ಗುಡ್ ನ್ಯೂಸ್: ಹಣ್ಣಡಕೆ ಸುಲಿಯಲು ಬಂತು ಹೊಸ ಯಂತ್ರ; 10 ನಿಮಿಷ ಸುಲಿತ, ರಾಶಿ ಅಡಕೆ ಉತ್ಪತ್ತಿ!

ಹಣ್ಣಡಕೆಯನ್ನು ಅತೀ ನಾಜೂಕಿನಿಂದ ಸುಲಿಯುವ ಸಾಮರ್ಥ್ಯವನ್ನು ಯಂತ್ರ ಹೊಂದಿದೆ. 8 ಕೆಜಿ ತೂಕದ ಹಣ್ಣಡಕೆಯನ್ನು ಸಿಪ್ಪೆ ಸಮೇತ 8ರಿಂದ 10 ನಿಮಿಷದಲ್ಲಿ ಸುಲಿಯುವ ನೈಪುಣ್ಯತೆ ಯಂತ್ರದಾಗಿದೆ. ಶೇ.95ರಷ್ಟು ಹಣ್ಣಡಕೆ ರಾಶಿ ಅಡಕೆಯನ್ನಾಗಿಸುವ ಸಾಮರ್ಥ್ಯ ಯಂತ್ರಕ್ಕಿದೆ.

ಗುಡ್ ನ್ಯೂಸ್: ಹಣ್ಣಡಕೆ ಸುಲಿಯಲು ಬಂತು ಹೊಸ ಯಂತ್ರ; 10 ನಿಮಿಷ ಸುಲಿತ, ರಾಶಿ ಅಡಕೆ ಉತ್ಪತ್ತಿ!
Linkup
ರಾಘವೇಂದ್ರ ಮೇಗರವಳ್ಳಿ, ತೀರ್ಥಹಳ್ಳಿ ಬೆಂಗಳೂರು: ಆಧುನಿಕ ತಂತ್ರಜ್ಞಾನದ ಸುಧಾರಿತ ಯಂತ್ರಗಳ ಆವಿಷ್ಕಾರದಿಂದ ವ್ಯವಸಾಯ ಕ್ಷೇತ್ರ ನಿರೀಕ್ಷೆಗೂ ಮೀರಿ ಬದಲಾಗುತ್ತಿದೆ. ಹಳ್ಳಿಗಳಲ್ಲಿ ಕೃಷಿಯಂತ್ರಗಳ ಸದ್ದು ಹೆಚ್ಚಾಗಿದ್ದು ಬಹುತೇಕ ರೈತರು ಯಂತ್ರಗಳನ್ನೇ ಆವಲಂಭಿಸಿದ್ದಾರೆ. ಪ್ರಕೃತಿ ವೈಪರೀತ್ಯ, ಕೂಲಿ ಆಳುಗಳ ಸಮಸ್ಯೆಯಿಂದ ಪಾರಾಗಲು ಮಲೆನಾಡು ಭಾಗದಲ್ಲಿ ರೈತರು ಕೃಷಿ ಯಂತ್ರಗಳತ್ತ ಆಕರ್ಷಿತರಾಗಿದ್ದಾರೆ. ಈ ವರ್ಷ ಪ್ರಕೃತಿ ರೈತರಿಗೆ ಕೈ ಕೊಟ್ಟಿದ್ದು ಸಂಸ್ಕರಣೆ ಸಾಧ್ಯವಿಲ್ಲದ ಪರಿಸ್ಥಿತಿ ಸೃಷ್ಟಿಸಿದೆ. ಈ ಬಾರಿ ಕೃಷಿಯಂತ್ರಗಳ ಸಂಶೋಧಕ ಕುಂಟುವಳ್ಳಿ ವಿಶ್ವನಾಥ್‌ ಹೊಸ ಯಂತ್ರದ ಮೂಲಕ ರೈತರ ಕೈಹಿಡಿದಿದ್ದಾರೆ. ಸರಳ ತಾಂತ್ರಿಕತೆ ಹೊಂದಿದ ಸುಲಿಯುವ ಯಂತ್ರವನ್ನು ಸಂಶೋಧಿಸಿ ಸಿದ್ಧಪಡಿಸಿದ್ದಾರೆ. ಹಣ್ಣಡಕೆಯನ್ನು ಅತೀ ನಾಜೂಕಿನಿಂದ ಸುಲಿಯುವ ಸಾಮರ್ಥ್ಯವನ್ನು ಯಂತ್ರ ಹೊಂದಿದೆ. 8 ಕೆಜಿ ತೂಕದ ಹಣ್ಣಡಕೆಯನ್ನು ಸಿಪ್ಪೆ ಸಮೇತ 8ರಿಂದ 10 ನಿಮಿಷದಲ್ಲಿ ಸುಲಿಯುವ ನೈಪುಣ್ಯತೆ ಯಂತ್ರದಾಗಿದೆ. ಶೇ.95ರಷ್ಟು ಹಣ್ಣಡಕೆ ರಾಶಿ ಅಡಕೆಯನ್ನಾಗಿಸುವ ಸಾಮರ್ಥ್ಯ ಯಂತ್ರಕ್ಕಿದೆ. ಬೆಲೆ ಕೇವಲ 75 ಸಾವಿರ ರೂಪಾಯಿ. ಚಿಕ್ಕದಾಗಿದ್ದು ರೈತರಿಗೆ ಉಪಯುಕ್ತ ಲಾಭಗಳಿವೆ. ಯಂತ್ರ ಸಂಶೋಧನೆಯಿಂದ ಹಣ್ಣಡಕೆ ಸುಲಿಯುವ ಚಿಂತೆ ರೈತರಿಗೆ ಈಗ ಇಲ್ಲವಾಗಿದೆ. ಮಾರುಕಟ್ಟೆಯಲ್ಲಿ ರಾಶಿ ಇಡಿ ಅಡಕೆಗೆ ಉತ್ತಮ ಧಾರಣೆ ಇದ್ದು, ಹಣ್ಣಡಕೆ ಸುಲಿಯುವ ಯಂತ್ರ ಬಳಸಿದರೆ ಅತೀ ಹೆಚ್ಚು ಲಾಭಗಳಿಸಬಹುದಾದ ಅವಕಾಶ ರೈತರಿಗಿದೆ. ಮಳೆ ಅವಧಿಯಲ್ಲಿ ಅಡಕೆ ಸಂಸ್ಕರಣೆ ರೈತರ ಪಾಲಿಗೆ ದೊಡ್ಡ ಸವಾಲಿನ ಕಾಯಕ. ಅಡಕೆ ಗೊನೆ ಕೀಳಲು ಸಾಧ್ಯವಾಗದೆ ತೊಂದರೆಗೆ ಒಳಪಟ್ಟು ಹಣ್ಣಡಕೆ ಹೆಕ್ಕುವ ಅನಿವಾರ‍್ಯತೆ ರೈತರದ್ದು. ಹಣ್ಣಡಕೆ ಸುಲಿಯುವ ಚಿಂತೆಯನ್ನು ಈಗ ವಿ-ಟೆಕ್‌ ಎಂಜಿನಿಯರ್ಸ್ ಸಂಸ್ಥೆ ಇಲ್ಲವಾಗಿಸಿದೆ. ಅತ್ಯಂತ ಸುಧಾರಿತ ಗುಣಮಟ್ಟದ ಹಣ್ಣಡಕೆ ಸುಲಿಯುವ ಯಂತ್ರವನ್ನು ರೈತರಿಗೆ ನೀಡಲು ಸಂಸ್ಥೆ ಸಿದ್ಧವಾಗಿದೆ. ಆಧುನಿಕ ಕೃಷಿ ಪದ್ಧತಿ ಯಂತ್ರಗಳ ಬಳಕೆಯನ್ನೇ ಹೆಚ್ಚಾಗಿ ಆವಲಂಭಿಸಿದೆ. ಬಹುತೇಕ ರೈತರ ಮನೆಗಳಲ್ಲಿ ಅಡಕೆ ಸುಲಿಯುವ ಯಂತ್ರಗಳಿವೆ. ಹಣ್ಣಡಕೆ ಸುಲಿಯಲು ಯಂತ್ರ ಆವಿಷ್ಕಾರಗೊಂಡಿರಲಿಲ್ಲ. ರೈತರು ಹಣ್ಣಡಕೆಯನ್ನು ಸಿಪ್ಟೆಗೋಟು ಅಡಕೆಯನ್ನಾಗಿಸುತ್ತಿದ್ದರು. ಹಣ್ಣಡಕೆ ಸುಲಿಯುವ ಯಂತ್ರವನ್ನು ಯುವ ಸಂಶೋಧಕ ಕುಂಟುವಳ್ಳಿ ವಿಶ್ವನಾಥ್‌ ಸಂಶೋಧಿಸಿ ವಿ-ಟೆಕ್‌ ಎಂಜಿನಿಯರ್ಸ್ ಸಂಸ್ಥೆ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದು ರೈತರ ಮೊಗದಲ್ಲಿ ಹರ್ಷ ಮೂಡಿಸುವಂತೆ ಮಾಡಿದೆ. ರೈತರ ಕೈ ಹಿಡಿದ ಯುವ ಸಂಶೋಧಕ ಕುಂಟುವಳ್ಳಿ ವಿಶ್ವನಾಥ್‌ 3 ದಶಕದ ಹಿಂದೆ ಅಡಕೆಗೆ ಮಾರುಕಟ್ಟೆಯಲ್ಲಿ ಉತ್ತಮಧಾರಣೆ ದೊರೆತ ನಂತರ ಮಲೆನಾಡಿನ ಆರ್ಥಿಕ ಸ್ಥಿತಿ ಸಂಪೂರ್ಣ ಬದಲಾಗಿದೆ. ಅಡಕೆ ಬೆಳೆಯುವ ಪ್ರದೇಶದ ವಿಸ್ತೀರ್ಣ ನಿರೀಕ್ಷೆಗೂ ಮೀರಿ ವೃದ್ಧಿ ಆಗಿದೆ. ಪ್ರಕೃತಿ ಬೆಳವಣಿಯಿಂದಾಗುವ ಸಮಸ್ಯೆ, ಕೂಲಿ ಆಳುಗಳ ಕೊರತೆ ಅಡಕೆ ಕೃಷಿ ಮೇಲೆ ದುಷ್ಪರಿಣಾಮ ಬೀರಿದೆ. ಇಂತಹ ಬಿಕ್ಕಟ್ಟಿನಲ್ಲಿ ಅಡಕೆ ಕೃಷಿಕರ ಕೈಹಿಡಿಯುವ ಪ್ರಯತ್ನದಲ್ಲಿ ಯಶಸು ಪಡೆದಿದ್ದು ಕುಂಟುವಳ್ಳಿ ವಿಶ್ವನಾಥ್‌ ಅವರ ಸಂಶೋಧಕ ಯಂತ್ರಗಳು. ಕುಗ್ರಾಮ ಕುಂಟುವಳ್ಳಿಯಲ್ಲಿ ವಿ.ಟೆಕ್‌ ಎಂಜಿನಿಯರ್ಸ್ ಸಂಸ್ಥೆ ಆರಂಭಿಸಿ ರೈತಸ್ನೇಹಿ ಯಂತ್ರಗಳನ್ನು ಸಂಶೋಧಿಸಿ ರೈತರಿಗೆ ನೆರವು ನೀಡಿದ ಹಿರಿಮೆ ಸಂಸ್ಥೆಯದ್ದಾಗಿದೆ.