ಜನನಿಬಿಡ ಹೂವಿನ ಮಾರುಕಟ್ಟೆಯಲ್ಲಿ ಅನುಮಾನಾಸ್ಪದ ಬ್ಯಾಗ್ ಒಳಗೆ ಬಾಂಬ್ ಪತ್ತೆ

ಪೂರ್ವ ದಿಲ್ಲಿಯ ಗಾಜಿಪುರದಲ್ಲಿರುವ ಹೂವಿನ ಮಾರುಕಟ್ಟೆಯಲ್ಲಿ ಅನುಮಾನಾಸ್ಪದವಾಗಿ ಇರಿಸಿದ್ದ ಬ್ಯಾಗ್ ಒಂದರಲ್ಲಿ ಸುಧಾರಿತ ಸ್ಫೋಟಕ ಪತ್ತೆಯಾಗಿದೆ. ಪೊಲೀಸರು, ಎನ್‌ಎಸ್‌ಜಿ, ಬಾಂಬ್ ನಿಷ್ಕ್ರಿಯ ದಳ ಸೇರಿ ಅದನ್ನು ನಿಯಂತ್ರಿತ ಸ್ಫೋಟದ ಮೂಲಕ ನಾಶಪಡಿಸಿದ್ದಾರೆ.

ಜನನಿಬಿಡ ಹೂವಿನ ಮಾರುಕಟ್ಟೆಯಲ್ಲಿ ಅನುಮಾನಾಸ್ಪದ ಬ್ಯಾಗ್ ಒಳಗೆ ಬಾಂಬ್ ಪತ್ತೆ
Linkup
ಹೊಸದಿಲ್ಲಿ: ಪೂರ್ವ ದಿಲ್ಲಿಯ ಹೂವಿನ ಮಾರುಕಟ್ಟೆಯೊಂದರಲ್ಲಿ ಶುಕ್ರವಾರ ಬೆಳಿಗ್ಗೆ ಅನುಮಾನಾಸ್ಪದವಾಗಿ ಬಿದ್ದಿದ್ದ ಚೀಲದಲ್ಲಿ ಪತ್ತೆಯಾಗಿದೆ. ಶಂಕಾಸ್ಪದ ಚೀಲದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಗಾಜಿಪುರ ಪ್ರದೇಶದ ಈ ಹೂವಿನ ಮಾರುಕಟ್ಟೆಯಲ್ಲಿ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಬಾಂಬ್ ನಿಷ್ಕ್ರಿಯ ದಳ, ಅಗ್ನಿಶಾಮಕ ತಂಡಗಳು ಮತ್ತು ರಾಷ್ಟ್ರೀಯ ಭದ್ರತಾ ಕಾವಲು () ಪಡೆಗಳನ್ನು ಸ್ಥಳಕ್ಕೆ ನಿಯೋಜನೆ ಮಾಡಲಾಗಿತ್ತು. ಬಾಂಬ್ ನಿಷ್ಕ್ರಿಯ ದಳವು ಬಾಂಬ್ ಅನ್ನು ತಟಸ್ಥಗೊಳಿಸುವಲ್ಲಿ ಯಶಸ್ವಿಯಾಗಿದೆ. ಅಪಾರ ಜನಜಂಗುಳಿ ಇರುವ ಈ ಪ್ರದೇಶದಿಂದ ಜನರನ್ನು ಹೊರಗೆ ಕಳುಹಿಸಿ ಸಂಪೂರ್ಣ ಸ್ಥಳವನ್ನು ನಿರ್ಬಂಧಿಸಿದ ಪೊಲೀಸರು, ನಿಯಂತ್ರಿತ ಸ್ಫೋಟ ನಡೆಸುವುದನ್ನು ಯಶಸ್ವಿಯಾದರು. ಮತ್ತು ಉತ್ತರ ಪ್ರದೇಶ ಗಡಿ ನಡುವಿನ ಪ್ರದೇಶದ ಮಾರುಕಟ್ಟೆಯಲ್ಲಿ ಎಂಟು ಅಡಿ ಆಳದ ಗುಂಡಿ ತೆಗೆದ ಪೊಲೀಸರು, ಅದರ ಒಳಗೆ ಬಾಂಬ್ ಅನ್ನು ಸ್ಫೋಟಿಸಿದರು. ಈ ಅನುಮಾನಾಸ್ಪದ ಚೀಲದ ಬಗ್ಗೆ ಬೆಳಿಗ್ಗೆ 10.30ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ದೊರಕಿತು. ದಿಲ್ಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಕೂಡಲೇ ಇತರೆ ತಂಡಗಳೊಂದಿಗೆ ಸ್ಥಳಕ್ಕೆ ಧಾವಿಸಿದರು. ಚೀಲದ ಒಳಗೆ ಪತ್ತೆಯಾದ ಸುಧಾರಿತ ಸ್ಫೋಟಕ ಸಾಧನವನ್ನು () ಎನ್‌ಎಸ್‌ಜಿ ತಂಡ ನಿಯಂತ್ರಿತ ಸ್ಫೋಟದ ಮೂಲಕ ನಾಶಪಡಿಸಿತು. ಮಧ್ಯಾಹ್ನ 1.45ರ ಸುಮಾರಿಗೆ ಅರ್ಥ್‌ಮೂವರ್ ನೆರವಿನೊಂದಿಗೆ ಆಳವಾದ ಗುಂಡಿ ತೋಡಿ ಅದರ ಒಳಗೆ ಐಇಡಿಯನ್ನು ಇರಿಸಲಾಯಿತು. ಬಳಿಕ ಗುಂಡಿಯನ್ನು ಮುಚ್ಚಿ ಐಇಡಿಯನ್ನು ನಿಷ್ಕ್ರಿಯಗೊಳಿಸಲಾಯಿತು. ಗ್ರಾಹಕನ ಸೋಗಿನಲ್ಲಿ ಬಂದಿರುವ ಯಾರೋ ಬ್ಯಾಗ್ ಅನ್ನು ಅಲ್ಲಿ ಇರಿಸಿರಬಹುದು ಎನ್ನಲಾಗಿದೆ. ಚೀಲವನ್ನು ಕಂಡ ಇತರೆ ಗ್ರಾಹಕರು ಮತ್ತು ಹೂವು ಮಾರಾಟಗಾರರು ಪೊಲೀಸರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಡೀ ಮಾರುಕಟ್ಟೆಯನ್ನು ಖಾಲಿ ಮಾಡಿಸಿದ್ದರು. ಸ್ಥಳಕ್ಕೆ ಶ್ವಾನದಳವನ್ನು ಕರೆಯಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ದಿಲ್ಲಿ ಪೊಲೀಸರು, ಇದು ಉತ್ತರ ಪ್ರದೇಶದಲ್ಲಿ ಫೆಬ್ರವರಿಯಲ್ಲಿ ಆರಂಭವಾಗಲಿರುವ ಚುನಾವಣೆಗೆ ಬೆದರಿಕೆ ಒಡ್ಡುವ ಸಲುವಾಗಿ ಮಾಡಿರುವ ಸಂಚು ಆಗಿರಬಹುದು ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.