HD Kumaraswamy | ಬಿಜೆಪಿ ವಿಜಯ ಸಂಕಲ್ಪ ಬದಲು ಸಿ.ಡಿ. ಸಂಕಲ್ಪ ಯಾತ್ರೆ ಮಾಡಲಿ: ಪಂಚರತ್ನ ಯಾತ್ರೆಗೆ ವ್ಯಂಗ್ಯವಾಡಿದ ಪ್ರಹ್ಲಾದ ಜೋಶಿಗೆ ತಿರುಗೇಟು

ಪಂಚರತ್ನ ರಥಯಾತ್ರೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಬಗ್ಗೆ ಕಿಡಿಕಿಡಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರು ವಿಜಯ ಸಂಕಲ್ಪ ಯಾತ್ರೆ ಬದಲು ಸಿ.ಡಿ.ಸಂಕಲ್ಪ ಯಾತ್ರೆ ಮಾಡಿದರೆ ಲೇಸು ಎಂದು ಕಟಕಿಯಾಡಿದ್ದಾರೆ. ಜೊತೆಗೆ ಕೇಂದ್ರ ಸಚಿವರಾಗಿ ಉತ್ತರ ಕರ್ನಾಟಕಕ್ಕೆ ಪ್ರಹ್ಲಾದ್ ಜೋಶಿ ಅವರ ಕೊಡುಗೆ ಏನು? ಅದೇ ಧೂಳು ತುಂಬಿದ ರಸ್ತೆಗಳು, ಸ್ವಚ್ಛತೆ ಇಲ್ಲದ ಗ್ರಾಮಗಳನ್ನು ಅವರು ಎಂದಾದರೂ ನೋಡಿದ್ದಾರೆಯೇ? ಮೋದಿ ಸರಕಾರದ ಸ್ವಚ್ಛ ಭಾರತದ ಹಣೆಬರಹ ಏನಾಗಿದೆ ಎನ್ನುವುದನ್ನು ಅವರು ಉತ್ತರ ಕರ್ನಾಟಕದ ಹಳ್ಳಿಗಳಿಗೆ ಹೋಗಿ ನೋಡಲಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

HD Kumaraswamy | ಬಿಜೆಪಿ ವಿಜಯ ಸಂಕಲ್ಪ ಬದಲು ಸಿ.ಡಿ. ಸಂಕಲ್ಪ ಯಾತ್ರೆ ಮಾಡಲಿ: ಪಂಚರತ್ನ ಯಾತ್ರೆಗೆ ವ್ಯಂಗ್ಯವಾಡಿದ ಪ್ರಹ್ಲಾದ ಜೋಶಿಗೆ ತಿರುಗೇಟು
Linkup
ಪಂಚರತ್ನ ರಥಯಾತ್ರೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ಬಗ್ಗೆ ಕಿಡಿಕಿಡಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರು ವಿಜಯ ಸಂಕಲ್ಪ ಯಾತ್ರೆ ಬದಲು ಸಿ.ಡಿ.ಸಂಕಲ್ಪ ಯಾತ್ರೆ ಮಾಡಿದರೆ ಲೇಸು ಎಂದು ಕಟಕಿಯಾಡಿದ್ದಾರೆ. ಜೊತೆಗೆ ಕೇಂದ್ರ ಸಚಿವರಾಗಿ ಉತ್ತರ ಕರ್ನಾಟಕಕ್ಕೆ ಪ್ರಹ್ಲಾದ್ ಜೋಶಿ ಅವರ ಕೊಡುಗೆ ಏನು? ಅದೇ ಧೂಳು ತುಂಬಿದ ರಸ್ತೆಗಳು, ಸ್ವಚ್ಛತೆ ಇಲ್ಲದ ಗ್ರಾಮಗಳನ್ನು ಅವರು ಎಂದಾದರೂ ನೋಡಿದ್ದಾರೆಯೇ? ಮೋದಿ ಸರಕಾರದ ಸ್ವಚ್ಛ ಭಾರತದ ಹಣೆಬರಹ ಏನಾಗಿದೆ ಎನ್ನುವುದನ್ನು ಅವರು ಉತ್ತರ ಕರ್ನಾಟಕದ ಹಳ್ಳಿಗಳಿಗೆ ಹೋಗಿ ನೋಡಲಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.