ಭೂಗತ ಜಗತ್ತಿನ ಜತೆ ನಂಟು: ಇಡಿ ವಿಚಾರಣೆ ಬಳಿಕ ಸಚಿವ ನವಾಬ್ ಮಲಿಕ್ ಬಂಧನ

ಮುಂಬಯಿ ಭೂಗತ ಲೋಕ, ದಾವೂದ್ ಇಬ್ರಾಹಿಂ ಹಾಗೂ ಆತನ ಸಹಚರರ ಜತೆ ನಂಟು ಹೊಂದಿದ ಆರೋಪಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಮಹಾರಾಷ್ಟ್ರ ಸರ್ಕಾರದ ಸಚಿವ, ಎನ್‌ಸಿಪಿ ಮುಖಂಡ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ ಮಂಗಳವಾರ ಬಂಧಿಸಿದೆ.

ಭೂಗತ ಜಗತ್ತಿನ ಜತೆ ನಂಟು: ಇಡಿ ವಿಚಾರಣೆ ಬಳಿಕ ಸಚಿವ ನವಾಬ್ ಮಲಿಕ್ ಬಂಧನ
Linkup
ಮುಂಬಯಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖಂಡ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ಅವರನ್ನು ಬಂಧಿಸಿದೆ. ಮಂಗಳವಾರ ಬೆಳಿಗ್ಗೆಯೇ ಮಲಿಕ್ ಅವರನ್ನು ಕಚೇರಿಗೆ ಕರೆದೊಯ್ದಿದ್ದ ಇಡಿ ಅಧಿಕಾರಿಗಳು, ಮಧ್ಯಾಹ್ನದವರೆಗೆ ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಬಂಧಿಸಿದೆ. ಎನ್‌ಸಿಪಿ ಮುಖಂಡ ನವಾಬ್ ಮಲಿಕ್ () ಅವರ ಮನೆಗೆ ಮಂಗಳವಾರ ಮುಂಜಾನೆ 6 ಗಂಟೆಗೆ ತೆರಳಿದ ಇಡಿ ಅಧಿಕಾರಿಗಳು, ಅಲ್ಲಿ ಸುಮಾರು ಒಂದು ಗಂಟೆ ವಿಚಾರಣೆಗೆ ಒಳಪಡಿಸಿದರು. ಬಳಿಕ 7.30ರ ವೇಳೆಗೆ ಇಡಿ (ED) ಕಚೇರಿಗೆ ಕರೆದೊಯ್ದಿದ್ದರು. 8.30ರಿಂದ ಮತ್ತೆ ವಿಚಾರಣೆ ಮುಂದುವರಿಸಲಾಗಿತ್ತು. ಮುಂಬಯಿ ಭೂಗತ ಲೋಕ, ದೇಶದಿಂದ ಪರಾರಿಯಾಗಿರುವ ಗ್ಯಾಂಗ್‌ಸ್ಟರ್ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 62 ವರ್ಷದ ನವಾಬ್ ಮಲಿಕ್ ಅವರಿಗೆ ಇಡಿ ಸಮನ್ಸ್ ನೀಡಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ಮಲಿಕ್ ಅವರ ಹೇಳಿಕೆ ದಾಖಲಿಸಲಾಗಿದೆ. ಇತ್ತೀಚೆಗೆ, ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಾಸ್ಕರ್‌ಗೆ ಸೇರಿದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಇಡಿ, ಆತನನ್ನು ಬಂಧಿಸಿತ್ತು. ಈ ತನಿಖೆ ವೇಳೆ ನವಾಬ್ ಮಲಿಕ್‌ಗೆ ಅವರು ಖರೀದಿಸಿದ ಕೆಲವು ಆಸ್ತಿಗಳ ವಿವರಗಳಿಗೆ ಸಂಬಂಧಿಸಿದ ಪುರಾವೆಗಳು ಪತ್ತೆಯಾಗಿದ್ದವು ಎನ್ನಲಾಗಿದೆ. "ನವಾಬ್ ಮಲಿಕ್ ಅವರು ಸತ್ಯವನ್ನು ಹೊರಗೆಡವುತ್ತಿದ್ದಾರೆ. ಬಿಜೆಪಿ ವಿರುದ್ಧ ಯಾರೇ ಮಾತನಾಡಿದರೂ ಅವರನ್ನು ಸಿಬಿಐ ಮತ್ತು ಇಡಿ ಬೆನ್ನಟ್ಟುತ್ತವೆ. ಅವರನ್ನು ಇಡಿ ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದೆ. ಅವರು ತನಿಖೆ ನಡೆಸಲಿ. ಅವರು ಸಂಜೆ ವೇಳೆ ಮನೆಗೆ ಮರಳುತ್ತಾರೆ ಎಂದು ಭರವಸೆ ಹೊಂದಿದ್ದೇವೆ" ಎಂದು ಶಿವಸೇನಾ ಸಂಸದ ಸಂಜಯ್ ರಾವ್ ಬೆಳಿಗ್ಗೆ ಹೇಳಿದ್ದರು. "ನವಾಬ್ ಮಲಿಕ್ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದಾಗಲೇ ಅವರನ್ನು ಈ ರೀತಿಯಲ್ಲಿ ಗುರಿಪಡಿಸಲಾಗುತ್ತದೆ ಎನ್ನುವುದು ನಮಗೆ ತಿಳಿದಿತ್ತು. ಅವರ ವಿರುದ್ಧದ ಪ್ರಕರಣದ ಬಗ್ಗೆ ನನಗೆ ತಿಳಿದಿಲ್ಲ. ಆದರೆ, ಎದುರಾಳಿಗಳನ್ನು ಮಟ್ಟಹಾಕಲು ಯಾವಾಗಲೂ ದಾವೂದ್ ಹೆಸರನ್ನು ಬಳಸಲಾಗುತ್ತಿದೆ" ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದರು.