಾಂತಕ್ಕೆ ಸಂಪೂರ್ಣ ತದ್ವಿರುದ್ಧವಾಗಿದೆ. ದೇಶವನ್ನು ಎರಡರಲ್ಲಿ ಒಂದು ಸಿದ್ಧಾಂತ ಮಾತ್ರ ಆಳಬಹುದಾಗಿದೆ ಎಂದು ಹೇಳಿದ್ದಾರೆ. ತಮ್ಮದು ಪಕ್ಷ ಎಂದು ಹಾಗೂ ಆರೆಸ್ಸೆಸ್ ಹೇಳುತ್ತಿವೆ. ಕಳೆದ 100-200 ವರ್ಷಗಳಲ್ಲಿ ಹಿಂದೂ ಧರ್ಮವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಮತ್ತು ಅಭ್ಯಾಸಮಾಡಿದವರೆಂದರೆ ಅದು ಮಹಾತ್ಮ ಗಾಂಧಿ. ನಾವು ಅದನ್ನು ಗುರುತಿಸಿದ್ದೇವೆ, ಹಾಗೆಯೇ ಬಿಜೆಪಿ ಮತ್ತು ಆರೆಸ್ಸಿಗರು ಕೂಡ ಎಂದಿದ್ದಾರೆ. ಮಹಾತ್ಮ ಗಾಂಧಿ ಅವರು ತಮ್ಮ ಇಡೀ ಜೀವನವನ್ನು ಹಿಂದೂ ಧರ್ಮವನ್ನು ಅರ್ಥಮಾಡಿಕೊಳ್ಳಲು ಮುಡಿಪಾಗಿಟ್ಟಿದ್ದರೆ ಗೋಡ್ಸೆ ಏಕೆ ಅವರನ್ನು ಕೊಲ್ಲಬೇಕಿತ್ತು? ಇದು ಒಂದು ವಿರೋಧಾಭಾಸ. ಇದರ ಬಗ್ಗೆ ನೀವು ಯೋಚಿಸಬೇಕು ಎಂದು ಹೇಳಿದ್ದಾರೆ. ಮಹಾತ್ಮ ಗಾಂಧಿ ಅವರ ಚಿತ್ರವನ್ನು ನೀವು ನೋಡಿದರೆ, ಅವರ ಸುತ್ತಲೂ 2-3 ಮಹಿಳೆಯರು ಇರುವುದನ್ನು ಕಾಣುತ್ತೀರಿ. ಮೋಹನ್ ಭಾಗವತ್ (ಆರೆಸ್ಸೆಸ್ ಮುಖ್ಯಸ್ಥ) ಹೀಗೆ ಯಾವುದಾದರೂ ಮಹಿಳೆ ಜತೆಗೆ ಇರುವ ಚಿತ್ರವನ್ನು ನೋಡಿದ್ದೀರಾ? ಇದು ಏಕೆಂದರೆ, ಅವರ ಸಂಘಟನೆಯು ಮಹಿಳೆಯರನ್ನು ಶೋಷಿಸುತ್ತದೆ. ಮತ್ತು ನಮ್ಮ ಸಂಘಟನೆ ಅವರಿಗೆ ವೇದಿಕೆ ಕಲ್ಪಿಸುತ್ತದೆ. ಮೋದಿ-ಆರೆಸ್ಸೆಸ್ ಯಾವುದೇ ಮಹಿಳೆಯನ್ನು ದೇಶದ ಪ್ರಧಾನಿಯನ್ನಾಗಿ ಮಾಡಿಲ್ಲ. ಕಾಂಗ್ರೆಸ್ ಮಾಡಿತ್ತು ಎಂದಿದ್ದಾರೆ. ಲಕ್ಷ್ಮೀ ದೇವತೆಯು ಒಬ್ಬರು ತಮ್ಮ ಗುರಿಯನ್ನು ತಲುಪಲು ಬೇಕಾದ ಶಕ್ತಿಯನ್ನು ನೀಡುತ್ತಾಳೆ. ದುರ್ಗಾ ದೇವತೆಯು ರಕ್ಷಣೆಯ ಶಕ್ತಿಯನ್ನು ನೀಡುತ್ತಾಳೆ. ತಮ್ಮ ಪಕ್ಷ ಸರ್ಕಾರ ರಚಿಸಿದ್ದಾಗ ಈ ಶಕ್ತಿಗಳನ್ನು ಬಲಪಡಿಸಿತ್ತು. ಆದರೆ ಬಿಜೆಪಿಯ ದುರಾಡಳಿತ ಈ ಶಕ್ತಿಗಳನ್ನು ನಾಶಪಡಿಸಿದೆ ಎಂದು ಟೀಕಿಸಿದ್ದಾರೆ. ಅವರು ಎಂತಹ ಹಿಂದೂಗಳು? ಅವರು ನಕಲಿ ಹಿಂದೂಗಳು. ಅವರು ಹಿಂದೂ ಧರ್ಮವನ್ನು ಬಳಸಿಕೊಳ್ಳುತ್ತಿದ್ದಾರೆ. ಅವರು ಧರ್ಮದ ದಲ್ಲಾಳಿಗಳು. ಆದರೆ ಅವರು ಹಿಂದೂಗಳಲ್ಲ ಎಂದು ಆರೋಪಿಸಿದ್ದಾರೆ.