ಅರುಣ್ ಸಿಂಗ್ ವಿರುದ್ಧ ಎಚ್‌ಡಿಕೆ ನೀಡಿರುವುದು ಚೀಪ್‌ ರೇಟೆಡ್‌ ಹೇಳಿಕೆ: ಅಶ್ವತ್ಥ ನಾರಾಯಣ ಕಿಡಿ

​​​ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೂಟ್‌ಕೇಸ್ ತೆಗೆದುಕೊಂಡು ಹೋಗುವ ದಲ್ಲಾಳಿ ಎಂಬ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಸಚಿವ ಡಾ ಸಿಎನ್‌ ಅಶ್ವತ್ಥ ನಾರಾಯಣ ಕಿಡಿಕಾರಿದ್ದಾರೆ. ಇದು ವೈಯಕ್ತಿಕ ಅಪಾದನೆ, ಹಿಟ್‌ ಆಂಡ್‌ ರನ್‌ ಹೇಳಿಕೆ. ಯಾವುದೇ ಆಧಾರ ಇಲ್ಲದೇ ಚೀಪ್‌ ರೇಟೆಡ್‌ ಹೇಳಿಕೆ ಖಂಡನೀಯ ಎಂದರು.

ಅರುಣ್ ಸಿಂಗ್ ವಿರುದ್ಧ ಎಚ್‌ಡಿಕೆ ನೀಡಿರುವುದು ಚೀಪ್‌ ರೇಟೆಡ್‌ ಹೇಳಿಕೆ: ಅಶ್ವತ್ಥ ನಾರಾಯಣ ಕಿಡಿ
Linkup
ಅರುಣ್ ಸಿಂಗ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ ವೈಯಕ್ತಿಕ ಅಪಾದನೆ, ಹಿಟ್ ಆಂಡ್ ರನ್ ಹೇಳಿಕೆ ಕೊಟ್ಟಿದ್ದಾರೆ. ಯಾವುದೇ ಆಧಾರ ಇಲ್ಲದೆ ಚೀಪ್ ರೇಟೆಡ್ ಹೇಳಿಕೆ ಖಂಡನೀಯ ಎಂದು ಸಚಿವ ಕಿಡಿಕಾರಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೂಟ್‌ಕೇಸ್ ತೆಗೆದುಕೊಂಡು ಹೋಗುವ ದಲ್ಲಾಳಿ ಎಂಬ ಮಾಜಿ ಸಿಎಂ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಒಂದು ಪಕ್ಷವಾಗಿ ನಾವು ಪ್ರತಿಪಕ್ಷವನ್ನು ಖಂಡನೆ ಮಾಡುತ್ತೇವೆ. ಜೆಡಿಎಸ್ ಪ್ರಸ್ತುತ ಪಕ್ಷವಲ್ಲ ಎಂಬ ಹೇಳಿಕೆಯನ್ನು ಅರುಣ್ ಸಿಂಗ್ ಕೊಟ್ಟಿದ್ದರು. ಆದರೆ, ಕುಮಾರಸ್ವಾಮಿ ಅರುಣ್ ಸಿಂಗ್ ವಿರುದ್ಧ ವೈಯಕ್ತಿಕ ಅಪಾದನೆ ಮಾಡಿದ್ದಾರೆ ಎಂದರು. ಯಾವುದಾದರೂ ಆಧಾರ ಇದ್ದರೆ ಬಹಿರಂಗಪಡಿಸಲಿ. ಇದರ ಹೊರತಾಗಿ ಈ ರೀತಿಯ ಆರೋಪ ಕರ್ನಾಟಕದ ಸಂಸ್ಕೃತಿಗೆ ವಿರುದ್ಧವಾಗಿದೆ. ಅವರ ಪಕ್ಷ ಸದೃಢವಾಗಿದ್ದರೆ ತಿಳಿಸಲಿ. ಅದರ ಹೊರತಾಗಿ ಈ ರೀತಿಯ ನಿರಾಧಾರ ಹೇಳಿಕೆ ಕೊಡುವುದು ಸರಿಯಲ್ಲ ಹಾಗೂ ಖಂಡನೀಯ ಎಂದರು. ಬಿಜೆಪಿ ಪಕ್ಷ ಹಾಗೂ ಸರ್ಕಾರ ಸದೃಢವಾಗಿದೆ. ಕೇಂದ್ರದ ಅನುದಾನ ಪಡೆದುಕೊಂಡು ರಾಜ್ಯಕ್ಕೆ ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕೊಡುತ್ತಿದ್ದೇವೆ. ಇವರು ಯಾವ ರೀತಿ ಕೆಲಸ ಮಾಡುತ್ತಾರೆ ಎಂದು ಹೇಳಲಿ. ನೀರಾವರಿ ಯೋಜನೆ ವಿಚಾರವಾಗಿ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಂಡಿದೆ.ರಾಜ್ಯದ ಹಿತಕ್ಕಾಗಿ ಉತ್ತಮ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಇನ್ನು, ಬಿಜೆಪಿ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಸರ್ಕಾರದಲ್ಲಿ ಇಂತಹ ದಂಧೆಗಳು ನಡೆದಿದ್ದವು. ಹಣ ಪಡೆದು ವರ್ಗಾವಣೆ ಮಾಡುವುದು ಕಾಂಗ್ರೆಸ್ ಸಂಸ್ಕೃತಿ.‌ ಈ ಸಂಸ್ಕೃತಿಯಿಂದ ಹೊರ ಬರುವ ಪ್ರಯತ್ನ ನಮ್ಮ ಸರ್ಕಾರ ಮಾಡುತ್ತಿದೆ.‌ ಸಿದ್ದರಾಮಯ್ಯ ಅವರದ್ದು ಹಿಟ್ ಆಂಡ್ ರನ್ ಹೇಳಿಕೆ. ಆಧಾರ ಇಟ್ಟುಕೊಂಡು ಮಾತನಾಡಲಿ ಎಂದು ತಿರುಗೇಟು ನೀಡಿದರು. ಬುಧವಾರ ಮೈಸೂರಿನಲ್ಲಿ ಮಾತನಾಡಿದ್ದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ, ಕರ್ನಾಟಕ ಹಾಗೂ ಇಲ್ಲಿನ ಸ್ಥಳೀಯ ಪಕ್ಷದ ಬಗ್ಗೆ ಅರುಣ್‌ ಸಿಂಗ್‌ಗೆ ಮಾಹಿತಿ ಇಲ್ಲ. ಪಾಪ ಅವರಿಗೆ ಏನ್ ಗೊತ್ತು? ಆತ ಬಂದಿರೋದು ಕೇವಲ ಹಣ ವಸೂಲಿ ಮಾಡೋದಕ್ಕೆ ಎಂದು ಆರೋಪ ಮಾಡಿದ್ದರು.